ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕರ್ನಾಟಕ ಸಾಮ್ರಾಜ್ಯದ ಹಬ್ಬುಗೆ.

೨೯೫

ಕರ್ನಾಟಕ ಸಾಮ್ರಾಜ್ಯದ ಹಬ್ಬುಗೆ:- ಈತನ ಸಾಮ್ರಾಜ್ಯ ವಿಸ್ತಾರವು ಪೂರ್ವಕ್ಕೆ ನರ್ಮದೆಯ ವರೆಗೆ, ದಕ್ಷಿಣಕ್ಕೆ ಪೂರ್ವ, ಪಶ್ಚಿಮ, ದಕ್ಷಿಣ ದಿಕ್ಕುಗಳಲ್ಲಿ ಸಮುದ್ರವಲಯಾ೦ಕಿತವಾಗಿ ಹರಡಿತ್ತು. ಪುಲಿಕೇಶಿವಲ್ಲಭ ಮಹಾರಾಯನ ಕಾಲದಲ್ಲಿ ಬಾಳಿದ ಒಬ್ಬ ಕವಿಯು ಆತನ ಜೀವಮಾನದ ಗುಟ್ಟನ್ನು ಒ೦ದೆರಡೇ ನಾಲಿನಲ್ಲಿ ಹೇಳುವಾಗ "ಈತನನ್ನು ಮೊದಲು ಶೌರ್ಯವೆಂಬಗ್ನಿಯೂ, ಆ ಮೇಲೆ ಅಶ್ವಮೇಧವೆಂಬ ಹೊಗೆಯೂ, ತರುವಾಯ ಬ್ರಾಮ್ಹಣಸಮುದಾಯವೆಂಬ ಮೋಡವೂ, ಹೀಗೆ ಒ೦ದೊ೦ದು, ಒಂದೊಂದು ಕಾಲಕ್ಕೆ ಆವರಿಸಿಕೊಂಡಿದ್ದವು." ಎಂದು ಪದ್ಯ ಕಟ್ಟಿ ಹಾಡಿದ್ದರ ಮೇಲಿಂದ ಈತನೆಷ್ಟು ಶೌರ್ಯಸಾಗರನೂ, ಮುನ್ನೋಟದವನೂ, ವೈದಿಕಧರ್ಮಾಭಿಮಾನಿಯೂ, ರಾಜತಂತ್ರಗಾರನೂ, ವಿದ್ಯಾವಕ್ಷಿಯೂ ಆಗಿದ್ದನೆಂಬುದು ಸ್ಫುಟವಾಗುತಿದೆ. ಈತನು ಮೂರು ಮಹಾರಾಷ್ಟ್ರಕ * ಗಳನ್ನಾಳುತ್ತಿದ್ದನು. ಈತನ ಆಳಿಕೆಯಲ್ಲಿ ೯೯ ನಾವಿರ ಹಳ್ಳಿಗಳು ಒಳಗೊಂಡಿದ್ದವೆಂದು ಐಹೊಳೆಯ ಶಿಲಾಶಾಸನವು ಡಂಗುರ ಹೊಯ್ಯುತ್ತಿದೆ. ಮಹಾರಾಷ್ಟ್ರಗಳೆಂದರೆ ದೊಡ್ಡ ಜನಾ೦ಗಗಳ ಭಾಗಗಳೆ೦ಬರ್ಧ ಹ್ಯುಯೆನತ್ಸ೦ಗಸು ಹಿಂದೂದೇಶವನ್ನೆಲ್ಲ ಸುತ್ತಿಕೊಂಡು ಕರ್ನಾಟಕ ಚಕ್ರವರ್ತಿಯಾದ ಪುಲಕೇಶಿಯು ಅಳುತ್ತಿದ್ದ ಕರ್ನಾಟಕ ರಾಜಧಾನಿಯಾದ ಬದಾಮಿಯನ್ನು ಬಂದು ಸೇರಿ, ಆತನ ಓಲಗವನ್ನು ಕಣ್ಮುಟ್ಟ ನೋಡಿ ತನಗೆ ಮನಗಂಡ


* ಟೇವು-ಮಹಾರಾಷ್ಟಕಗಳಂದರೆ ಮಹಾರಾಷ್ಟ್ರಗಳು. ಈಗಿನ ಮಹಾರಾಷ್ಟ್ರವಷ್ಟೇ ಅಲ್ಲದೆ ಕನ್ನಡನಾಡಿಗೂ ಆ ಕಾಲಕ್ಕೆ ಮಹಾರಾಷ್ಟ್ರವೆನ್ನುತ್ತಿದ್ದರೆಂದೂ ಬಾಲುಕೈಂದು ಮಹಾರಾಷ್ಟ್ರರಾಜ್ಯವಿತ್ತೆ೦ದೂ ಕೆಲ ಜನರು ಹಟದಿಂದ ಸಾಧಿಸುತ್ತಿದ್ದಾರೆ. ಈ ಒಗ್ಗೆ ಪುಣೆಯ ಶ್ರಿ. ವೈದ್ಯ ಎಂಬವರು ತಾವು ಬರೆದ 'ಮಧ್ಯಯುಗೀನ ಭಾರತ' ಎಂಬ ಗ್ರ೦ಥದೊಳಗಂತೂ ಒಂಟೆಯ ಓಡಿತವನ್ನೇ ಹಿಂದಿದ್ದಾರೆ; ಆದರೆ ಈಗಿನ ಕನಾ೯ಟಕವು ಸಂಪೂರ್ಣವಾಗಿ ಅಚ್ಚ ಕನ್ನಡನಾಡಾಗಿತ್ತಲ್ಲದೆ, ಈಗಿನ ಮಹಾರಾಷ್ಟ್ರದ ಬಹು ಭಾಗವು ಕೂಡ ವಿಶೇಷವಾಗಿ ಕನ್ನಡನಾಡಿಗೇನೇ ಸೇರಿತ್ತೆಂಬುದೂ, ಈಗಿನ ಮಹಾರಾಷ್ಟ್ರವು ಮುರಾಠರ ಏಳಿಗೆಯಿಂದ ಕನ್ನಡಿಗರ ಕೈಬಿಟ್ಟು ಹೋದ ಕನ್ನಡನಾಡೆಂಬುದೂ ಶಿಲಾಲಿಪಿಗಳಿಂದಲೂ, ಬೇರೆ ಐತಿಹಾಸಿಕ ಆಧಾರಗಳಿಂದಲೂ ಈಗ ಸಿದ್ಧವಾಗಿ ಹೋದ ಮಾತಾಗಿದೆ.