---೪---
ಮ್ಯವಿತ್ತು. ಒಬ್ಬನ ಸ್ವಭಾವವು ಬಹಳ ಉಗ್ರವಾದರೆ, ಇನ್ನೂ
ಬೃನ ಪ್ರಕೃತಿ ಗುಣವು ತೀರ ಶಾಂತವು. ಹೀಗೆ ಇವರ ಸ್ಥಿತಿ
ಯಾಗಿತ್ತು; ಮತ್ತು ಕಾಲಮಾನದಿಂದ ಅದರಲ್ಲಿ ಈ ವರೆಗೆ
ಏನೂ ಸ್ಥಿತ್ಯಂತರವಾಗಿರುವದಿಲ್ಲ. ದಾಯಾದಿಗಳಾದ ಇಬ್ಬರು
ಅಣ್ಣ ತಮ್ಮಂದಿರಂತೆ ಇವರೀರ್ವರ ಅವಸ್ಥೆಯಿತ್ತು. ಇವರು
ಪರಸ್ಪರರಿಂದ ಶಕ್ಯವಿದ್ದಷ್ಟು ದೂರವಿದ್ದು, ತಮ್ಮಷ್ಟಕ್ಕೆ ತಾವಿ
ರುತ್ತಿದ್ದರು. ಆದರೂ ಇವರು ಪರಸ್ಪರರನ್ನು ದ್ವೇಷಿಸುತ್ತಿದ್ದ
ರೆನ್ನುವ ಹಾಗಿದ್ದಿಲ್ಲ. ಹೆಚ್ಚಾಗಿ ಪ್ರೇಮವೂ ಇಲ್ಲ- ದ್ವೇಷವು
ಇಲ್ಲ. ಈ ಪ್ರಕಾರದ ಸವಿನುಡಿಯ ಮಧ್ಯಮ ತರದ ಆಚರಣೆ
ಯು ಇವರಲ್ಲಿತ್ತು. ಆದರೆ ಅಲ್ಪ ಪ್ರಮಾಣದ ಭಾಗಾದಿತನ
ದಹಗೆತನದ ಅಂತಃಕರಣದಿಂದ ಇವರು ಪರಸ್ಪರರನ್ನು ನೋಡು
ತಿದ್ದರು.
ಈ ಸ್ಥಿತಿಯಲ್ಲಿ ಒಂದು ದಿನ ಮೇಲೆ ಹೇಳಿದಂತೆ ಇವ
ರೀರ್ವರ ಭೆಟ್ಟಿಯಾಯಿತು. ತನ್ನ ಸುಖದುಃಖಗಳನ್ನು ಚ೦
ದ್ರನಿಗೆ ತಿಳಿಸಬೇಕೆಂದು ಸೂರ್ಯನು ಎಷ್ಟೋ ಪಕ್ಷ-ಮಾಸಗ
ಳಿಂದ ಅವನ ಭೆಟ್ಟಿಯ ನಿರೀಕ್ಷಣೆಯಲ್ಲಿದ್ದನು. ಕಡೆಗೆ ಅದು ಒಂದು
ಅಮಾವಾಸ್ಯೆಯ ದಿವಸ ಬೆಳಗಿನ ಜಾವಿನಲ್ಲಿ ಆ ಸುಸಂ ಧಿಯು ಪ್ರಾಪ್ತವಾಯಿತು.
ಆ ಕಾಲದಲ್ಲಿ ಆಕಾಶದಲ್ಲಿ ಇವರಿಬ್ಬರ ಹೊರತು ಮ
ರನೆಯವರು ಯಾರೂ ಇದ್ದಿಲ್ಲ. ಎಲ್ಲ ಕಡೆಗೂ ನಿಶ್ಯಬ್ದವೆ.
ಗಿದ್ದು, ಪ್ರಾತಃಕಾಲದ ಶಾಂತತೆಯು ನಾಲ್ಕೂ ದಿಕ್ಕುಗಳಲ್ಲಿ
ಸಂಪೂರ್ಣವಾಗಿ ಪ್ರಸ್ಥಾಪಿತವಾಗಿತ್ತು. ರಾತ್ರಿಯು ಈ
ಮೊದಲೇ ಕಳೆದು ಹೋಗಿತ್ತು; ಹಾಗು ನಿಶೆಯ ಪ್ರಿಯಕರ
ನಾದ ತಮೋರಾಜನಾದರೂ ಆಕೆಯ ಹಿಂದಿನಿಂದ
ಎಲ್ಲಿಯೊ ಹೋಗಿಬಿಟ್ಟಿದ್ದನು. ಚಂದ್ರ-ಸೂರ್ಯರ ಭೆಟ್ಟಿಯ ಆದಿವಸವ