ಪುಟ:ಬೃಹತ್ಕಥಾ ಮಂಜರಿ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೪) ಬೃ ಹ ತ ಥಾ ನು 6 ಜಿ ರಿ ೫ ಮಾದಿತ್ಯನಂ ತನ್ನ ಅಂತಃಪುರಮಂ ಹೊಗಿಸಿ ರತ್ನ ಪಠ್ಯ೦ಕದೊಳು ಮಲಗುವಂತೆ ನಿಯಮಿಸಿ ತಾನು ಮಣಿ ಮಂಚಾಸೀನಳಾಗಿ ಇಬ್ಬರ ಮಧ್ಯದೊಳು ಕಾಂತಸ ಜಮಂ ಬಿಡಿಸಿ ಮನಧಾರಿಣಿಯಾಗಿ ಕುಳಿತುಕೊಳ್ಳಲು ವಿಕ್ರಮಾದಿತ್ಯರಾಯನು ತನ್ನ ಬಳಿ ಇರುವ ಭೇತಾಳನಂ ಕರೆದು ಎಲೈ ಪರಮಾಪ್ತನೇ ! ನನಗೆದುರಾಗಿ ಮಂಚ ದೂಳು ಕುಳಿತಿರುವ ಪದ್ಮಾವತಿಯನ್ನು ಮಾತನಾಡಿಸಿ ನನ್ನ ಮನಸ್ಸನ್ನು ಸಂತೋಷ ಗೊಳಿಸಬೇಕು ಇದಕ್ಕಾಗಿ ನಮ್ಮಗಳ ಮಂಚದಮಧ್ಯದೊಳಿರುವ ಕಾಂಡಸದದ ಪಕ್ಷಿ ಮೃಗಾದಿಗಳೊಳು ನೀ ಸೇರಿಕೊ - ಅತ್ಯಾಶ್ಚರಂಗಳಾದ ಕಥೆಗಳಂ ಕೇಳಿದರೆ ಕಾ ರವು ಅನುಕೂಲಿಸುವದು ಎಂದಮಾತಿಗೆ ಮಹಾಪ್ರಸಾದವೆಂದು ಭೇತಾಳನು ಆ ಕಾಂ ರಸದಿವಂ ಸಾರಿದನು. ಆಗ ವಿಕ್ರಮಾರ್ಕನು ನಿದ್ದೆ ಬಾರದವನ೦ತಭಿನಯಿಸುತ್ತಾ ಹೇಳುತ್ತಾನೆ ಎಲೆ ಕಾಂಡಪದ ಚಿತ್ರಸ್ಥ ಶಕವೇ ಹೊತ್ತು ಹೋಗದು ನಿದ್ದೆ ಬಾರದು ಪದ್ಮಾವತಿಯಾದ ರೋ ಮಾತನ್ನೇ ಆಡಳು ನೀನಾದರೂ ಕರುಣಿಸಿ ಹೊತ್ತುಹೋಗುವಂತೆ ಒಂದು ಕ ಥಯಂ ಪೇಳೆನಲು ಭೇತಾಳನು ಕಾಂಡಸದಸ್ಯ ಚಿತ್ರದ ಗಿಣಿಯಾಕಾರಮಂತಾಳಿ ಕಥೆ ಯಂ ಪೇಳತೊಡಗಿದನ ದೆಂತೆನೆ. ಚಿತ್ರದಗಿಣಿಯು ಪೂರೈಯಾನದಲ್ಲಿ ಹೇಳುವ ಕಥೆ ಎಲೈ ವಿಕ್ರಮಾಕ೯ಮಹಾರಾಯನೇ ಕೇಳು ! ಗಾಂಧಾರ ದೇಶಾಧಿಪತಿಯಾದ ದೇವಶೇನನೆಂಬ ರಾಯನು ಆ ದೇಶಕ್ಕೆ ರಾಜಧಾನಿಯಾಗಿಯೂ ಸಕಲ ಸಂಪತ್ತುಗ ಳಿಂದೊಡಗೂಡಿದ ಕರವೀರಪುರವೆಂಬ ಪೊಳಲಂ ಸಮಸ್ತರಾಜಧರ್ಮಂಗಳನಾಶ್ರಯ ಸಿ ಪ್ರಜೆಗಳ ಹಿತಚಿಂತಕನಾಗಿ ಪರಿಪಾಲಿಸುತಿರ್ದನು. ಹೀಗಿರುವಲ್ಲಿ ಆತನ ಧರ್ಮ ಪತ್ನಿಯಾದ ಸುಮತೀ ದೇವಿಯ ಗರ್ಭಾಂಬುಧಿಯೊಳು ಸುಭಾನು, ಉದಯಭಾನುಗ ಳಂಬೀರೂರು ಸುಕುಮಾರರು ಮನ್ಮಥ ಜಯಂತರನ್ನು ಜರಿಯುವ ರೂಪಲಾವಣ್ಯ ಯುಕ್ತರಾಗಿ ಜನಿಸಿದರು. ಆ ಧರೆಗೆ ರಾಜಕಾರನಿರ್ವಾಹನಾಗಿಯೂ, ಸ್ವಾಮಿ ಭಕ್ತಿಸಂಯುಕ್ತನಾಗಿಯೂ, ಸಕಲಕಲಾಪ್ರವೀಣನಾಗಿಯೂ, ಸಕಲಶಕ್ತಿಸಂಯುತ ನಾಗಿಯೂ ಇರುವ ಅಕಳಂಕನೆಂಬ ಮಂತ್ರಿಯೋರನಿರುತಿರ್ದನು. ಆ ಮಂತ್ರಿಗೆ ದುರ್ಜಯನೆಂಬ ಗುಣನೊರನಿರುತಿರ್ದ೦, ಆ ಮಂತ್ರಿ ಕುವರ ನು ಆ ಬಾಲ್ಯ ಮಾಗಿ ಆ ರಾಜಕುಮಾರನೊಂದಿಗೆ ಅಸ್ತ್ರಶಸ್ತ್ರಾದಿ ಸಕಲಕಲೆಗಳನ್ನು ಭ್ಯಾಸಮಾಡುತ್ತಾ ಅವರೊಂದಿಗೆ ಬಹುಸcಬ್ರತಿಯ೦ತೋರುತ್ತಾಅ೦ತಹತನಗಿರುವ ದುಗೈಯಂ ಹೊರಪಡಿಸದೆ ಕಪದಿಮಿತ್ರನಾಗಿರ್ದ೦, ಆ ರಾಜಕುಮಾರರಾದರೋ ಈ ಕಪಟವನ್ನರಿಯದೆ ಆ ಮಂತ್ರಿ ಕುಮಾರನೊಳು ಅತ್ಯಂತ ಅನುರಾಗನಂಬಿಕೆಗಳಿಂದ ವರ್ತಿಸುತ್ತಿದರು. ಹೀಗಿರುತ್ತ ಆ ರಾಯನ ಜೈಷ್ಣಕುಮಾರನಾದ ಸುಭಾನುವಂ ಬುವನು ಪ್ರಾಯಸಮರ್ಥನಾಗಲು, ವಿವಾಹವಂ ಮಾಡಬೇಕೆಂದಾಲೋಚಿಸಿ ಅಪ್ಪ