ಪುಟ:ಮಿಂಚು.pdf/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

248 ಮಿಂಚು

   “ಬೆಳಗ್ಗೆ ಎಷ್ಟು ಗಂಟೆಗೆ ಹೊರಡೋದು ಮಾತಾಜಿ ? ಈಗ ಮನೆಗೆ ಹೋಗಿ ಬೀಬಿಗೆ ಹೇಳಿ ಬರಬೌದಾಂತ ಆ ಡ್ರೈವರ್-ಕರೀಂ-ಕೇಳ್ತಿದ್ದಾನೆ.”
   "ಹೋಗಿ ಬರಲಿ. ನಾಲ್ಕೂವರೆಗೆ ಸರಿಯಾಗಿ ಇಲ್ಲಿಂದ ಪಯಣ. ಆರು ಗಂಟೆ ಚುಮು ಚುಮು ಬೆಳಗಾಗುವಾಗ ದರಿಯಾದೌಲತ್ ಸ್ನಾನ ಘಟ್ಟದಲ್ಲಿರಬೇಕು.”
   ವಿತರಣೆಯ ಕೆಲಸ ಮುಗಿಸಿ ಬರಲು ಪರಶುರಾಮ ತೆರಳಿದ.
   ರಾತ್ರೆ ಊಟ ಬೇಡ, ಎಂದಳು ಸೌದಾಮಿನಿ.
   "ಪರಶು, ಒಂದು ನಾಲ್ಕು ಯಾಲಕ್ಕಿ ಬಾಳೆಹಣ್ಣು ಸಿಕ್ಕಿದರೆ ತಂದ್ಕೊಡೊ."

ಸ್ವತಃ ಪರಶು ದೂರದಲ್ಲಿದ್ದ ಅಂಗಡಿಗೆ ನಡೆಯುತ್ತಲೂ ಓಡುತ್ತಲೂ ಹೋಗಿ ಒಂದು ಇಡೀ 'ಚೀಪು' ತಂದ.

   "ಮಲಗುವ ಮನೇಲೆ ಇಟ್ಬಿಡು ."