ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧ನೇ ಪ್ರಕರಣ.


ಹಿಂದೂದೇಶದ ಸಿರಿಗಾಲವು.

(ಕ್ರಿ. ಶ. ೬೦-೭೦೦ ವರೆಗೆ)

ಕತ್ತಲೆಗಾಲ:-ಗುಪ್ತವಂಶದ ರಾಜ್ಯರಾಳಿಹೋದ ನಂತರದಲ್ಲಿ ಒಂದು ನೂರು ವರ್ಷದ ಇತಿಹಾಸವು ಮಟ್ಟಿಗೆ ನಮ್ಮ ಪಾಲಿಗೆ ಕತ್ತಲೆಯಲ್ಲಡಗಿ ಹೋಗಿದೆ. 'ಈ ಕತ್ತಲೆಗಾಲದೊಳಗೆ ಹಿಂದೂದೇಶದ ಇತಿಹಾಸವನ್ನು ಬೆಳಗಿಸುವಂಧ ಯಾವ ಮಹನೀಯ ಪುರುಷರೂ ಆಗಲಿಲ್ಲ; ಅಥವಾ ಬೇರೆ ಯಾವ ಇತಿಹಾಸಗಾರರೂ ಹುಟ್ಟಲಿಲ್ಲ; ಹೀಗಾಗಿ ಅದು ನಮ್ಮ ಪಾಲಿಗೆ ಮಾತ್ರ ಕಾಲವಾಗಿಯೇ ಉಳಿದು ಹೋಯಿತು. ಮು೦ದೆ ಬರುವ ಬೆಳಕಿನ ಸುಚಿನ್ಹವನ್ನು ಜ್ಞಾಪಕಕ್ಕೆ ತಂದುಕೊಂಡರೆ ಈಗಿನ ಕತ್ತಲೆಗಾಲವೆಂದರೆ ಒಂದು ಬಗೆಯಿಂದ ಬೆಳಗುಬಾವದ ಕತ್ತಲೆಯೇ ಎ೦ದೆನ್ನಬಹುದು. ಕತ್ತಲೆಯೊಳಗಿ೦ದ ಕನಸು ಕ೦ಡು ಪಾರಾಗದೆ ಬೆಳಕಿನಂತಹ ಬೇಗುಬೆಳಗಾಗುವ ಸಿರಿಗಾಲನ್ನು ಕಣ್ಣಿನಿಂದ ಕಾಣಲಿಕ್ಕೆ ಸಾಧ್ಯವೆ೦ತು ! ಒಟ್ಟಾರೆ, ಈ ಕಾಲಕ್ಕೆ ಉತ್ತರ ಹಾಗೂ ದಕ್ಷಿಣ ಹಿಂದೂದೇಶದೊಳಗೆ ಅಲ್ಲಲ್ಲಿ ಚಿಕ್ಕ ಚಿಕ್ಕ ರಾಜ್ಯಗಳಿದ್ದು, ಅಲ್ಲಿಯ ಪಾಳ್ಯಗಾರರು ತಮ್ಮ ಪಾಲಿಗೆ ಬಂದಿರುವ ಪ್ರದೇಶವನ್ನು ಒಂದೇ ಮನೆಯೊಳಗಿನ ಅಣ್ಣತಮ್ಮಂದಿರಂತೆ ಒಂದು ಕ್ಷಣ ಬಡಿದಾಡುತ್ತಲೂ, ಮತ್ತೊಂದು ಕ್ಷಣಕ್ಕೆ ಮಾತಾಡುತ್ತಲೂ ಆಳಿಕೊಂಡಿದ್ದರು. ಉತ್ತರದಲ್ಲಿ ರಾಜಪುತ್ರರು (ರಜಪುತ) ತಲೆಯೆತ್ತಲಿಕ್ಕೆ ಪ್ರಾರಂಭಿಸಿದ್ದರು.ವ್ಹಿನ್ಸಂಟಸ್ಮಿಥರ೦ಥ ಇತಿಹಾಸಗಾರರು "ರಜಪುತರು ಹೂಣರ೦ತೆ ಬೇರೆ ದೇಶದಿಂದ ಹಿಂದುಸ್ಥಾನಕ್ಕೆ ಬಂದವರೆಂದೂ, ಇಲ್ಲಿ ಬಂದು ಬಲವಾಗುತ್ತಿರುವ ವೈದಿಕ ಸಂಸ್ಕೃತಿಯನ್ನು ಉದ್ಧಾರ ಮಾಡಿ, ತಾವು ಸ್ವತಃ ಯಜ್ಞಯಾಗಾದಿಗಳಲ್ಲಿ ವಿಶೇಷವಾದ ಆಸ್ಟೆಯನ್ನು ತೋರ್ಪ