ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1 ನವಿದರನ್ನು ನಿರ್ಮ ಲಗೊಳಿಸಲು ನಿಶ್ಚ .... ಸ್ವೀಕರಿಸಬೇಕೆಂದು ಬಿನ್ನವಿಸಿಕೊಂಡನು. ರಾ ಜಲಕ್ಷಣಗಳೆಂದೂ ಪ್ಪುವ ಚಂದ್ರಗುಪ್ತನ ಮುಖಕಾಂತಿಯನ್ನೂ, ವಿನಯ ವನ್ನೂ ಚೆನ್ನಾಗಿ ನೋಡಿ ಚಾಣಕ್ಯನು ಆನಂದ ಪಟ್ಟು ಅವನ ಬಿನ್ನಹವನ್ನು ಮನ್ನಿಸಿ, ನಡೆ ದನು. ಚಂದ್ರಗುಪ್ತನ ಬೀ ಡಾರಕ್ಕೆ ಹೋಗಿ ವಿಶ್ರಮ ಸಿದೊಡನೆ, ಚಂದ್ರಗುಪ್ತನು ಬ್ರಾಮ್ಮಣೋತ್ತಮನಾದ ಚಾಣಕ್ಯನಿಗೆ ಸ್ನಾನಾನ್ತಿಕ ಭೋಜನದ ಏರ್ಪಾಟು ಮಾಡಿಸಿದನು. ಊಟವಾದ ಮೇಲೆ ಆ ಬ್ರಾಹ್ಮ ಣನು ಕೊಂಚ ವಿರಾಮ ಗೈಯುತ್ತಿರಲು ಚಂದ್ರ ಗು ಸ್ತನು ಆತನ ಪಾದಗ ಳನ್ನು ಒತ್ತುತ್ತ ಕುಳಿತುಕೊಂಡನು. ಚಂದ್ರಗುನ್ಯನು ತನ್ನ ದುರದೃಷ್ಟದ ದೆಸೆಯಿಂದ ಯಾವಾಗಲೂ ಒಂದು ಬಗೆಂದಿ ೦ದ ಶಿನ್ನ ಮನಸ್ಸಿನಿಂದಲೇ ಕಾಲಕಳೆಯುತ್ತಿದ್ದುದರಿಂದ, ಅವನಲ್ಲಿ ಯಾವುದೋ ಒಂದು ಅಡಿ ತೋ ರಿಸದ೦ಧ ವ್ಯಥೆಯು ಶರೀರವನ್ನು ಸುಡುತ್ತಿರುವಂತೆ ಇದ್ದಿತು. ಇದರ ಇ೦ಗಿತವನ್ನ ರಿಯಲು ಆರ್ಯ ಚಾಣಕ್ಯನು ದುಃಖದ ಕಾರಣವೇನೆಂದು ಕೇಳಲು ನಂದರು ನಗಿಸಿದ ಅನ್ಯಾಯಾಚರಣೆಯ ಸಂಗತಿಯೆಂದು ತಿಳಿ ಯಿ ತು. ನಂದರನ್ನು ನಿರ್ಮ ಲಗೊಳಿಸಲು ನಿಶ್ಚಯ:- ಅಗ ನ೦ದ ರನ್ನು ಯಾವ ಹಂಚಿಕೆಂದ ಪಾತಾಳಕ್ಕೆ ಮೆಟ್ಟಬೇಕೆಂಬ ಯೋಚ ನೆಯು ಚಾಣಕ್ಯನ ಮನಸಿನಲ್ಲಿ ಕುದಿಯಲಾರಂಭಿಸಿತು. ನಂದರನ್ನು ರೇಗಿಸಿ, ಅವರ ಸತ್ವ ಪರೀಕ್ಷೆ ಮಾಡಬೇಕೆಂದೆಣಿಸಿ, ಒಂದು ದಿನ ಚಾಣಾಕ್ಷನಾದ ಚಾಣಕ್ಯನು ನ೦ದರ ಮನೆಗೆ ಊಟಕ್ಕೆಂದು ಹೋಗಿ, ಬ್ರಾಮ್ಮಣರು ಕುಳಿತಿರುವ ಸ೦ಯೋಳಗೆ ತಾನು ಕುಳ್ಳಿರದೆ, ಸದರಿ ಗಾಗಿ ಸಿದ್ಧಪಡಿಸಿದ ದಿವ್ಯವಾದ ಚಿನ್ನದ ಗದ್ದುಗೆಯ ಮೇಲೆ ಒಳ್ಳೆ ಆಧ್ಯತೆ ೦ದ ಕಾಲಮೇಲೆ ಕಾಲು ಹಾಕಿಕೊಂಡು ಕುಳಿತನು. ಅಷ್ಟ ರಲ್ಲಿ ನಂದರೂ ಬಂದು ನೋಡುತ್ತಾರೆ; ಒಬ್ಬ ಹಾರುವನು ತಮಗಾಗಿ ಏರ್ಪಡಿಸಿಟ್ಟ ಪೀರದ ಮೇಲೆ ಯಾರನ್ನೂ ಲೆಕ್ಕಿಸದೆ ಕುಳಿತಿರುವದನ್ನು ಕ೦ಡು, ಆ ಬ್ರಾಹ್ಮಣನ ತೇಜವನ್ನು ಲಕ್ಷಿಸದೆ, ಮ ನ್ಮತ್ತರಾಗಿ ಆತನನ್ನು ಕೆಳಕ್ಕೆ ದಬ್ಬಿ ಹಾಕಿಸಿದರು. ಈ ಮಾನಭ೦ಗದಿ೦ದ ಕೆ೦ಪಾಗಿ ಆರ್ಯ ಚಾಣಕ್ಯನು ಕಣ್ಣುಗಳಿ೦ದ ಕಿಡಿಗಳನ್ನು ಕಾರುನಂದರನ್ನು,