ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿಂಧಪ್ರಾಂತಕ್ಕೆ ಅರಬರ ದಾಳಿ.

೩೧೫

ದ್ದರು. ದಾರಿಯಲ್ಲಿ ಬಿರುಗಾಳಿಯಿ೦ದ ದಾರಿ ತಪ್ಪಿದವರಾಗಿ ಆ ಪ್ರವಾಸಿಕರು ಸಿಂಧುನದಿಯ ದಂಡೆಯಲ್ಲಿರುವ ದೇವಲ ಎ೦ಬ ರೇವಿಗೆ ಬಂದು ತಲ್ಪಿದರು. ಈ ರೇವಿನಲ್ಲಿರುತ್ತಿದ್ದ ಕೆಲವು ಸುಲಿಗೆಗಾರರು ಇವರಿಂದ ಎಲ್ಲ ಸಾಮಾನುಗಳನ್ನು ಸುಲಿದುಕೊ೦ಡದ್ದಲ್ಲದೆ, ಅವರ ಜೊತೆಯಲ್ಲಿರುವ ಹೆಂಗಸರನ್ನು ಸೆರೆಮನೆಯಲ್ಲಿಟ್ಟರು. ಈ ವರ್ತಮಾನವು ಇರಾಣದೊಳಗಿರುವ ಸುಭೇನಾರನಿಗೆ ತಿಳಿಯಲು ಅವನು ದಾಹರನಿಗೆ ಅರಿಕೆ ಮಾಡಿಕೊಂಡನು; ಆದರೆ ದಾಹರನು ಶೂರನಿದ್ದರೂ, ಈ ಅನ್ಯಾಯವನ್ನು ಸರಿಪಡಿಸಲು ತನ್ನ ದೌರ್ಬಲ್ಯವನ್ನು ತೋರಿಸಿದ್ದರಿಂದ, ಮಹಮ್ಮದೀಯರು ಸಿ೦ಧಪ್ರಾಂತದ ಅರಸನಾದ ದಾಹರನೊಡನೆ ಧರ್ಮಯುದ್ದವನ್ನು ಸಾರಿದರು; ಮತ್ತು ಮಹಮ್ಮದ ಕಾಸೀಮನೆ೦ಬ ತಮ್ಮ ದಳವಾಯಿಯ ಕೈಲಿ ದ೦ಡನ್ನು ಕೊಟ್ಟು ಕಳಿಸಿದರು. ಮಹಮ್ಮದಕಾಸೀಮನು ಅಜೇಯನಾದ ವೀರನಿರುವನೆಂದು ದಾಹರನಿಗೆ ತಿಳಿದುದರಿಂದ ಅವನನ್ನೆದುರಿಸಲು ಎದೆಗೊಳ್ಳಲಿಲ್ಲ. ಮೇಲಾಗಿ ದೇವಲ ಪಟ್ಟಣದ ಕೋಟೆಯು ಒಹು ಭದ್ರವಾಗಿದ್ದು ಯಾರಿಗೂ ಕೈವಶವಾಗದೆಂದು ದಾಹರನ ನೆಚ್ಚಿನ ನ೦ಬಿಗೆಯಿರುವ ಮೂಲಕ ಶತ್ರುಗಳನ್ನು ತಡೆಗಟ್ಟುವ ಗೋಜಿಗೆ ಹೋಗದೆ ತಣ್ಣಗೆ ಕುಳಿತುಕೊಂಡನು. ದಾಹರನು ಸುಮ್ಮನೆ ಕುಳಿತುದರಿಂದ ಮಹಮ್ಮದ ಕಾಸೀಮನಿಗೆ ಹೆಚ್ಚು ಅನುವು ದೊರೆತು, ಅವನು ಸುತ್ತು ಕಡೆಯಿ೦ದ ದೇವಲಕೋಟೆಯ ಮೇಲೆ ಹಲ್ಲೆಗಳನ್ನು ನಡಿಸಿ, ದೇವಲಪಟ್ಟಣದೊಳಗೆ ಹೊಕ್ಕು, ಪಟ್ಟಣದೊಳಗಿರುವ ದೊ೦ದು ದೇವಸ್ಥಾನದ ಮೇಲೆ ಹಾರಾಡುತ್ತಿರುವ ದಾಹರನ ಧ್ವಜ ಪತಾಕೆಯನ್ನು ನೆಲಕ್ಕೆ ಕೆಡವಿಸಿದನು; ಈ ಬಗೆಯಾಗಿ ದೇವಲಪಟ್ಟಣವನ್ನು ಕೈವಶ ಪಡಿಸಿಕೊಂಡ ನಂತರ ಕಾಶೀಮನು ಕೈಗೆ ಬ೦ದ೦ತೆ. ಊರೊಳಗಿನ ಗಂಡಸರನ್ನೆಲ್ಲ ಮೊದಲು ಕೊಲೆ ಮಾಡಿದನು. ಈತನ ಯಮಗೊಲೆಗೆ ಹೆದರಿ ನಡುಗಿ ಹೋದ ಜನರು ತಮಗೆ ಜೀವದಾನ ಕೊಡಬೇಕೆಂದು ಬೇಕಾದಷ್ಟು ಹಲುಬಿ ಬೇಡಿಕೊಂಡರೂ ಕನಿಕರ ದೋರದೆ, ಆ ಊರೊಳಗಿನ ಬೌದ್ಧವಿಹಾರದಲ್ಲಿರುವ ಏಳು ನೂರು ಮ೦ದಿ ಸುಂದರ ಹೆಂಗಸರನ್ನು ತನ್ನ ತೊತ್ತುಗಳನ್ನಾಗಿ ಮಾಡಿ