ಪುಟ:ಯಶೋಧರ ಚರಿತೆ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೪

ಯಶೋಧರ ಚರಿತೆ

ಅವಧಾರಿಸಿ ಕೇಲ್ವುದುಮದ
ರವಧಿಯಿನಾಸನ್ನಭವ್ಯನೆಂಬುದನರಿದಿಂ-
ತವರಿಂತು ನುಡಿದರಾತ್ಮನ-
ನವಿಕಲ್ಪಂ ನೆನೆಯುತಿರ್ದೆವೆನೆ ಮತ್ತಾತಂ೧೬

ಆವೆಡೆಯೊಳಿರ್ದನಾತ್ಮಂ-
ಗಾವುದು ಕುರುಪೆಂದೊಡಂಗಿಯಂಗದೊಳೆಲ್ಲಂ
ತೀವಿರ್ಪಂ ಭೂತಚತು-
ಷ್ಟಾವಯವದಿನನ್ಯ ನಾತ್ಮನತಿಚೈತನ್ಯಂ೧೭

ಎಂದೊಡೆ ತಳಾರನಾಯಕ-
ನೆಂದಂ ನೀಮೆಂದ ಮಾತು ಪೊಲ್ಲದು ನೋಡ
ಲ್ಕೆಂದು ಪಲರಂ ವಿಚಾರಿಸಿ
ಕೊಂದೆಂ ತನುವಲ್ಲದಾತ್ಮನಂ ಕಂಡರಿಯೆಂ೧೮


ನೆನೆಯುತ್ತಿದ್ದಿರಲ್ಲ! ಏನನ್ನು?" ೧೬. "ಅಕಂಪನರಿಗೆ ಅವನು ಆಸನ್ನಭವ್ಯನೆಂಬುದು
ತಮ್ಮ ಅವಧಿಜ್ಞಾನದಿಂದ೫೭ಗೊತ್ತಾಯಿತು. ಆದುದರಿಂದ ಅವರು ಯಾವ
ವಿಕಲ್ಪವೂ ಇಲ್ಲದೆ ಆತ್ಮನನ್ನು ನೆನೆಯುತ್ತಾ ಇದ್ದೆ" ಎಂದರು. ಚಂಡಕರ್ಮ ಮತ್ತೆ
ಪ್ರಶ್ನೆ ಹಾಕಿದನು. ೧೭. "ಆತ್ಮನೆಲ್ಲಿದ್ದಾನೆ? ಆತ್ಮನಿಗೆ ಗುರುತೇನು?"
ದೇಹಧಾರಿಯಾಗಿರುವವರೆಲ್ಲರ ಅವಯವಗಳಲ್ಲಿಯೂ ಆತ್ಮನು ವ್ಯಾಪಿಸಿ
ಕೊಂಡಿದ್ದಾನೆ ಮಣ್ಣು, ನೀರು, ಗಾಳಿ, ಮತ್ತು ಬೆಂಕಿಯೆಂಬ ನಾಲ್ಕು ಬಗೆಯ
ಭೂತಗಳಿಂದಾದ ದೇಹಕ್ಕಿಂತ ಬೇರೆಯಾಗಿರುವವನು ಆತ್ಮ. ಅವನ ಚೈತನ್ಯವು
ಅಪರಿಮಿತ." ೧೮. "ನಿಮ್ಮ ಮಾತು ಒಪ್ಪತಕ್ಕದ್ದಲ್ಲ. ಆತ್ಮನನ್ನು ಕಾಣಬೇಕೆಂದು
ಹಲವರನ್ನು ವಿಚಾರಿಸಿದೆ; ಹಲವು ಪ್ರಾಣಿಗಳನ್ನು ಕೊಂದು ನೋಡಿದೆ. ಎಲ್ಲ
ಸಂದರ್ಭದಲ್ಲಿಯೂ ದೇಹವನ್ನು ಕಂಡೆನಲ್ಲದೆ ಆತ್ಮನನ್ನು ಕಾಣಲೇ ಇಲ್ಲ.