ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇದಗಳು. ಈ ಮೇರೆಗೆ ಆರ್ಯರ ಬುಡಕಟ್ಟಿಗೆ ಸೇರಿದ್ದರೂ, ವಿನೀಶಿಯಾ, ಖಾಲ್ಟಿಯಾ, ಮೊದಲಾದ ಜನಾ೦ಗದವರು ಎಷ್ಟು ಉನ್ನತ ಸ್ಥಿತಿಗೇರಿ ದ್ದರೂ, ಅನೇಕ ಬೇರೆ ಬೇರೆ ಜನಾಂಗದವರನ್ನು ಗೆದ್ದರೂ, ಆ ದೇಶ ವನ್ನು ಹಾಳುಗೆಡವಿ, ಅದರಿಂದ ತಮ್ಮ ಒಡಲನ್ನು ಹರೆಯಲಿಲ್ಲ. ಗೆದ್ದ ಜನರನ್ನು ಸುಲಿಯಲಿಕ್ಕೆ ಹೊoಡು ಹಾಕಲಿಲ್ಲ. ಅವರ ಗೆಲುವಿಕೆಯ ವೈಶಿಷ್ಟ್ಯವು ಒcದರಲ್ಲಿ ಅಡಕವಾಗಿದೆ. ಅದು ಯಾವುದೆಂದರೆ, ಗೆದ್ದ ಜನರನ್ನು ತಮ್ಮ ಸಂಸ್ಕೃತಿಗೆಳೆದು, ಅವರನ್ನು ತಮ್ಮಂತೆ ಮಾಡಿ ಬಿಡು ವದು. ಇಂಧದೊಂದು ಜನಾ೦ಗದವರನ್ನು ಆರ್ಯರು ಗೆದ್ದು, ಅವ ರನ್ನು ಬಿದ್ದವರೆಂದು ಬಗೆದು, ತಮ್ಮ ಲಾಭಕ್ಕಾಗಿ, ತಮ್ಮ ಸುಖಕ್ಕಾಗಿ ಅವರನ್ನಾಳಿ, ಅವರನ, ಅವರ ರಾಷ್ಟ್ರವನ್ನ, ಅಳಿಗಾಲಕ್ಕೆ ತಂದ ರೆಂಬುದು ಇತಿಹಾಸಕ್ಕೇ ಅರಿಯದ ಮಾತು. ಅರ್ಯರ ಈ ಶಿ ಸ್ಮವ ನಾ ಮಾನ್ಯವೇ? ಇದಕ್ಕೆ ಭೂ ಮಂಡಲ ಇತಿಹಾಸದೊಳಗೆ ಬೇರೆ ದೃಷ್ಟಾಂತ ದೊರಕದು. ತಾವು ಒಕ್ಕಲಾದ ದೇಶವೆಲ್ಲಿ ತಮ್ಮದೇ ಎಂದೂ, ಅಲ್ಲಿಯ ಜನರು ತಮ್ಮವರೆಂದೂ ಅವರ ತಿದ್ದುಪಡಿಗಾಗಿ ಶ್ರಮ ಪಡುತ್ತಿ ದ ರದೇ ಆರ್ಯರ ಇತಿಹಾಸದಿಂದ ಎದ್ದು ಕಾಣುತ್ತದೆ. ಯಾವದೊ ೦ದು ಜನಾ೦ಗದವರು ಆರ್ಯರಿಗೆ ನಾವು ತಮ್ಮವರೆಂದು ಮೊರೆಹ ಕರೆ ತೀರಿತು. ಅವರನ್ನು ಕಾಯುವ ಭಾರವು ಆರ್ಯರ ಮೇಲೆ ಬಿದ್ದ ದೈ! ಈ ಅತ್ಮೀಯ ಭಾವನೆಯ೦ಬುದು ಆರ್ಯರಲ್ಲಿಯ ವಿಶಿಷ್ಟ ಗುಣದೆತಕವಾಗಿದೆ. ವೇದಗಳು:- ಆರ್ಯರ ಮಹತ್ತಾದ ಜ್ಞಾನ ಭಾ೦ಡಾರವೆಂದರೆ ವೇದವೇ. ಈ ವೇದಗಳಿಗೆ ನಮ್ಮ ಪೂರ್ವಿಕರು “ ಶ್ರತಿಗಳೆ೦ದೆನ್ನುವ ದು೦ಟು', ಈಶ್ವರನು ಮಂತ್ರದ್ರಷ್ಟಾರರಾದ ಋಷಿಗಳಲ್ಲಿ ವೇದಗಳನ್ನು ಸ್ಪುರಣೆಗೊಳಿಸಿದನು; ಈ ಮಂತ್ರದೃಷ್ಟಾರರಾದ ಋಷಿಗಳಲ್ಲಿ ವಶಿಷ್ಠ, ವಿಶ್ವಾಮಿತ್ರ, ವಾ ಮ ದೇವ, ಅತ್ರಿ, ಅಗಸ್ಯ, ಕ, ಜಮದಗ್ನಿ ಇವರೇ ಮುಖ್ಯರು, ಅವುಗಳನ್ನ ವರು ತಮ್ಮ ತಮನ್ನಾ ಮರ್ಥ್ಯದಿಂದುಂಟಾದ ತಾತ್ಕಾಲಿಕ ಸರ್ತಿಯಿಂದಲೂ ಅಪೂರ್ವಪ್ರತಿಭೆಯಿಂದಲೂ ಬೇರೆ ಬೇರೆ ಕಾಲಕ್ಕೆ ತಮಗೆ ಸ್ಮರಿಸಿದ ಅಧ್ಯಾತ್ಮಿಕ, ಮಾನಸಿಕ, ಪ್ರಾಕೃತಿಕ