ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯರ ಇತಿಹಾಸವು. ವರೆಗೂ ಎಲ್ಲರು ಒುದ್ಧ ಧರ್ಮದ ಅನುಯಾಯಿಗಳೆ ಆದ್ದರಿಂದ ಬ್ರಾಮ್ಮಣವಿದ್ಯೆ, ಬ್ರಾಹ್ಮಣಭಾಷೆಯಾದ ಸಂಸ್ಕೃತವನ್ನು ಯಾರೂ ಕೇಳದಂತಾದರು. ಬುದ್ಧ ಧರ್ಮವಿಹು ಒಬ್ಬರು ಬಳಿಸುತ್ತಿದ್ದ ಪಾ ಭಾಷೆಗೆ ವಿಶೇಷ ಮರ್ಯಾದೆಂದು ಕಾಣುತ್ತದೆ. ಬುದ್ಧ ದೇವನು ಯಜ್ಞಯಾಗಾದಿಗಳನ್ನು ಜರಿಯುತ್ತಿದ್ದುದರಿಂದ ವೈದಿಕ ದೇವತೆ ಗಳ ಬಗ್ಗೆ ಸಾಮಾನ್ಯವಾಗಿ ಜನರಲ್ಲಿ ಅದರವಿರಲಿಲ್ಲ. ಹೀಗೆ ಬುದ್ಧ ದೇವನ೦ತಹ ಧರ್ಮಾವತಾರನಾದ ವಿಭೂತಿಯುಳ್ಳ ಪುರುಷನಿಂದಲೂ, ಆ ಮೇಲೆ ಜನಸಾಮಾನ್ಯರಿಂದಲೂ ನಿಂದೆಗೆ ಗುರಿಯಾದ ಬ್ರಾಮ್ಮಣ ಧರ್ಮವನ್ನು ಪುನಃ ಪುರೋಭಿವೃದ್ಧಿಗೆ ಹೇಗೆ ತರಬೇಕೆಂಬುದೊಂದು ಒಳ್ಳೇ ಬಿಕ್ಕಟ್ಟಿನ ಕಾರ್ಯವೇ ಆಗಿತ್ತು. ಬೌದ್ಧ ಧರ್ಮದಂತಹ ಸುಲಭ ಧರ್ಮವು ಒ೦ದೆಡೆಯಲ್ಲಿ ಮನಸನ್ನು ಎಳೆಯುತ್ತಿದ್ದ ಸಮಯದಲ್ಲಿ ಬ್ರಾಮಣ ಧರ್ಮದಂತಹ ಕಷ್ಟ ಸಾಧ್ಯವಾದ ಧರ್ಮಕ್ಕೆ ಜನರ ಮನಸು ಸೋಲುವದರಲ್ಲಾ ಶ್ವರ್ಯವೇನು ? ಇ೦ಧ ಸ್ಥಿತಿಯೊಳಗಿ೦ದ ಒ೦ದಿ ಲ್ಲೊಂದು ಉಪಾಯ ದಿಂದ ಜನರನ್ನು ತಮ್ಮ ಕಡೆಗೆ ಒಲಿಸಬೇಕೆಂಬ ಹವಣೆಯಿ೦ದ ಕಲ್ಪಕರಾದ ಬ್ರಾ ಮಣರು ಹೊಸ ದೇವತೆಗಳನ್ನು ಕಲ್ಪಿಸಿ, ಅದಕ್ಕನುಗುಣವಾಗಿ ತಮ್ಮ ವಾ ಬ್ಯಯವನ್ನು ರಚಿಸಿದರು. ಯಜ್ಞ ಕರ್ಮದ ಗೊಂದಲಕ್ಕೆ ಸಿಲುಕದೆ, ಸಾಮಾನ್ಯ ಜನರ ಮನಸಿಗೆ ಹಿಡಿಯುವಂಥ ಕಾವ್ಯಮಯವಾದ ವಾ ಬ್ಯಯ ವನ್ನು ಬರೆಯಲಿಕ್ಕೆ ಬದ್ಧ ಕಂಕಣ ರಾದರು. ಹಳೆ ಸಂಗತಿಗಳನ್ನೇ ಹೊಸ ವಾಲ್ಮೀಯವೆಂಬ ಹೊದಿಕೆಂದಿ೦ದ ಹೊದಿಸಿ, ಜನರನ್ನಾ ಕರ್ಷಿಸುವ ಭರದೊಳಗೆ ಬ್ರಾಮ ಣರ ಐತಿಹಾಸಿಕ ದೃಷ್ಟಿಯು ಅಂಧವಾಮಿ ತೆನೂ ನಿಜ; ಆದರೆ ರಾಮ ಕೃಷ್ಣಾದಿ ವಿಭೂತಿ ವಿಶೇಷಗಳ ಮಹಿಮೆಯನ್ನು ಕಾವ್ಯಮಯವಾಗಿ ಬಣ್ಣಿಸಿ, ಹಾಡತೊಡಗಿದ್ದು ದೇ ಬ್ರಾಹ್ಮಣ ಸಂಸ್ಕೃತಿಯನ್ನು ಕಾಯಲಿಕ್ಕೆ ಬ್ರಾಮೃ ಣರಿಗೊ೦ದು ತರಣೋಪಾಯವಾಗಿ ಪರಿಣಮಿಸಿತು. ಬೌದ್ಧರು ಇತ್ತ ತಮ್ಮ ಧರ್ಮಸ್ಥಾಪಕನಾದ ಬುದ್ಧನನ್ನು ಹೊಗಳಿ ಹಾಡುತ್ತಿರು ವಾಗ್ಗೆ ಬ್ರಾಮ್ಮಣರೂ ಅದಕ್ಕೆ ಸರಿಯಾಗಿ, ರಾಮ ಕೃಷ್ಣಾದಿಗಳ ಪವಾಡ ಗಳನ್ನು ಮನಸೊಲಿಯು ವಂತೆ ಹಾಡತೊಡಗಿದರಿ೦ದಲೇ ವೈದಿಕ d ) 20 0.