ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮು೦ಟರ ಅವನತಿ, ೫೫ ಶರಣುಹೋಗಿರಿ; ಆತನು ನಿಮ್ಮ ಕೂದಲು ಕೂಡ ಕೊ೦ಕಗೊಡಲಿಕ್ಕಿಲ್ಲ; ಇರಲಿ, ಅವ್ವನವರೇ, ನಿಮಗೆ ಹಸಿವೆಯಾಗಿರುವದಷ್ಟೆ? ನೀರು..ಬೀರು ತರಿಸಿ ಕೊಡಲಾ? ಬಹಳಹೊತ)ಗಿರುವದು” ಎಂದು ನುಡಿಯಲು, ಆಕೆಯು-ನನಸ್ ಹಸಿವೆಯಾಗಿಲ್ಲ; ಸ್ವಲ್ಪ ನೀರು ಮಾತ್ರ ತರಿಸಿಕೊಡು; ನನ್ನ ಗಂಟಲು ಒಣಗಿರು ವದು ; ಸ್ವಲ್ಪ, ಬಾಯಿ ಮುಕ್ಕಳಿಸಿ ಕೊಳ್ಳುತ್ತೇನೆ;” ಎಂದಳು. ಕೂಡಲೆ ಗಣೆ ಬನು ಅಡಿಗೆಯವನಿಗೆ ಕೆರೆಯೊಳಗಿಂದ ನೀರು ತರ ಹೇಳಿದನು. ಆತನು ಒಬ್ಬ ಮುಸ ೨ಾನ ಸಿಪಾಯಿಯ ಪಹರೆಯಲ್ಲಿ ಕರಗಿಹೋಗಿ ನೀರು ತಂದನು; ಬಳಿಕ ಗಣೇ ಬನು ರಂಗೂಬಾಯಿಯ ಕಡೆಗೆ ಹೋಗಿ-ಬಾಯಿ, ನಿಮ್ಮ ನ್ನು ದೇವರು ಈ ಸಂಕಟದೊಳಗಿಂದ ನಿಶ್ಚಯವಾಗಿ ಪಾರುಮಾಡುವನು, ಇದು ಸತ್ಯವು; ಆದರೆ ಮಾನಹಾನಿಯ ಪ್ರಸಂಗವಿರುವದರಿಂದ ಕಡೆಯ ಉಪಾಯವೆಂದು ಇದೊಂದು ಗುಪ್ತಿಯು (ಕೋಲಿನೊಳಗಿರುವ ಕಠಾರಿ) ನಿಮ್ಮ ಬಳಿಯಲ್ಲಿರಲಿ; ನಿಮ್ಮ ಮುಂದೆ ರಾವಣನಂತೆ ನಿಲ್ಲುವ ಆ ಚಾಂಡಾಲನಿಗೆ ನಿಮ್ಮ ಶವದ ಹೊರತು ಬೇರೆ ಏನೂ ಸಿಕ್ಕಿರಬಾರದು; ಎಂದು ನುಡಿದು ಆತನು ಆ ಗುಪ್ತಿಯನ್ನು ರ೦ಗೂ ಬಾಯಿಯ ಕೈಯಲ್ಲಿ ಕೊಟ್ಟನು. ಒಂದು ಮೊಳೆಯನ್ನು ಹತ್ತಿಕ್ಕುವದರಿಂದ ಆ ಕೋರಿ ನೊಳಗಿಂದ ಸುಮಾರು ಒಂದು ಗುಡ್ಡ ಮೊಳದಷ್ಟು ಕಠಾರಿಯು ಹೊರಗೆ ಬರು ತ್ತು. ಅದನ್ನು ನೋಡಿ ರಂಗ ಬಾಯಿಯು ಸ್ಪಲ್ಪ ಸಮಾಧಾನ ತಾಳಿ, ಒಂದೆ ರಡು ಸಾರೆ ಆ ಮೊಳೆಯನ್ನು ಹತ್ತಿಕ್ಕಿ ಆ ಕಠಾರಿಯನ್ನು ಹಿಡಿಯುವ ಬಗೆಯನ್ನು ತಿಳಕೊಂಡಳು; ಹಾಗು ಅದನ್ನು ಅತ್ಯಂತ ಜತನದಿಂದ ತನ್ನ ಹತ್ತಿರ ಇಟ್ಟ ಕೊಂಡಳು; ಆಗ ಆಕೆಗೆ ತಲೆಯ ಮೇಲಿನ ಒಂದು ಭಾರವ ಇಳಿದಂತಾಯಿತು. ಅವಳು ಒಂದು ನಿಟ್ಟುಸುರು ಬಿಟ್ಟು-ಗಣೇಬಾ, ದಾದಾ ಸಾಹೇಬರು ಬಹು ದೂರದೃಷ್ಟಿಯಿಂದ ನನ್ನನ್ನು ನಿನ್ನ ವಶಕ್ಕೆ ಒಪ್ಪಿಸಿದಂತೆ ಕಾಣುತ್ತದೆ; ನಿನ್ನ ಉಪಕಾರವನ್ನು ನಾನು ಜನ್ಮ ಜನ್ಮಾಂತರದಲ್ಲಿಯೂ ಮರೆಯಲಿಕ್ಕಿಲ್ಲ ಕಂಡೆಯಾ? ನಾನು ಮೊದಲಿನಿಂದ ನಿನ್ನ ಮಾತು ಕೇಳಿದ್ದರೆ ನನ್ನ ಹಾಡು ಹೀಗೆ ಆಗುತ್ತಿದ್ದಿಲ್ಲ: ಇರಲಿ, ಇನ್ನು ಮೇಲೆ ನಿನ್ನ ಮಾತನ್ನು ಅಕ್ಷರಶಃ ಪಾಲಿಸುವೆನು. ಇನ್ನೂ ನನ್ನ ಮೇಲೆ ದೇವರು ಇರುವನು; ಅ೦ತೇ ನನ್ನ-ನಿನ್ನ ವಿಯೋಗವಾಗಿಲ್ಲ ; ಗಣೇಬಾ, ಇನ್ನು ನೀನು ಹೋಗಪ್ಪಾ, ಏನಾದರೂ ತಿಂದು ಬಾ, ನನ್ನ ಕಾಲೊಳಗೆ ನಿನ್ನ ಜೀ ತಕ್ಕೇನೂ ಸುಖವಿಲ್ಲ” ಎಂದು ನುಡಿಯುತ್ತಿರಲು, ಒಳಗೆ ಮಸೀದೆಯಲ್ಲಿ ಏನೋ ಗದ್ದಲವಾದಂತೆ ಕೇಳಿಸಿತು. ಆಗ ಗಣೇಬನೂ ರಂಗೂಬಾಯಿಯ ಲಕ್ಷ Jಟ್ಟು ಕೇಳಲು ಹೆಂಗಸರು ಅಳುವ ದನಿಯ ಕೇಳಬರಹತ್ತಿತು, ಗಣ