ಪುಟ:ಮಿತ್ರ ದುಖಃ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೩೩ ---

ನೆಂದು ತಿಳಿಯುತ್ತಿರುತ್ತೇನೆ. ಆದರೆ ಒಂದೆರಡು ಗಳಿಗೆಯಾದ ಬಳಿಕ ನೋಡುವಷ್ಟರಲ್ಲಿ ಕೇವಲ ದುಃಖದಿಂದ ಬಳಲಲಿ ಕಂದು ಜನ್ಮವೆತ್ತಿದ ಈ ನಿನ್ನ ಹಿರಿಯಣ್ಣನು ಪುನಃ ಅಮ ರನಾಗಿಯೇ ಇರುತ್ತಾನೆ. ಈ ಸ್ಥಿತಿಯಲ್ಲಿ ಅಮರನಾಗಿರು ವದಾದರೂ ಒಂದು ಪ್ರಕಾರದ ಶಿಕ್ಷೆಯೇ ಆಗಿರುತ್ತದಲ್ಲವೆ? ಮಾರುತಿಯು ಹುಟ್ಟಿದೊಡನೆಯೇ ಯಾವದೊಂದು ಕೆಂಪಾದ ಹಣ್ಣೆಂದು ನುಂಗಿ ನನ್ನನ್ನು ಈ ದುಃಖದಿಂದ ಮುಕ್ತನನ್ನಾಗ ಮಾಡುವ ಮೊದಲನೇ ಪರೋಪಕಾರದ ಕೆಲಸಕ್ಕೆ ಪ್ರಯತ್ನಿಸಿ ದ್ದನು. ಆದರೆ ನನ್ನ ದೈವಹೀನತ್ವದಿಂದ ಅವನ ಆ ಪ್ರಯತ್ನ ವು ಸಫಲವಾಗಲಿಲ್ಲ. ಯಾಕಂದರೆ ಆ ಮಹಾಬಲಿಷ್ಠ ವಜ್ರ ಶರೀರದ ಹನುಮಪ್ಪನ ಶಕ್ತಿಗಿಂತಲೂ ಈ ದುರ್ದೆನಿಯ ಸಾಮರ್ಥವು ಆಗ ಬಲವಾಯಿತು. ಜಯದ್ರಧನ ವಧದ ಪ್ರಸಂಗದಲ್ಲಿ ಶ್ರೀ ಕೃಷ್ಣ ಪರಮಾತ್ಮನು ನನ್ನನ್ನು ಕೆಲ ಹೊತ್ತು ತನ್ನ ಚಕ್ರದ ಮರೆಗಿರಿಸಿದ್ದನೆಂಬದು ನಿನಗರಿಯದ ಸಂಗತಿಯಲ್ಲಿ ಆ ಕಾಲಕ್ಕೆ ಭಗವಾನ್ ಶ್ರೀ ಕೃಷ್ಣನಿಗೆ ನಾನು ಬಹಳವಾಗಿ ಹೇಳಿಕೊಂಡೆನು. ಅದೇನಂದರೆ,-“ಕೃಷ್ಣಾ, ಮುಹೂರ್ತಮಾತ್ರವೇ ನನಗೇಕೆ ಈ ಸುದರ್ಶನದ ಮರೆಗಿರ ಲಿಕ್ಕೆ ಹೇಳುತ್ತೀ? ನಾನು ಸಂಪೂರ್ಣವಾಗಿ ನಿಲಯಂ ದಲಿಕ್ಕೆ ಸಿದ್ಧನಾಗಿರುತ್ತೇನೆ. ಆದ್ದರಿಂದ ಈ ಸುದರ್ಶನವನ್ನು ನೀನು ಕ್ಷಣ ಮಾತ್ರ ನನ್ನ ಮುಂದಿಡದೆ, ಶ್ರೀ ಭೀಷ್ಮಾಚಾ ರ್ಯರ ಮೇಲೆ ಇದನ್ನು ನೀನು ಹೇಗೆ ಪ್ರಯೋಗಿಸಲಿಕ್ಕೆ ಸಿದ್ಧ ನಾಗಿದ್ದೆಯೋ, ಆ ಪ್ರಕಾರ ನೀನು ಈ ಸುದರ್ಶನಚಕ್ರವನ್ನು ನನ್ನ ಮೈ ಮೇಲೆ ಚಲ್ಲು. ಅಂದರೆ ನಿನ್ನ ಜಯದ್ರಥ ವಧದ ಕಾರ್ಯವೂ ಕೊನೆಗಾಣುವದು; ಹಾಗು ನನ್ನ ಆತ್ಮ ವಧದ ಕೆಲಸವೂ ಪೂರೈಸುವದು, ಆದರೆ ನನ್ನನ್ನು ಕರ್ಣನ ತಂದೆ