ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫ ಮಾಡಿದ್ದು ಮಹಾಕಾಯ. ಹೋಗಿ ಮೂರು ಪ್ರದಕ್ಷಿಣೆ ಮಾಡಿಸಿ ನಮಸ್ಕಾರಮಾಡಿಸಿದರು ಅಮ್ಮ ನಿಗೆ ಮಂಗಳಾರತಿ ಮಾಡಿ ನನಗೆ ಪ್ರಸಾದವನ್ನು ಕೊಟ್ಟ ರು. ಕುಂಕುಮವನ್ನು ಹಣೆಗಿಟ್ಟರು. ಅಮ್ಮನಪೂಜಾರಿ ಯಾದ ಅಪ್ಪಾಜಿ ಎಂಬುವನು ಬೆಳ್ಳಿ ಕಟ್ಟುಹಾಕಿದ ಎ೦ದು ಕರೀ ಬೆತ್ತವನ್ನು ತಂದು ಅದರಿಂದ ಮುರುಸಾರಿ ತಲೆಯಿಂದ ಕೆಳ ಕೈ ಸವರಿದನು. ಬಾಯಲ್ಲಿ ನೋ ಪಿಪಿನೆ ಹೇಳುತಿದ್ದ ನು. ಹಂಣು ಕಾಯಿ ಪ್ರಸಾದವನ್ನು ಕೊಟ್ಟರು. ನನ್ನನ್ನು ಎಲ್ಲರೂ ಬಂದು ಮನೆಗೆ ಕರೆದುಕೊಂಡು ಹೋಗಿಬಿಟ್ಟರು. ಮಾದೈಯ್ಯನನ್ನು ಅವ್ಯಾಯೆಂತಲೂ ಅವನ ಹೆಂಡತಿಯನ್ನು ಅಪ್ಪ ಎಂತಲೂ ಕರೆಯುತಿದ್ದೆ. ಅದೇದಿವಸ ನನ್ನು ಸೃನೂ ಇನ್ನೂ ಊರಲ್ಲಿ ಹಿರಿಯರಾದವರೂ ಕೂತು ಕೊಂಡರು. ಆಗ ನನ್ನನ್ನು ಕುರಿತು ನನ್ನ ಸ್ವನು ಹೇಳಿದ್ದೇನೆಂದರೆ:- ಮಾದ-ಈ ಪೂರಜನರೆಲ್ಲಾ ನಂನಮ್ಮಲ್ಲಿ ಬಹಳ ಗ್ಯಾ ಗಿದೇವೆ. ನಾವು ಕತ್ತಲೇ ಕಾಲದಲ್ಲಿ ಮಳೆಗಾಲ ದಲ್ಲಿಯ ಊರನ್ನು ಬಿಟ್ಟು ಕಾಡುದಾರಿಯಲ್ಲಿ ಹೋ ಗುತ್ತೇವೆ. ನಾವು ಹೋಗಿಬರುವ ದಾರಿ ಯಾರಿಗೂ ತಿಳಿಯದು. ನನಗೆ ಮಾತ್ರ ಗೊತ್ತು. ಯಾರೂ ನಮ್ಮ ನ್ನು ಬಂದು ಹಿಡಿಯಬಾರದೆಂದು ಹೀಗೆ ಮಾ ಡುತ್ತೇವೆ. ದೇಶಾಂತರಗಳಿಗೆ ಹೋಗಿ ಐಶ ಲ್ಯವಂತ ರಮನೆಗೆ ಕನ್ನ ವನ್ನು ಹಾಕುತ್ತೇವೆ. ಒಳಕ್ಕೆ ನುಗ್ಗಿ ಸಿಕ್ಕಿದಪದಾರ್ಥವನ್ನು ತರುತ್ತೇವೆ. ಈ ವಿಷಯದಲ್ಲಿ ಈ ಊರವರೆಲ್ಲಾ ಸೇರಿ ಒಂದು ಸಂಕೇತವಾಡಿ