ಪುಟ:ಮಿಂಚು.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

132

ಮಿಂಚು



ಒಂದು ಕಾಲದಲ್ಲಿ ಅರ್ಥಶಾಸ್ತ್ರದ ಪಾಠ ಹೇಳಿದ್ದ ಶಾಸಕ:
“ಅರ್ಥಮಂತ್ರಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ."
ಪ್ರತಿಪಕ್ಷದ ನಾಯಕ:
“ಸಪ್ಪೆ. ಅಭಿವೃದ್ಧಿಗಾಗಿ ಘೋಷಿಸಿರುವ ಸೌದಾಮಿನಿ ಪ್ರಣಾಳಿಕೆ ಅರ್ಥ--
ಶೂನ್ಯ."
ಸಮತಾ ಶಾಸಕ ದಂಡಪಾಣಿ :
“ಇಲ್ಲಿ ಇಲ್ಲದ ತೆರಿಗೆಗಳು ಮುಂದೆ ಮುಖ ತೋರಿಸುವುದು ಖಂಡಿತ.”
ಹಲವರು ಶಾಸಕರು ವಿದ್ಯಾಧರನ ಕೈ ಕುಲುಕಿದರು. ಅದನ್ನು ನೋಡಿಯೂ
ನೋಡದಂತೆ ಸುಮ್ಮನಿದ್ದಳು ಸೌದಾಮಿನಿ.
ಕಾರ್ಯಕಲಾಪಗಳ ಸಮಿತಿ ಸಭೆ ಸೇರಿ ಅಧಿವೇಶನದ ವೇಳಾಪಟಿಟ್ವೆಯನ್ನು
ಗೊತ್ತುಮಾಡಿತು.