ಪುಟ:ಮಿತ್ರ ದುಖಃ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೧೩ ---

ವಂಥದೂ ಇರುವದರಿಂದ ಅಲ್ಲಿ ಎಂಥ ದಟ್ಟ, ಹಾಗು ದೊಡ್ಡ ಮರಗಳಿದ್ದರೂ ಅವು ಕಮರಿ, ಇಲ್ಲವೆ ಸುಟ್ಟು ಹೋಗತಕ್ಕವೇ. ಅಂಥಲ್ಲಿ ಹೊಸಗಿಡಗಳನ್ನು ಹಚ್ಚುವವರಾದರೂಯಾರು? ಮತ್ತು ಯಾವನಾದರೂ ಹಚ್ಚ ಹೋದರೆ, ಅವು ಅಲ್ಲಿ ನಾಟುವ ಬಗೆ ಯಾದರೂ ಹೇಗೆ? ಚಂದ್ರಾ, ನಿನ್ನ ಮಿತ್ರನ ಅನಿಷ್ಟ ಕಾಲು ಗುಣದ ಯೋಗದಿಂದ ಅವನು ಯಾವ ಯಾವ ದಾರಿಯಿಂದ ಹೋಗುವನೋ, ಆ ದಾರಿಯ ಎಡಬಲಗಳಲ್ಲಿ ಒಂದು ಹನಿ ನೀರು ಸಹ ಉಳಿಯಲಾರದು. ನಾನು ಸದಾ ಮಹಾಸಾಗರದ ನೀರನ್ನು ಶೋಷಿಸುತ್ತಿರುತ್ತೇನೆ; ನನ್ನ ಶೋಷಣದಿಂದ ದೊಡ್ಡ ಹೊಳೆಗಳ ಬತ್ತಿ ಬಯಲಾಗುವವು. ಇಂಥ ಅಪಾತ ದಾ ಕಾರನ ದಾರಿಯಲ್ಲಿ ಅದಾವನು ಕೆರೆಬಾವಿಗಳನ್ನು ತೋಡತೊ ಡಗುವನು? ಹಾಗು ಅವು ಅಲ್ಲಿ ಉಳಿಯುವ ಬಗೆಯಾದರೂ ಹೇಗೆ? ಮಿತ್ರಾ, ನನಗೆ ಅದಾವ ಅನುಕೂಲತೆಯ ಆಗುವ ಸಂಭವವಿಲ್ಲ; ಆದ್ದರಿಂದ ನಾನು ಬಿಸಿಲು-ಬಾಯಾಂಕಗಳನ್ನು ಲೆಕ್ಕಿಸದೆ ಒಂದೇಸವನೆ ದಾರೀಕ್ರಮಿಸುತ್ತಿರಬೇಕಾಗುತ್ತದೆ.

ನನ್ನ ಬಿಸಿಲ ತಾಪವು ತಮಗೆ ಆಗಬಾರದೆಂದು ಆ ಬಿಸಿಲ ನಿವಾರಣಾರ್ಥವಾಗಿ ತಮ್ಮ ತಲೆಯ ಮೇಲೆ ಕೊಡಿಯನ್ನು ಹಿಡಿ ದುಕೊಳ್ಳುವ ಒಂದು ಹೊಸಯುಕ್ತಿಯನ್ನು ಮನುಷ್ಯರು ಕಂಡು ಹಿಡಿದಿರುವರು! ಮಿತ್ರಾ, ಅವರ ಬುದ್ದಿಶಾಲಿತ್ಯವನ್ನು ಕಂಡು ನನಗೆ ಕ್ಷಣ ಹೊತ್ತು ಪರಮ ಸಂತೋಷವೆನಿಸುತ್ತದೆ. ರಾಜಮಹಾರಾಜರಂತೂ ಛತ್ರವನ್ನು ಹಿಡಿಯುವ ತೊಂದರೆಯು ಕಂಡ ತಮಗಾಗಬಾರದೆಂದು ಆ ಕೆಲಸಕ್ಕಾಗಿ ಬೇರೊಬ್ಬನನ್ನು ನಿಯೋಜಿಸಿ ಸುಖಬಡುತ್ತಾರೆ!! ನಾನೂ ಅವರ ಆ ಯುಕ್ತಿ ಯ ಲಾಭವನ್ನು ಮಾಡಿಕೊಳ್ಳುವ ಸಲುವಾಗಿ ನನಗೋಸ್ಕರ ಒಂದು ಸುದೀರ್ಘವಾದ ಛತ್ರವನ್ನು ಮಾಡಿಸಿದನು; ಹಾಗು