ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೬ ಭced1 atಹಾಸವು. ಮೇಲೆ ಮಡಿದ ಲಕ್ಷಾವಧಿ ವೀರರ ಶವಗಳನ್ನು ಪಶು ಪಕ್ಷಿಗಳಿಗೆ ಆಹಾರ ವಾಗಲೆಂದು ಹಾಗೇ ಬಿಟ್ಟಿರುತ್ತಿದ್ದರೆಂದು ತಿಳಿಯುತ್ತದೆ. ದೊಡ್ಡ ದೊಡ್ಡ ರಾಜರುಗಳ ಶವಗಳನ್ನು ಸಹ ರಣಹದ್ದು, ತೋಳ, ನರಿ, ಕಾಗೆ ಮೊದ ಲಾದವುಗಳು ಹರಿದು ತಿನ್ನುತ್ತಿರುವ ಸಂಗತಿಯನ್ನು ಗಾಂಧಾರಿಯು ಯುದ್ಧ ಮುಗಿರನ೦ತರ ವರ್ಣಿಸಿರುವಳು. ರಣ ಭೂಮಿಯಲ್ಲಿ ದೇಹವಿ ವನ ದೆಸc = ೯ಣ್ಣೀರಿಡಕೂಡದು; ಅವನಿಗೆ ಅನ್ನ ನೀರು ಕೊಡ ಕೂಡದು; ಅವನು ಸತ್ತನೆಂದು ಆಶೌಚಹಿಡಿದು ಸ್ನಾನ ಕೂಡ ಮಾಡ ಕೂಡದೆಂದು ಹೇಳಿದ್ದರ ಮೇಲಿಂದ ಅದು ಎ೦ಧ ಪುಣ್ಯದ ಫಲವೆಂಬ ಅವರ ಭಾವನೆ ಇತ್ತೆಂಬುದು ಮೇಲೆಯೇ ಅದೆ. ಹೀಗೆ ವರ್ಣ ನೆದ್ದರೂ, ವಾಡಿಕೆಯಾಗಿ ಸತ್ತರೆ ದಹನ ಮಾಡುವ ವಿಧಿಯೇ ಇದ್ದಿತು. ಭೀಷ್ಮಾಚಾರ್ಯರು ಮಡಿದಾಗ ಅವರ ಪ್ರೇತಸಂ ನಾರವ ದಹನ ವಿಧಿಯಿಂದಲೇ ಆದಿ ತ೦ತೆ! ಮೊದಲು ಧರ್ಮ ಹಾಗೂ ಮತ ಇವರಿರ್ವರೂ ಸೇರಿ ಪಿತಾಮಹನ ಪ್ರೇತ ವನ್ನು ಚಿತೆಯ ಮೇಲಿಟ್ಟು, ಅದನ್ನು ರೇಷ್ಮೆವಸ್ತ್ರ ಹಾಗೂ ಹಣ ಗಳಿಂದ ಮುಚ್ಚಿದರು; ತರುವಾಯ ಭೀಮಾರ್ಜುನರು ಮೇಲೆ ಚೌರಿಗಳನ್ನು ಬೀಸಿದರು; ಕೌರವ ರು ತಾಡವಾಲಿಯ ಬೀಸಣಿಕೆಗಳಿಂದ ಗಾಳಿ ಹಾಕಲಿಕ್ಕೆ ಹತ್ತಿದರು; ನಾ ಮಗಾ ಯ ಕರು ಸಾಮಗಾನ ಹೇಳಿದರು. ನಂತರ ಚ೦ಪಕಕಟ್ಟಿಗೆಗಳಿ೦ದ ದೇಹವನ್ನು ಮುಚ್ಚಿ ಅಗ್ನಿಯನ್ನು ಹಚ್ಚಿದರು. ಸರ್ವರೂ ಪ್ರದಕ್ಷಿಣೆ ಹಾಕಿದ ನಂತರ ಗಂಗಾ ನದಿಗೆ ಹೋಗಿ ತಿಲತರ್ಪಣೆ ಕೊಟ್ಟರು. ಈಗಿನ ಪದ್ಧತಿಗೆ ಇದು ಹೋಲು ಇದೆ. ರಾಜಕೀಯ ಸ್ಥಿತಿ:- ಭಾರತಕಾಲೀನ ಸಾಮಾಜಿಕ ಪರಿಸ್ಥಿತಿ ಯನ್ನರಿತುಕೊಳ್ಳಬೇಕೆ೦ದೆನಿಸುವರು ಎಷ್ಟು ಸ್ವಾಭಾವಿಕವಿರುವದೋ, ತತ್ಕಾಲೀನ ರಾಜಕೀಯ ಸ್ಥಿತಿಯನ್ನಾದರೂ ತಿಳಿದಿರುವದು ಅಷ್ಟೇ ಸ್ವಾಭಾವಿಕವೂ, ಬೋಧಪ್ರದ ಈ ಅಗಿದೆ; ಆದುದರಿಂದ ಇನ್ನು, ರಾಜ ಕೀಯ ಸ್ಥಿತಿಯ ಕಡೆಗೆ ಹೊರಳುವಾ. ದಿಕಕಾಲದಿಂದ ಭಾರತ ಕಾಲದ ವರೆಗೂ ಭರತಖಂಡದೊಳಗೆ ಏಕ ಛತ್ರ ಸಾಮ್ರಾಜ್ಯವಿರದೆ,