ಈ ಪುಟವನ್ನು ಪರಿಶೀಲಿಸಲಾಗಿದೆ
ಮಿ೦ಚು 189 ಐ.ಜಿ.ಪಿ. ಮುಖ್ಯಮಂತ್ರಿ ನಿವಾಸಕ್ಕೆ ಹೊಗಬೇಕಾಯಿತು, ಕಾವಲು ಸಿಬ್ಬ೦ದಿ ಹತ್ತು ಹನ್ನೆರಡು ಕಲ್ಲು ಆರಿಸಿ ಇಟ್ಟಿದ್ದರು. ಮುಖ್ಯಮಂತ್ರಿ : “ಏನಾದರೂ ಗೊತ್ತಾಯಿತೇನ್ರಿ ?" ಐಜಿಪಿ : “ಒಂದು ತಂಡವನ್ನು ಹಿಡಿದು ತೀವ್ರ ತನಿಖೆ ನಡೆಸಿದ್ದೇವೆ, ಮಾತಾಜಿ." ಮುಖ್ಯಮಂತ್ರಿ: “ಬಿಡಬೇಡಿ, ತನಿಖೆ ಮುಂದುವರಿಸಿ." ಐಜಿಪಿ: " ನಾನೊ೦ದು ಸಲಹೆ ನೀಡಬಹುದೆ?" ಮುಖ್ಯಮಂತ್ರಿ : “ಏನದು?” ಐಜಿಪಿ : “ಅವತ್ತು ಮೂವರು ಶಾಸಕರನ್ನು ಹಿಡಿದು ಜಾಮೀನಿನ ಮೇಲೆ ಬಿಟ್ಟೆವಲ್ಲ? (ಎಲ್ಲ ಚಿಲ್ಲರೆ ಅಪಾದನೆ) ಕೇಸ್ ಗಳನ್ನು ವಾಪಸು ತೆಗೆದುಕೊಳ್ಳಲು ತಾವು ಆದೇಶವಿತ್ತರೆ, ಮುಖ್ಯಮಂತ್ರಿಯ ಬಗ್ಗೆ ಶಾಸಕರ ಮತ್ತು ಜನರ ಗೌರವ ಹೆಚ್ಚದೆ." ಮುಖ್ಯಮಂತ್ರಿ : “ಹಾಗೆಯೇ ಮಾಡಿ. ನನ್ನ ಹೃದಯ ಎಷ್ಟು ವಿಶಾಲ ಅನ್ನೋದು ಎಲ್ಲರಿಗೂ ಗೊತ್ತಾಗಲಿ.” ....ಮಾರನೆಯ ಬೆಳಗ್ಗೆ ಗುಪ್ತಚಾರ ದಳದ ಮುಖ್ಯಸ್ಥ ಬಂದ. “ನಿಮ್ಮ ದಾರಿಯನ್ನೇ ನೋಡ್ರಿದ್ದೆ.." ಎಂದಳು ಮುಖ್ಯಮಂತ್ರಿ. “ಸಿ.ಬಿ.ಐ, ಬೇಹುಗಾರಿಕೆ ಪೂರ್ತಿಯಾಗಲೀಂತ ಎರಡು ದಿನ ತಡಮಾಡಿದೆ." “ಆಯ್ತಾ ? ಅವರ ವರದಿ ಹೇಗಿರುತ್ತೊ ?” “ಅಸ್ಥಿರತೆ ಇದೆ, ಅಲುಗಾಡುವ ಸ್ಥಿತಿಗೆ ಇನ್ನೂ ಮುಟ್ಟಿಲ್ಲ." "ಅಸ್ಥಿರತೆ ತಲೆಕಾಯಿ ". “ಆದರೂ ಮಾತಾಜಿ, ತಾವೊಮ್ಮೆ ದಿಲ್ಲಿಗೆ ಹೋಗಿ ಬರೋದು ಮೇಲು ಅಂತ
ತೋರದೆ.”
ಸೌದಾಮಿನಿ ಸುಮ್ಮನಿದ್ದಳು. ಆದರೆ ಆ ಸಂಜೆಯೇ ದಿಲ್ಲಿಗೆ ಹಾರಲು
ನಿರ್ಧರಿಸಿದಳು. ಹಿ೦ದಿನ ಹಾಗೆಯೇ, ರಾಮ್ ಧನ್, ಅವಳು, ಪರಶುರಾಮ, ಬೋಲಾನಾಥ್, 'ಏನೂ ಬದಲಾಗಿಲ್ಲ-ಏನೂ' ವಾರ್ತಾ ಇಲಾಖೆ ಹೊರಡಿಸಿದ ಪತ್ರಿಕಾ ಟಿಪ್ಪಣಿಯಲ್ಲಿತ್ತು :
“ರಾಷ್ಟ್ರದ ಪ್ರಧಾನಿಯ ಕರೆ ಬಂದುದರಿಂದ ಮುಖ್ಯಮ೦ತ್ರಿ ದಿಲ್ಲಿಗೆ ಹೋಗಿ
ದ್ದಾರೆ, ಇದು ಮಾಮೂಲು ಭೇಟಿ. ಇದಕ್ಕೆ ರಾಜಕೀಯ ಮಹತ್ವವಿಲ್ಲ.”
ವಿದ್ಯಾಧರನಿಗೆ ಫೋನ್ ಮಾಡಿ ಮುಖ್ಯಮಂತ್ರಿ ಅಂದಳು : “ನಿಮ್ಮ ಸಹಿ ಸಂಗ್ರಹ ಕೆಲಸ ಮುಂದುವರೀಲಿ, ಎಲ್ಲ ಶಾಸಕರಿಗೂ ಫೋನ್
ಮಾಡಿ ಕಲಾಣನಗರಿಗೆ ಕರೆಸಿ." -