ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಚಿಕೇತನ ಕಥೆ.

ಯಾರಿಗಾದರೂ ದಾನಮಾಡಬೇಕೆಂದೂ, ಅದನ್ನು ಮಾಡದೆ, ತ೦ದೆಗೆ. ಯಜ್ಞ- ನಾ ಫಲ್ಯದ ಪುಣ್ಯವು ಬಾರದ೦ದ ಯೋ ಚಿಸಿಕೊಂಡು, ತಂದೆಯ ಬಳಿಗೆ ಹೋಗಿ ( ಅಪ್ಪ, ನನ್ನನ್ನು ಯಾವ ಋತ್ವಿಜರಿಗೆ ಅರ್ಪಿಸಬೇ ಕೆಂದು ಸಂಕಲ್ಪಿಸಿರುವಿರಿ ?” ಎಂದು ಕೇಳಿದನು. ಮಗುವಿನ ಮಾತನ್ನು ಕೇಳಿ, ಋಷಿಯು ಬಾಲನಾದ ಈತನಿಗೆ ಏನೂ ತಿಳಿಯದ್ದರಿಂದ ಸುಮ್ಮನೆ ಹೇಳಿ ಪ್ರಯೋಜನವೇನೆ೦ದು ಮೌನವನ್ನು ತಾಳಿದನು. ಆದರೆ ನಚಿ ಕೇತನು ಅಷ್ಟಕ್ಕೆ ಸುಮ್ಮನಿರದೆ, ತ೦ದೆಗೆ ಮತ್ತೆ ಮತ್ತೆ ವಿಜ್ಞಾಪಿಸಿ ಕೊಂಡನು. ಆಗ, ಮಗನನ್ನು ಏನಾದರೊಂದು ಅಡ್ಡಡ್ಡವಾದ ಉತ್ತರದಿಂದ ಹೆದರಿಸಿಬಿಡಬೇಕೆಂದೆಣಿಸಿ, ತ೦ದೆಯು “ ನಿನ್ನನ್ನು ಮೃತ್ಯು ವಿಗೆ ಅರ್ಪಿಸಿಬಿಡುತ್ತೇನೆ” ೦ದು ಗದರಿಸಿದನು. ಈ ಸಮಯಕ್ಕೆ ನಚಿ ಕೇತನನ್ನು ಬೃಶ್ಯ ಆಕಾಶವಾಣಿಯಾದುದೇನಂದರೆ, ( ಮಗುವೇ ? ನೀನು ಮೃತ್ಯುವಿನ ಹತ್ತಿರ ಹೋಗಬೇಕೆಂದು ನಿಮ್ಮ ತಂದೆಯ ಮನೀಷೆ ಯಿದೆ; ಆದರೆ ಯಮರಾಜನು ಹೊರಗೆ ಪ್ರಯಾಣಕ್ಕಾಗಿ ಹ ದ ಸಮ ಯವರಿತುಕೊಂಡು, ನೀನು ಅತನ ಮನೆಗೆ ಹ ಗು; ಮತ್ತು ಯಮ ಧರ್ಮರಾ ಜನ ಹೆ೦ಡಿರು ಮಕ್ಕಳು ನಿನಗೆ ಊಟ ಮಾಡಲಿಕ್ಕೆ ಎಷ್ಟು ಕೇಳಿಕೊಂಡರೂ, ಮರು ದಿವಸಗಳ ವರೆಗೆ ಅನ್ನ ನೀರು ಮುಟ್ಟದೆ, ಯಮನ ಬಾಗಿಲವನ್ನೇ ಕಾಯ್ದು ಕೊ೦ಡಿರು. ಅಷ್ಟರಲ್ಲಿ ಯಮನು ಮನೆಗೆ ಬಂದು, ತಮ್ಮಾ, ನೀನಿಲ್ಲಿ ಬಂದು ಎಷ್ಟು ದಿನಗಳಾದ'ವೆಂದು ಕೇಳಿದರೆ, ಅದಕ್ಕೆ ( ಮರು ರಾತ್ರಿಗಳು ಸಂದವೆಂರು ಉತ್ತರ ಕೊಡು.” ಅನಂತರ ಯಮನು (ಮೊದಲನೇ ರಾತ್ರಿ ಎನು ಊಟಮಾಡಿದೆ” ಎಂದು ವಿಚಾರಿಸಿದರೆ, “ ನಿನ್ನ ಪ್ರಜೆಗಳನ್ನು ತಿ೦ದೆನೆ” oದು ಉತ್ತರ ಕೊಡು; ಏಕೆ೦ದರೆ, ಅತಿಥಿಯು ಒಂದು ದಿನ ಮನೆಯಲ್ಲಿ ಉಪವಾಸ ಕುಳಿತರೆ, ಪ್ರಜಾ ಕ್ಷಯವಾಗುತ್ತದೆಂಬ ಮಾತು ಯಮನ ಲಕ್ಷಕ್ಕೆ ಬರುತ್ತದೆ. ಎರಡು ಮತ್ತು ಮೂರನೇ ದಿನ ರಾತ್ರಿ ಏನು ಊಟ ಮಾಡಿದೆಂದು ಯಮರಾಜನು ಕೇಳಿದರೆ, ನಿನ್ನ ಮನೆಯಲ್ಲಿಯ ದನಕರು ಹಾಗೂ ಪುಣ್ಯ ವನ್ನೆಲ್ಲ ತಿಂದೆನೆ”೦ದು ಹೇಳೆ೦ದರೆ, ಅವನಿಗೆ ತನ್ನ ಪುಣ್ಯ ಹಾಗೂ ದನ ಕರುಗಳ ಕ್ಷಯವಾ ತೆಂದು ತಿಳಿಯುವದು.” ಅದರಂತೆ, ನಚಿಕೇತನು