ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಬಿ ಎಬ್ಬಿಸುವರು. ನನಗೆ ಎಲ್ಲಿಯೂ ಉಳಿಬಾಳಿಲ್ಲ. ಆದು ದರಿಂದ ನಾನು ಇಲ್ಲಿಂದೆದ್ದು ಹೊರಡುವೆನು ನಮಗರ ; ತಾವು ಬ್ರಾಹ್ಮಣರಾಗಿರುವ ಪಕ್ಷದಲ್ಲಿ ತಮಗೆ ಪುಣಾಮ ವಿರಲಿ. ಆಗಂತುಕ ನೀನು ಎಲ್ಲಿಗೆ ಹೊರಡುವೆ ? ಶಚೀಂದ್ರು ನಾನು ಎಲ್ಲಿಗೆ ಹೋಗಲಿ, ಶುಂಠೀವಾವು ನನ್ನು ನೋಡುವುದಕ್ಕೆ ಹೋಗುವನು. ಹೀಗಹೇಳಿ ಶಚೀಂದ್ರನು ಅಲ್ಲಿಂದೆದ್ದು ಹೊರಟು ಹೋಗಲು, ಆಗಂತುಕನೂ ಮತ್ತೊಂದು ಕಡೆಯಿಂದ ಎಲ್ಲಿ ಗೋ ಹೊರಟು ಹೋದನು,

ಕೊಂಚಹೊತ್ತಾದಮೇಲೆ, ತೋಟದ ಮತ್ತೊಂದು ಭಾಗದಲ್ಲಿ ಅವರಿಬ್ಬರೂ ಮತ್ತೆ ಸಂಧಿಸಿದರು. ಆಗಂತುಕನು ಭಿಕ್ಷುಕನನ್ನು ನೋಡಿ, ಅದೇನು? ಶುಂಠಿಮಾವನ ಮನೆಗೆ ಹೋಗಲಿಲ್ಲ ? ಎಂದನು. ಶಚೀಂದ್ರನು, ವಿಸ್ಮಯದೊಡನೆ ಪುನಃ ನೀನು ಇಲ್ಲಿ ಯ ಸಿಕ್ಕಿದೆಯ ? ನಾನು ಎಲ್ಲೆಲ್ಲಿಯ ಸುತ್ತಿಕೊಂಡ ಮತ್ತೆ ನಿನ್ನಲ್ಲಿಗೆ ಬಂದು ಸೇರಿದುದು ನೋಡಿದರೆ, ನಿಜವಾ ಗಿಯೂ ಭೂಮಿಯು ಗುಂಡಾಗಿರಬೇಕಲ್ಲದೇ ಚಪ್ಪಟೆಯ ಗಿಲ್ಲ, ಗೋಲಾಕಾರವಾದ ಭೂಮಿಯಮೇಲೆ ನಾವು ಹೇಗೆ ಹೇಗೆ ಸಂಚರಿಸಿದರೂ ಎಂದಾದರೊಂದು ದಿನ ಈರೀತಿಯ ಲ್ಲಿಯೇ ಸೇರಬೇಕಾಗುವುದು. ಇರಲಿ; ಇಂದು ನಿನಗೆ ನಮಸ್ಕಾರ, ಬಾಹ್ಮಣನಾಗಿದ್ದರೆ ಪುಣಾಮ, ಎಂದು ಹೇ ಳುತ್ತಾ ಹೇಳುತ್ತಾ ತೋಟದಿಂದ ಪಾರಾದನು. ಆಗಂತು