ಪುಟ:ಮಿತ್ರ ದುಖಃ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೧೫ ---

ನೋಡಿ ಭ್ರಾತೃದುಃಖದಿಂದ ಚಂದ ನಮನಸ್ಸು ವಿಶೇಷ ವಾಗಿ ಕಳವಳಗೊಂಡಿತು. ಮತ್ತು ಅವನು ಕಾರಣವಿಲ್ಲದೆ ಅತ್ತಿತ್ತ ಸುಳಿದಾಡುವ ಗಾಳಿಯ ಒಂದು ಸುಳುವಿಗೆ ಒಂದು ಬೀಸಣಿಕೆಯನ್ನು ತಕ್ಕೊಂಡು ಸೂರ್ಯನಿಗೆ ಗಾಳಿಬೀಸಲಿಕ್ಕೆ ಸೂಚಿಸಿದನು. ಚಂದ್ರನ ಸೂಚನೆಯನ್ನು ಮನ್ನಿಸಿ, ಆ ಗಾಳಿ ಯ ಸುಳುವು ಒಬ್ಬ ಪರಿಚಾರಿಕೆಯಂತೆ ತನ್ನ ಕೆಲಸವನ್ನು ಬಹು ಚನ್ನಾಗಿ ಮಾಡಿತು. ಅದರಿಂದ ಮಿತ್ರನಿಗೆ ಸ್ವಲ್ಪ ಸಮಾಧಾನವೆನಿಸಿತು. ಆದರೆ ಸ್ವಾಭಾವಿಕವಾಗಿ ತಣ್ಣಗಿದ್ದ ಆ ಗಾಳಿಯು ಕೂಡ ಕೆಲಹೊತ್ತಿನಲ್ಲಿ ಸೂರ್ಯನಿಗೆ ಬೆಚ್ಚಗಾ ದಂತ ತೋರಿತು; ಹಾಗು ಅದರಿಂದ ಅವನ ದುಃಖದ, ಹಾಗು ಸಂತಾಪದ ಜ್ವಾಲೆಗಳು ಒತ್ತರದಿಂದ ಏಳಹತ್ತಿದವು. ಆಗ ಅವನು ಆ ದುಃಖವನ್ನು ಸಹಿಸಲಾರದೆ ಚಂದ್ರನಿಗೆ ಹೇಳಿದನೇ ನಂದರೆ:-

ಚಂದ್ರಾ, ಮಾಡುವದೇನು? ಈ ದುಃಖದಿಂದ ಯಾ ವಾಗಲೂ ನನಗೆ ಸಂತಾಪವಾಗುತ್ತದೆ. ಆದರೆ ಆ ಸಂತಾಪ ವನ್ನು ಕಳಕೊಳ್ಳಲಿಕ್ಕೆ ನನ್ನಲ್ಲಿ ಒಂದೂ ಸಾಧನವಿಲ್ಲ. ಮನು ಷ್ಯರಿಗಾದರೆ ತುಸು ಸಂತಾಪವಾದರೂ, ಅವರು ಯಾವ ದೊಂದು ವಿಶಾಲವಾದ ಶೀತೋದಕದ ಜಲಾಶಯದಲ್ಲಿ ಮನದ ಣಿಯಾಗಿ ಈಸು ಬೀಳುತ್ತಾರೆ; ಮತ್ತು ಅದರಿಂದ ಅವರ ಸಂ ತಾಪವು ಪರಿಹುದು ಅವರಿಗೆ ಬಹಳ ಸಮಾಧಾನವೆನಿಸು ಇದೆ; ಆದರೆ ನನ್ನ ಹತ್ತಿರ ಆ ಸಾ ಧ ನ ವೂ ಇಲ್ಲ, ನನ್ನ ಕೆಳಗಿರುವ ಈ ಶೀತೋದಕದಿಂದ ತುಂಬಿದ ಬಹು ದೊಡ್ಡ ಸಮುದ್ರವು ಎಲ್ಲ ಕಡೆಗೂ ಪಸರಿಸಿರುತ್ತದೆ. ಅದನ್ನು ನೋಡಿದೊಡನೆಯೇ ಇದರಲ್ಲಿ ಒಮ್ಮೆಲೆ ದುಮುಕಿ ಬಿಡಬೇ ಕೆನ್ನುವ ಹಾಗೆನಿಸುತ್ತದೆ; ಹಾಗು ಇದರ ಈ ಅಗಾಧ