ಈ ಪುಟವನ್ನು ಪರಿಶೀಲಿಸಲಾಗಿದೆ
180 ಮಿಂಚು “ಸರಿಯಪ್ಪ, ನೀವೇನೂ ಚಿಂತಿಸ್ಬೇಡಿ. ನಾಳೆ ಮಾತಾಡೋಣ," ಎ೦ದು
ಹೇಳಿ ರಾಜ್ಯಪಾಲರು ಒಳಕ್ಕೆ ನಡೆದೇ ಬಿಟ್ಟರು: * * * ತನ್ನ ನಿವಾಸದಲ್ಲಿ ಆ ರಾತ್ರೆ ಬೇಸರದ ಊಟ ಮುಗಿಸಿ, “ಫೋನಿನ ತಂಟೆಗೆ ಹೋಗ್ವೇಡ" ಎಂದು ಪರಶುರಾಮನಿಗೆ ಸೌದಾಮಿನಿ ನಿರ್ದೆಶವೀಯುತ್ತಿದ್ದಂತೆ, ಒಂದು ಅಂಬಾಸಡ್ ಕಾರು ಬಂತು. ಇಳಿದು ಧಡಧಡನೆ ಮೆಟ್ಟಲೇರಿದ ವ್ಯಕ್ತಿಯನ್ನು ಆಂಗರಕ್ಷಕರಾದ ರಮ್ ಧನ್-ಬೋಲಾನಾಥ್ ತಡೆದರು. ಬಂದವರು ನಾಯಕ್. ಪರಶುರಾಮ ಮುಖ್ಯಮಂತ್ರಿಯ ಕಡೆ ನೋಡಿದ. “ಬರಲಿ" ಎಂದಳು ಸೌದಾಮಿನಿ, ಇಲ್ಲಿಂದಲೇ ಹೊರದಬ್ಬಲೆ ? ಒಳಗೆ ಕರೆದು ಮಾತನಾಡಿಸಲೆ? ನಿಮಿಷದ
ನಿರ್ಧಾರ.
"ಒಳಗೆ ಬನ್ನಿ ಪ್ರತಿಪಕ್ಷದ ನಾಯಕರೆ, ಆರೋಪಗಳ ಪಟ್ಟಿ ಗೋಡೆಗೆ ಅಂಟಿ
ಸೋಣ ಅಂತ ಬಂದಿರಾ ?”
"ಪುಟ್ಬಾ!" - “ಏನಂದಿರಿ? ಕುಡಿದ ಅಮಲಿನಲ್ಲಿದೀರಾ ?” “ಆರೋಪದ ಪಟ್ಟಿ ವಾಪಸು ತಗೋತೀನಿ, ಒಂದೇ ಶರತ, ಒಳಗಿನ ಕೊಠಡಿಗೆ ನಡಿ.' “ನಾಲಿಗೆ ಬಿಗಿ ಹಿಡೀರಿ.” ಉದ್ವೇಗದಿಂದ ವಕ್ಷಸ್ಥಲ ಏರಿಳಿಯುತ್ತಿತ್ತು. ಒಮ್ಮೆಲೆ ನಾಯಕ ಅವಳನ್ನು
ಹಿಡಿದ.
" ಬಾರೇ!" ಮುಖ್ಯಮಂತ್ರಿಯ ಕರೆ ಕೇಳಿಸಿತು : “ರಾಮಧನ್, ಬೋಲಾನಾಥ್ !” ಅವರು ಮಾತಾಜಿಯ ಕಡೆಗೆ ಧಾವಿಸಿದರು. (ನಾಯಕರಾಗಲೇ ಸೌದಾಮಿನಿಯ ತೋಳನ್ನು ಬಿಟ್ಟಿದ್ದರು.)
“ಇವರನ್ನು ಗೌರವದಿಂದ ಅವರ ಕಾರಿನಲ್ಲಿ ಕೂಡ್ರಿಸಿ." “ಹ್ಲ. ಮಾತಾಜಿ, ಬನ್ರಿ ಸಾಹೇಬರೇ,” ಎಂದರು ಅಂಗರಕ್ಷಕರು.