ಪುಟ:ಮಿತ್ರ ದುಖಃ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೩೪ ---

ಯೆಂದು ತಿಳಿದೋ ಏನೋ, ನನ್ನ ಮೇಲೆ ಪರೋಪಕಾರ ಮಾ ಡುವ ಬುದ್ದಿಯು ಆ ದ್ವಾರಕಾಧೀಶ್ವರನಾದ ಶ್ರೀ ಕೃಷ್ಣ ಪರ ಮಾತ್ ನಲ್ಲಿಯ ಹುಟ್ಟಲಿಲ್ಲ. ಚಂದಾ, ಇದರ ಮೇಲಿಂದ ನಾನು ನನ್ನ ಜೀವಿತದ ಬಗ್ಗೆ ಎಷ್ಟರ ಮಟ್ಟಿಗೆ ಬೇಸರಗೊಂಡಿ ರುವೆನೆಂಬದರ ಕಲ್ಪನೆಯು ನಿನಗಾಗಬಹುದು. ನಾನು ನನ್ನಿ ಜೀವಿತದ ರಹಸ್ಯವನ್ನು ಈ ವರೆಗೆ ಯಾರಿಗೂ ಹೇಳಿದ್ದಿಲ್ಲ; ಆದರೆ ಈ ದಿವಸ ನನ್ನ ಮನಸ್ಸು ತಡೆಯದ್ದರಿಂದ ಇದನ್ನು ನಿನ್ನೆ ದುರಿಗೆ ತೋಡಿಕೊಂಡಿರುತ್ತೇನೆ. ನಿನ್ನೆದುರಿಗೆ ಇದು ವರೆಗೆ ತೋಡಿಕೊಳ್ಳದಿರುವದರ ನಿಜವಾದ ಕಾರಣವೇನೆಂದರೆ, ನನ್ನ ತಾಪವು ನಿನಗಾಗಬಾರದೆಂದು ನನ್ನಿಂದಾದಷ್ಟು ದೂರವಿ ರಬೇಕೆಂಬ ಇಚ್ಛೆಯಿಂದ ನೀನು ಕದಾಚಿತ್ ನನಗೆ ಭೆಟ್ಟಿಯ ಗುತ್ತಿರಲಿಕ್ಕಿಲ್ಲ. ಅಂತೇ ನಾನಾದರೂ ಅದೇ ಕಾರಣದಿಂದ ನಿನ್ನಿಂದ ಶಕ್ಯವಿದ್ದಷ್ಟು ಅಂತರದಲ್ಲಿ ಓಡಾಡುತ್ತಿರುತ್ತೇನೆಂ ಬದು ನಿನ್ನ ಲಕ್ಷ್ಯದಲ್ಲಿ ಬಂದಿರಲಿಕ್ಕಿಲ್ಲ. ಒಬ್ಬ ಅಣ್ಣನು ತನ್ನ ಬೆನ್ನಿಗೆ ಬಿದ್ದ ಖಾಸ' ತಮ್ಮನನ್ನು ಈ ಪ್ರಕಾರವಾಗಿ ಎಂದೂ ತಿರಸ್ಕರಿಸಬಾರದೆಂಬದು ನನಗೆ ತಿಳಿಯುತ್ತದೆ! ಆದರೆ ಮಾಡಲೇನು? ನನಗೆ ನನ್ನಿ ದುಃಖ ಪೂರ್ಣ ಜೀವಿತವು ಸಾಕು ಸಾಕಾಗಿ ಹೋಗಿರುತ್ತದೆ. ಮತ್ತು ಈ ಜೀವಿತವು ಯಾವಾ ಗೊಮ್ಮೆ ತೀರಿ ಹೋದೀತೋ ಎಂದೆನಿಸಿರುತ್ತದೆ. ಈ ಪ್ರಕಾ ರದ ಮನಸ್ಸಿನ ಸ್ಥಿತಿಯ ಮೂಲಕ ನಾನು ನಿನ್ನಿಂದ ಸಾಧ್ಯವಿ ದ್ದಷ್ಟು ದೂರವೇ ಇರುತ್ತೇನೆ. ಯಾಕಂದರೆ, ನೀನು ಅಮ್ಮ ತದ ಆಗರವೇ ಆಗಿರುತ್ತೀಯಷ್ಟೇ, ನಿನ್ನ ಅರ್ದ ಸ್ವಭಾವ ಹೈನುಸರಿಸಿ, ನೀನು ನಿನ್ನಿ ಅಣ್ಣನ ದುಃಖವನ್ನು ನೋಡಲಾ ರದ ದುಃಖದಿಂದ ಒಂದಾನೊಂದು ಚಂದ್ರಕಾಂತ ಕಲ್ಲಿನಂತೆ ಕರಗಹತ್ತಬಹುದು. ಆಗ ನಿನ್ನ ಕಣ್ಣುಗಳಿಂದ ದುಃಖಾಶ್ರುಗ