ಪುಟ:ಮಿತ್ರ ದುಖಃ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೨೭ ---

ಸೂರ್ಯನ ಈ ಭಾಷಣವನ್ನು ಕೇಳಿ, ಚಂದ್ರನು ಮನ ಸ್ಸಿನಲ್ಲಿ ಅಸ್ಪುಟವಾಗಿ ಬಹಳ ಹೊತ್ತಿನ ವರೆಗೆ ನಕ್ಕನು. ಆದರೆ ಆ ನಗೆಯು ಕೊಂಚವೂ ಬೈಲಿಗೆ ಬೀಳದಂತೆ ಅವನು ಎಚ್ಚರಿಕೆ ಯನ್ನು ತಾಳಿದ್ದನು. ಯಾಕಂದರೆ, ಸೂರ್ಯನು ತನಗಿಂತ ಲು ಶ್ರೇಷ್ಠನ, ತನ್ನ ಪರಿಪೋಷಕನೂ ಆಗಿರುವದರಿಂದ ಅವನ ಅವಮಾನವಾಗಬಾರದೆಂದು ಅವನ ಸನ್ನಿಧಿಯಲ್ಲಿರುವ ವರೆಗಾದರೂ, ಅಂದರೆ ಅಮಾವಾಸ್ಯೆಯ ದಿವಸ ಸ್ವಲ್ಪವೂ ನಗಬಾರದೆಂದು ಚಂದ್ರನು ನಿಶ್ಚಯಿಸಿದ್ದನು; ಮತ್ತು ಅವನು ಆ ನಿಯಮವನ್ನು ಈ ವರೆಗೂ ತಪ್ಪದೆ ಪಾಲಿಸುತ್ತ ಬಂದಿರು ವನು. ಆದ್ದರಿಂದ ಮೇಲೆ ಹೇಳಿದಂತೆ ಚಂದ್ರನು ಸೂರ್ಯನ ಮಾತನ್ನು ಕೇಳಿ ಮನಸ್ಸಿನಲ್ಲಿ ಹೊಟ್ಟೆ ತುಂಬ ನಕ್ಕರೂ, ಆ ನಗೆಯು ಹೊರಗೆ ಸ್ವಲ್ಪವೂ ಕಾಣದಂತೆ ಎಚ್ಚರಪಟ್ಟಿದ್ದನು. ಬಳಿಕ ಅವನು ತನ್ನ ನಗೆಯನ್ನು ಅಲ್ಲಿಂದಲೇ ಬಚ್ಚಿಟ್ಟು ಸೂ ರ್ಯನೊಡನೆ ಕೆಲವು ಸುಖ-ಸಲ್ಲಾಪಗಳನ್ನಾಡಬೇಕೆಂದಿದ್ದನು. ಆದರೆ ಅಷ್ಟರಲ್ಲಿ ತನ್ನ ದುಃಖದ ಜ್ವಾಲೆಗಳನ್ನು ತಡೆಯಲಸ ಮರ್ಥನಾದ ಸೂರ್ಯನು ವ ಅತ್ತೆ ಮಾತಾಡಲುಪಕ್ರಮಿಸಿ ದನು:- "ಚಂದ್ರಾ ನನಗೆ ಸುಖವಿಲ್ಲ-ಸಮಧಾನವಿಲ್ಲ, ಗೆಳೆಯರೂ ಇಲ್ಲ, ಬೇಕಾದವರೂ ಇಲ್ಲ, ನಿದ್ದೆಯ ಇಲ್ಲ, ಶಾಂತತೆಯ ಇಲ್ಲ, ಶೀತಲವೂ ಇಲ್ಲ. ನೀರಿನ ತಂಪಿನಿಂದಾ ಗುವ ಸುಖವು, ಇಲ್ಲವೆ ಕತ್ತಲೆಯೊಳಗೆ ಆರಾಮಿಗಾಗಿ ಕುಳಿ ತರೆ ಆಗುವ ಸಮಾಧಾನವು ಹೇಗಿರುತ್ತದೆಂಬದು ನನಗೆ ಗೊ ಇಲ್ಲ. ಈ ದುಃಖದಿಂದ ನಾನುಹಗಲಿರುಳು ಒಂದೇ ಸವನೆ ಸುಟ್ಟು ಬೆಯ್ಯುತ್ತಿರುತ್ತೇನೆ. ನಾನು ಇಷ್ಟು ದುಃಖಪಡು ತಿದ್ದರೂ, ಸುಮ್ಮನೆ ಮಾತಾಡಿಸಲಿಕ್ಕೆಂದು ನನ್ನೆಡೆಗೆ ಯಾರೂ