ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಿಗ್ವಿಜಯಿಯಾದ ಸಮುದ್ರಗುಪ್ತನು, ೨೫೫ ಕಣ್ಣುಗಳಿಂದ ಇಡೀ ಜನಾ೦ಗದ ಸ್ಥಿತಿಯನ್ನು ಮುoಗಂಡು ಎಲ್ಲರೂ ನೋಡುತ್ತಿರುವ ಹಾಗೆ ಈಗಿನ ಉತ್ತರಹಿ೦ದು ನ್ಯಾನದ ಎಲ್ಲ ಭಾಗ ವನ್ನೂ, ದಕ್ಷಿಣಹಿಂದು ಸ್ಥಾನದ ಅರ್ಧಕರ್ಧ ಭಾಗವನ್ನು ಗೆದ್ದು ಕೊ೦ಡ ದೃಲ್ಲದೆ, ಹಿಂದೂ ದೇಶದಾಚೆಗಿರುವ ಸಿಧಿಯ ನ್ ರಾಜರ ಸ೦ಗಡಲೂ, ಸಿ೦ಹಲದ್ವೀಪದಂತಹ ಬೇರೆ ದೂರಿನ ದ್ವೀಪಾ೦ತರಗಳಲ್ಲಿರುವ ರಾಜರ ಕೂಡಲೂ, ಈ ತನು ಹೊಕ್ಕು ಬಳಿ ಕೆಯನ್ನಿಟ್ಟು ಕೊಂಡಿದ್ದನು. ಇಷ್ಟೆಲ್ಲ ರಾಜ್ಯ ವಿಸ್ತಾರವನ್ನು ತನ್ನ ಒಲೆಯಲ್ಲಿ ರಿಸಲಿಕ್ಕೆಂದು ಅವನು ಒಂದೊಂದು ಸಲ ಒಂದೊಂದು ದಿಕ್ಕಿಗೆ ದಂಡಯಾತ್ರೆ ಹೊರಡಿಸಿ, ಏಳು ಮೆಟ್ಟಿನ ಹುಲಿಯು ತನ್ನ ಕಣ್ಣಿಟ್ಟ ಬೇಟೆಯನ್ನು ಬಹು ಸುಲಭವಾಗಿ ಸಾಧಿಸು ವಂತೆ ಈ ತನು ಗೆದ್ದ ಅಯಾ ರಾಜರುಗಳನ್ನು ತನ್ನ ನಾರ್ವಭೌಮತ್ವ ವನ್ನು ಒಪ್ಪಲಿಕ್ಕೆ ಹಚ್ಚಿದನು; ಮತ್ತು ಈ ದಿಗ್ವಿಜಯದ ನಿಮಿತ್ತವನ್ನು ಮಾಡಿಕೊಂಡು, ಪ್ರಾಚೀನರ ಪದ್ಧತಿಯಂತೆ, ಅಶ್ವಮೇಧಯಾಗವನ್ನು ಮಾಡಿ ಅಗ್ನಿಕುಂಡದ ಮುಂದೆ ಯ ದ ಕುದುರೆಯು ನಿಂತಿರುವ ಚಿತ್ರ ದಿ೦ರೊಡಗೂಡಿದ ಚಿನ್ನದ ಪದಕಗಳನ್ನು ಬ್ರಾ ಮೈ ಣರಿಗೆ ದಾನವಾಗಿ ಕೊಟ್ಟನು. ಅವುಗಳಲ್ಲಿ ಕೆಲವೀಗ ಸಿಕ್ಕಿವೆ. ಸಮುದ್ರಗುಪ್ತನು ಸಾಹಿತ್ಯ ರಲ್ಲಿ ಹೇಗೋ ಹಾಗೇ ಸ೦ಗೀತ ಕಲೆಯಲ್ಲಿಯೂ, ಒಲವಳ್ಳವನಾದ್ದ ರಿಂದ ಬಹು ರಸಿಕ ನಿದ್ದನು. ವೈದಿಕ ಧರ್ಮದಲ್ಲಿ ಆತನ ಭಕ್ತಿಯು ನಿಮ್ಮ ಟವಾಗಿದ್ದರೂ, ಬೌದ್ಧ ಮತ ತತ್ವಗಳನ್ನೆಲ್ಲ ವಸು ಬ೦ಧು ಎಂಬ ಬೌದ್ಧ ಸಾ ಧುವಿನಿಂದ ತಿಳಿಸಿಕೊ೦ಡಿದ್ದನು. ಸಮುದ್ರಗುಪ್ತನ ಒಮ್ಮೊಲಗದ ಕವಿಯಾದ ಹರಿಸೇನನೆಂಬವನು ಈ ಚಕ್ರವರ್ತಿಯನ್ನು ಕುರಿತು, ಗದ್ಯ ಪದ್ಯಮಯವಾಗಿ ವರ್ಣಿಸಿದ ಸಂಗತಿಗಳು ಇನ್ನೂ ದೊರಕುತ್ತವೆ; ಅವುಗಳನ್ನು ನೋಡಿದರೆ, ಈ ತನು ಹಿಂದು ನ್ಯಾನದ ಎರಡನೇ ಚಕ್ರ ವರ್ತಿಯೆನ್ನಲು ಅಡ್ಡಿಯಿಲ್ಲ. ಆ ಶೋಕನ ತರುವಾಯ ಭರತಖಂಡ ವನ್ನೆಲ್ಲ ತನ್ನ ಅಧೀನಕ್ಕೊಳ ಪಡಿಸಿದ ರಾಜನೆಂದರೆ ಸಮುದ್ರಗುಪ್ತನೇ ಸರಿ, ೫೦ ವರ್ಷ ಕಾಲ ಅತ್ಯಂತ ವೈಭವದಿಂದಲೂ, ಮಿಕ್ಕ ರಾಜರಂತೆ ಮೆತ್ತನ್ನ ಹಾಸಿಗೆಯ ಮೇಲೆ ಉರುಳಾಡಿ ಕಾಲಕಳೆಯದೆ ವೀರನಿಗುಚಿತ ವಾದ ಶಿರದಿಂದ ರಾಜ್ಯಭಾರವನ್ನು ನಿರ್ವಹಿಸಿ,ಕ್ರಿ.ಶ. ೩೭೫ರಲ್ಲಿ ಮಡಿದನು, .