ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮೪

ಭಾರತೀಯರ ಇತಿಹಾಸವು.

ದಾಗ್ಗೆ ಜಪಾನದ ಮಂತ್ರಿಯೊಬ್ಬನು ಗುಂಡು ಹಾಕಿಕೊಂಡು ಸತ್ತ ಸ೦ಗತಿಯು ಪ್ರಸಿದ್ಧವಿದೆ. ಧೊರೆಯ ದೆಸೆಯಿಂದ ಪೂರ್ವಿಕರಲ್ಲಿ ತಮ್ಮ ಜೀವವನ್ನು ಸಹ ನಿವಾಳಿಸಿ ಒಗೆಯುವಂಧದೊಂದು ಲೋಕೋತ್ತರವಾದ ಸ್ವಾಮಿಭಕ್ತಿಯೂ, ಸಖ್ಯಭಕ್ತಿಯೂ ಇರುವದು ನಿಶ್ಚಯವಾಗಿಯೂ ಬಣ್ಣಿಸಲಾಗದ ಮಾತೇ ಸರಿ. ಹಿಂದೂಜನರ ತತ್ಕಾಲೀನ ಮನಸಿನ ಒಲವು ಬಲಗಳು ಎಷ್ಟು ಸೂಕ್ಷ್ಮ ಮತ್ತು ಕಾಲನಿಗೂ ಒಲಿಸತಕ್ಕ ಮಾತಾಗಿದ್ದವೆಂಬುದು ಮಾದರಿಗಾಗಿ ಮೇಲ್ಕಾಣಿಸಿದ ಮಾತುಗಳಿಂದ ವ್ಯಕ್ತವಾಗುತ್ತದಲ್ಲವೇ ?

ಶಿಕ್ಷಣ ಪದ್ಧತಿ:- ಹರ್ಷನ ಆಡಳಿತೆಯ ಸಮಯಕ್ಕೆ ಅರಸು ಮಕ್ಕಳ ಶಿಕ್ಷಣವೂ, ಸಾಮಾನ್ಯರ ಶಿಕ್ಷಣವೂ ಬೇರೆಬೇರೆಯಾಗಿ ನಡೆಯುತ್ತಿತ್ತೆಂದು ಹೇಳಲು ನಮಗಾವ ಅನುಮಾನವೂ ತೋರುವದಿಲ್ಲ. ಏಕೆಂದರೆ ಬಾಣಕವಿಯು ತನ್ನ ಹರ್ಷಚರಿತ್ರೆಯಲ್ಲಿ ಹರ್ಷನ ಶಿಕ್ಷಣವನ್ನು ಕುರಿತು ಅಕ್ಷರಗಳಿಂದ ಬಣ್ಣಿಸುವಾಗ್ಗೆ ಹೇಳಿದ್ದು - ಪಟ್ಟಣದ ಹೊರಗಡೆ ಇಟ್ಟಿಗೆಗಳಿಂದ ಕಟ್ಟಿದ್ದೊಂದು ಕಟ್ಟಡ. ಬೆಳ್ಳಗೆ ಮಂಜಿನಂತೊಪ್ಪುವ ಅದರ ಗೋಡೆಗಳು. ಸುತ್ತಲೂ ನೀರಿನಿಂದ ತುಳುಕಾಡುತ್ತಿರುವ ಕಂದಕವು. ಇ೦ಧ ಕೋಟೆಯೊಳಗೊಂದು ವಿದ್ಯಾಮಂದಿರವು. ವಿದ್ಯಾಮಂದಿರದೊಳಗೆ ಮಹಾಮಹಾ ವಿದ್ವಾಂಸರು ಉಪಾಧ್ಯಾಯರಾಗಿ ತರ್ಕ, ವ್ಯಾಕರಣ, ನ್ಯಾಯ, ಅರ್ಥಶಾಸ್ತ್ರ , ಧರ್ಮಶಾಸ್ತ್ರಾದಿಗಳ ಅಧ್ಯಯನವನ್ನು ತಮ್ಮ ಹಾಗೂ ಅರಸುಮಕ್ಕಳಿಗೆ ಮಾಡಿ ಸುತ್ತಿದ್ದರು. ಗುರುಗಳ ಬಳಿ ಕಲಿಯಲಿದ್ದ ಅರಸುಮನೆತನದ ಬಾಲಕರನ್ನು ನೋಡಿದರೆ ಪ೦ಜರದಲ್ಲಿ ಜಿಗಿದಾಡುವ ಸಿಂಹದ ಮರಿಗಳನ್ನು ಕ೦ಡ೦ತೆ ಭಾಸವಾಗುತ್ತಿತ್ತು. ಅರಸುಮಕ್ಕಳಿಗೆ ಶರೀರವ್ಯಾಯಾಮ, ಯುದ್ಧವಿದ್ಯೆ, ಕುದುರೆ ಸವಾರಿ ಮೊದಲಾದವುಗಳನ್ನು ಕಲಿಸಲಿಕ್ಕೂ ಇಲ್ಲಿಯೇ ಏರ್ಪಾಟದ್ದಿತು. ಅರಸು ಮಕ್ಕಳ ಅಧ್ಯಯನಾದಿಗಳ ಸಮಚಾರವನ್ನು ತಿಳಿದುಕೊಳ್ಳುವದಕ್ಕೆಂದು ಮಹಾರಾಜನು ರಾಣಿಯರ ಸಮೇತನಾಗಿ ಆಗಾಗ್ಗೆ ಬಂದು ಕುಶಲವನ್ನು ಕೇಳಿಕೊಂಡು ಹೋಗುತ್ತಿದ್ದನು. ಇಲ್ಲಿಯೇ ಚಿತ್ರಕಲೆ, ರತ್ನ ಪರೀಕ್ಷೆಯ ಕಲೆ, ಸಂಗೀತ,