ಪುಟ:ಮಿತ್ರ ದುಖಃ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೨೦ ---

ಕ್ಕಾಗಿ, ಅವು ನನ್ನ ಕೈಯ ಲಗಾಮಿನ ಎಳತವನ್ನು ಕೂಡ ಲೆಕ್ಕಿಸದೆ ತಮ್ಮ ಗೋಣುಗಳನ್ನು ತುಸು ಬೊಗ್ಗಿ ಸ ಹತ್ತುತ್ತವೆ; ಆದರೆ ಸುಮಾರು ಮೂವತ್ತು ಗಳಿಗೆಗಳಲ್ಲಿ ಸಂ ಪೂರ್ಣ ಗೋಲಾರ್ಧವನ್ನು ದಾಟುವದಾಗಲಿಕ್ಕಿಲ್ಲೆಂಬ ಅಂಜಿ ಕೆಯಿಂದ ನಾನು-ಅವುಗಳ ನಿರ್ದಯನಾದ ಸಾರಥಿಯು - ಅವು ಗಳ ಬೆನ್ನ ಮೇಲೆ ಯಾವಾಗ ಈ ಚಬಕದಿಂದ ಚನ್ನಾಗಿ ಹೊಡೆ ಯುವೆನೋ, ಆ ಕಾಲಕ್ಕೆ ಈ ಕಬಕ ದ ಪೆಟ್ಟು ಕುದುರೆಗಳ ಮೈಗೆ ಎಷ್ಟು ಬಲವಾಗಿ ತಾಕುವದೋ, ಅದಕ್ಕಿಂತಲೂ ನೂ ರಾರು ಪಟ್ಟು ಹೆಚ್ಚು ಅದು ನನ್ನ ಅಂತರಂಗಕ್ಕೆ-ಹೃದಯಕ್ಕೆ ತಗಲುವದು! ಆದರೆ ಅದಕ್ಕೆ ನಾನೇನು ಮಾಡಲಿ? ಆ ಪಾತ ಕದ ದೋಷವು ನನ್ನ ಕಡೆಗೆ ಯತ್ನಿಂಹವೂ ಇಲ್ಲ; ಆದರೆ ಇದಕ್ಕೂ ಹೆಚ್ಚು ನಿಷ್ಟುರತೆಯನ್ನು ನಾನು ಪ್ರತಿದಿವಸ ಮಧ್ಯಾಹ್ನ ದಲ್ಲಿ ತಾಳಬೇಕಾಗುತ್ತದೆ. ಮಧ್ಯಾ: ಸ್ನ ದಲ್ಲಿ ಬಿಸಿಲು ತಾಸ ದಿಂದ ಸರ್ವತ್ರದಲ್ಲಿಯ ಉ೨ ಉರಿ ಆಗುತ್ತಿರುತ್ತದೆ. ಆ ಕಾಲಕ್ಕೆ..... ಹೀಗೆಂದು ನುಡಿದು ಅರುಣನು ತುಸು ತಡೆದು ತನ್ನ ಕುದುರೆಗಳ ಮೈ ಬೆವರನ್ನು ಒರಿಸಿ, ಅವುಗಳನ್ನು ಜಪ್ಪ ರಿಸಿ ಪುನಃ ಅವನು ಹೇಳುತ್ತಾನೆ. “ಚಂದ್ರಾ, ನಮ್ಮಿ ಕುದು ರೆಗಳ ಸ್ಥಿತಿಯು ಬಹಳ ಕರುಣಾಸ್ಪದವಾಗಿರುತ್ತದೆ. ಓಡು ವಾಗ ಅವು ತನ್ನ ಮೊಲೆಗಳನ್ನು ಸ್ವಾಭಾವಿಕವಾಗಿ ಕೆಳಗಡೆ ಭೂಮಿಯ ಕಡೆಗೆ ಮಾಡಿ ಓಡುತ್ತಿರುತ್ತವೆ; ಅದರಿಂದ ಸೃಥ್ವಿತಲದ ಮೇಲೆ ಏನೇನು ನಡೆದಿರುತ್ತದೆಂಬುದು ಸಹಜ ವಾಗಿಯೇ, ಅವುಗಳ ಕಣ್ಣಿಗೆ ಬೀಳುತ್ತದೆ. ಅವು ಮಧ್ಯಾಹ್ನ ಹೊತ್ತಿನಲ್ಲಿ ಭೂಮಿಯ ನಾಲ್ಕೂ ಕಡೆಗೆ ನೋಡುತ್ತವೆ; ಆ ಕಾಲಕ್ಕೆ ಎಲ್ಲಿಯ ರಥವಾಗಲಿ, ಟಾಂಗೆಯಾಗಲಿ, ಕುದು