ಪುಟ:ಮಿತ್ರ ದುಖಃ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೧೯ ---

ಏನಾಗಿದೆಯೆಂಬದನ್ನು ನೀನು ಕಣ್ಣಾರೆ ನೋಡುತ್ತಲೇ ಇರುವೆ, ಅವನ ಕೂಡ ನಾವೂ ಈ ಸಂಕಟಗಳಿಗೀಡಾಗಿದ್ದೇವೆ, ಅದರೆ ಮಾಡುವದೇನು? ಸ್ವತಃ ಯಜಮಾನನ ಕಷ್ಟಗಳೇ ನಿವಾರಣವಾಗದಿರುವಲ್ಲಿ, ನಮ್ಮ ೦ಧ ಆತನ ಸಾರಥಿ ಮೊದಲಾದ ವರ ಕಷ್ಟದ ಪರಿಮಾರ್ಜನ ಮಾಡುವವರಾರು? ನನ್ನ ಅವಸ್ಥೆ ಯನ್ನು ನೋಡು. ಹೇಳಿ ಕೇಳಿ ನಾನು ಹೆಳವನು; ಸುಮ್ಮ. ನೆ ರಥದಲ್ಲಿ ಕುಳಿತು ಕುದುರೆಗಳನ್ನು ಹೊಡೆಯುವ ಕೆಲಸವು ನನ್ನ ಕಡೆಗಿದೆ. ಅಂತೇ ನಾನು ರಾ ಗಾದರೂ ಈ ಕೆಲಸ ವನ್ನು ಈ ವರೆಗೂ ಮಾಡುತ್ತಿರುತ್ತೇನೆ; ಆದರೆ ರಧದಲ್ಲಿ ಒಂದೇ ಸವನೆ ಕೂತು ಕೂತು ಸಹ ನನ್ನ ವೆಯ್ಯು ತೀರ ನೋಂದು ಹೋಗಿದೆ. ಹೀಗಿದ್ದರೂ ನನಗೆ ಬರೇ ಕೂತು ಕೊಂಡೇ ಕೆಲಸ ಮಾಡುವದದೆ; ಆದರೆ ನಮ್ಮ ರಾದ ಈ. ಕುದುರೆಗಳ ಕಡೆಗೆ ನೋಡಿದರೆ, ನನ್ನ ಹೃದಯವು ವಿದಾರಣ ವಾಗಿ ಹೋಗುತ್ತದೆ; ದಾಗು ನನ್ನ ಹೃದಯವು ದುಃಖ ದಿಂದ ಹೇಗೆ ವಿದಾರಣವಾಗುತ್ತದೆ, ಹಾಗೆಯೇ ನನ್ನಿ ಕುದು ರೆಗಳ ಹೃದಯಗಳು ಸತತವಾಗಿ ಓದುವ ಪುಶ್ರಮದಿಂದ ವಿದಾರಣವಾಗುತ್ತಿರಬಹುದೆಂದು ನನಗೆ ತೋರುತ್ತದೆ. ಆ ಒಡಪ್ರಾಣಿಗಳಿಗೆ ಒಂದೇ ಸಮನೆ ಓಡಬೇಕಾಗುತ್ತದೆ. ಅವು ಗಳಿಗೆ ವಿಶ್ರಾಂತಿಯೆಂಬುದು ಗೊತ್ತೇ ಇಲ್ಲ; ಉಳಿದವರ ರಥ ಗಳ, ಹಾಗು ಟಾಂಗಾಗಳ ಕುದುರೆಗಳು ಕಾಲಕಾಲಕ್ಕೆ ನೀರು ಕುಡಿಯತ್ತವೆ, ಹುಲ್ಲು ತಿನ್ನುತ್ತವೆ; ಮತ್ತು ವಿಶ್ರಾಂ ತಿಯನಂತರ ಹೊಸ ಹುರುಪಿನಿಂದ ತಮ್ಮ ಕೆಲಸಕ್ಕೆ ಒಯ್ಯಲ್ಪ ಡುತ್ತವೆ. ಆದರೆ ಸೂರ್ಯನ ಈ ಕುದುರೆಗಳಿಗೆ ಮೇವು, ನೀರು ಮುಂತಾದವುಗಳೊಂದೂ ಸಿಗುವದಿಲ್ಲ. ಉ ದಯಾಚಲ ದ ತಪ್ಪಲಿನಲ್ಲಿ ಹುಟ್ಟಿದ ಎಳೆ ಎಳೆ ಕರಿಕೆಯನ್ನು ತಿನ್ನು ವದ