ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೨

ಭಾರತೀಯರ ಇತಿಹಾಸವು.

ಬ೦ದ೦ತೆ ಅಗಿದು ತೆಗೆದುಕೊಂಡೊಯ್ದು ಅದರ ಮೇಲೆ ದೊಡ್ಡ ದೊಡ್ಡ ಸ್ತೂಪಗಳನ್ನೇರಿಸಿದರು. ಹಿಂದುಗಳೂ, ಬೌದ್ಧರೂ, ಜೈನರೂ ತಮ್ಮ ತಮ್ಮ ಭಾವನೆಯ೦ತೆ, ತಮ್ಮ ತಮ್ಮ ದೇವಾಲಯಗಳಿಗೆ ಮನವಾರೆ ಭಕ್ತಿ ಭರದಿಂದ ಕೊಟ್ಟ ಅನರ್ಥ್ಯವಾದ ಒಡವೆಗಳಿ೦ದ ಈ ದೇವಸ್ಥಾನಗಳೆಲ್ಲ ತುಂಬಿ ಸೂಸುತ್ತಿರುವದರಿಂದ ಝಗಝಗಿಸುವ ಈ ಒಡವೆಗಳೇ ಮು೦ದಣ ಕಾಲದೊಳಗೆ ವಿಧರ್ಮಿಯರಾದ ಪುಂಡ ಸುಲಿಗೆಗಾರರಿಗೆ ಸುಲಿಗೆಯ ಸವಿಹಚ್ಚುವಸಿರಿಯ ಮೀರಿದಾಶೆಯ ತಾಣಗಳಾಗಿ, ನಮ್ಮನ್ನೂ,ನಮ್ಮ ಪವಿತ್ರವಾದ ಧರ್ಮವನ್ನೂ ಕೆಡಿಸಲಿಕ್ಕೆ ಗ೦ಟಲಗಾಣಗಳಾಗಿ ಹೇಗೆ ಪರಿಣಮಿಸಿದವೆ೦ಬುದರ ಇತಿಹಾಸವನ್ನೋದಿದರೆ, ಮರುಳ ಮುಕ್ಕರಾದ ನಾವೇ ನಮ್ಮ ಕಾಲ್ಮೇಲೆ ಕಲ್ಲು ಹಾಕಿಕೊಂಡುದರ ತಿಳಿವು೦ಟಾಗಿ ಕ್ಷಣಹೊತ್ತು ಮನಸು ಮಂಕಾಗಿ ಹೋಗುತ್ತದೆ. ಇದೆಲ್ಲ ನಮ್ಮ ಧರ್ಮದ ಹುಚ್ಚು ತಿಳಿವಿನ ಪ್ರಭಾವ! ಪಾಶುಪತ, ಗಾಣಪತ್ಯ, ಅಘೋರೀ (ಕಾಳಿಕಾ) ಮೊದಲಾದ ದೇವತೆಗಳ ಉಪಾಸನೆಯು ಈ ಕಾಲದಲ್ಲಿ ಎಡೆತಡೆಯಿಲ್ಲಿದೆ ಅಲ್ಲಲ್ಲಿ ಸುಳಿದಾಡುತ್ತಿದ್ದರೂ, ಹರ್ಷನ ಕಾಲದೊಳಗೆ ಪಶುಹಿ೦ಸಾ ಪ್ರಧಾನವಾದ ಯಜ್ಞಾದಿಗಳು ನಡೆಯಲಿಲ್ಲವೆಂಬುದಕ್ಕೆ ಹರ್ಷನ ಬಲುದಿನದ ರಾಜದ೦ಡದ ಪ್ರತಾಪವೆಂದೇ ನಿಃಸಂಶಯವಾಗಿ ಸಾರಿ ಸಾರಿ ಹೇಳಬಹುದು. ಮಹಾ ಮಹಾ ಯಜ್ಞಗಳ ಹೆಸರನ್ನುಳಿದು ಮಿಕ್ಕ ಚಿಕ್ಕ ಚಿಕ್ಕ ಅಗ್ನಿಹೋತ್ರಗಳು ಮಾತ್ರ ಬ್ರಾಹ್ಮಣರಲ್ಲಿ ನಿರ್ಬಾಧವಾಗಿ ನಡೆದಿದ್ದವು. ಗೃಹಸ್ಥ ಬ್ರಾಮ್ಹಣರೆಲ್ಲರೂ ಬಹುತರವಾಗಿ ಅಗ್ನಿಹೋತ್ರಿಗಳೇ. ಪ್ರಾಚೀನಕಾಲದ ವರ್ಣಾಶ್ರಮ ಧರ್ಮದ ವ್ಯವಸ್ಥೆಯ ಹೆಜ್ಜೆಗಳು ಇನ್ನೂ ಸ್ಪಷ್ಟವಾಗಿ ಸಮಾಜದೊಳಗೆ ಕಾಣಿಸುತ್ತಿದ್ದವು. ಭಾಗವತಧರ್ಮ, ಕೃಷ್ಣಭಕ್ತಿ ಅವೇ ಮುಂತಾದ ಭಕ್ತಿಪ೦ಧಗಳು ಮೆಲ್ಲಮೆಲ್ಲಗೆ ಜನರ ಮನಸುಗಳನ್ನು ಸೆರೆವಿಡಿದು ತಮ್ಮ ಕಡೆಗೆ ಎಳೆದುಕೊಳ್ಳುತ್ತಿದ್ದುದರಿಂದ ಯಜ್ಞದ ಕಲ್ಪನೆಯೂ, ಪಶುವಧೆಯೂ, ಮಾಂಸಾಹಾರವೂ ಅವೆಲ್ಲ ತಮ್ಮಷ್ಟಕ್ಕೆ ತಾವೇ ಜನಾಂಗದೊಳಗಿಂದ ಕಾಲ್ದೆಗೆಲಾರ೦ಭಿಸಿದ್ದವು. ಕಾಲಕ್ಕೆ ತಕ್ಕಂತೆ ಧರ್ಮದ ಸಾಧನ ಭೇದವಾಗಲು, ಅದಕ್ಕನುಗುಣವಾಗಿ ನಮ್ಮ ಜನರಾದರೂ ತತ್