ಪುಟ:ಯಶೋಧರ ಚರಿತೆ.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೨೦

ಯಶೋಧರ ಚರಿತೆ

ಹೀಗೆ ಇದೊಂದು ಸುಂದರ 'ಕಂದ'
೨. ಅರ್ಹಂತ, ಸಿದ್ಧ, ಆಚಾರ್ಯ, ಉಪಾಧ್ಯಾಯ, ಸಾಧು ಎಂಬ
ಪಂಚಪರಮೇಷ್ಠಿಗಳನ್ನು ಕಾರಾ (ವ್ಯಾ) ರಂಭದಲ್ಲಿ ನಮಸ್ಕರಿಸುವುದು ಜೈನ
ಪದ್ಧತಿ.
೩. ಇಲ್ಲಿ ಜನ್ನನು ತನಗಿರುವ ಕವಿವೃಂದಾರಕವಾಸವ, ಕವಿಕಲ್ಪಲತಾ
ಮಂದಾರ ಎಂಬ ಬಿರುದುಗಳನ್ನು ಸೂಚಿಸುತ್ತಾನೆ. ತನ್ನ ಪೋಷಕನಾದ
ಬಲ್ಲಾಳದೇವನ ಮೇಲಿರುವ ಭಕ್ತಿಗೌರವಗಳನ್ನು ಇಲ್ಲಿ ಕವಿ ಸೂಚ್ಯವಾಗಿ ತಿಳಿಸುತ್ತಾನೆ.
ಕಥಾರಂಭಕ್ಕಿಂತಲೂ ಬಲ್ಲಾಳದೇವನ ವಂಶವರ್ಣನವೇ ಮೊದಲ ಕರ್ತವ್ಯ
ಎಂಬ ಮಾತಿನಲ್ಲಿ.
೪. ಬಲ್ಲಾಳದೇವನ ವಂಶಾನುಕ್ರಮವನ್ನು ಹೇಳುವ ಮೊದಲು ಉತ್ತಮ
ಕಾವ್ಯವು ಯಾರಿಗೆ ಮೆಚ್ಚುಗೆಯಾಗುತ್ತದೆ, ಯಾರಿಗೆ ಮೆಚ್ಚಿಗೆಯಾಗುವುದಿಲ್ಲ
ಎಂಬುದನ್ನು ಕವಿ ತಿಳಿಸುತ್ತಾನೆ. ಕಾವ್ಯದ ಸವಿಯನ್ನುಣ್ಣ ಬೇಕಾದರೆ ಅವನಲ್ಲಿ
ಕಲ್ಪನಾಶಕ್ತಿ ರಸಿಕತೆ, ಸಂಭಾವಿತತೆ, ಹಾಗೂ ಶಾಸ್ತ್ರ ಜ್ಞಾನ ಮುಂತಾದುವೆಲ್ಲ
ಕೂಡಿರಬೇಕೆಂದು ಹೇಳುತ್ತಾನೆ. ಅಂಥವನು ದೇವನೆನ್ನಿಸುತ್ತಾನೆ ಎಂಬುದು
ಒಂದರ್ಥವಾದರೆ, ಬಲ್ಲಾಳದೇವನೇ ಆ ಯೋಗ್ಯತೆಯುಳ್ಳವನು ಎಂಬುದು
ಇನ್ನೊಂದರ್ಥ.
'ದೇವನಾಂ ಪ್ರಿಯ' ಎಂಬುದೊಂದು ವಿಶಿಷ್ಟ ಪ್ರಯೋಗ, ಅಶೋಕ
ಚಕ್ರವರ್ತಿ ತನ್ನನ್ನು ದೇವನಾಂ ಪ್ರಿಯ ಎಂದು ದೇವತೆಗಳಿಗೆ ಪ್ರೀತಿಪಾತ್ರನಾದವನು
ಎಂಬ ಒಳ್ಳೆಯ ಅರ್ಥದಲ್ಲಿ ಪ್ರಯೋಗಿಸಿದ್ಧನಾದರೂ, ಅದಕ್ಕೆ ಅನಂತರ ಕ್ರಮೇಣ
ಅರ್ಥ ವ್ಯತ್ಯಾಸವುಂಟಾಗಿ ಮೂಢ ಎಂಬಂರ್ಥ ಬಂದಿದೆ. 'ದೇವರಿಗೆ ಪ್ರೀತಿ'
ಎಂದು ಬಳಕೆಯಲ್ಲಿರುವ ಮಾತಿಗೆ ಮನುಷ್ಯನೊಬ್ಬನಿಗೂ ಪ್ರೀತಿಪಾತ್ರನಲ್ಲದವನು
ಎಂಬರ್ಥವೇ ಹೊಳೆಯುತ್ತದೆ.
೫. ಡಾ|| ಎಚ್. ತಿಪ್ಪೇರುದ್ರಸ್ವಾಮಿ ಇವರ 'ಕರ್ಣಾಟಕ ಸಂಸ್ಕೃತಿಯ
ಪೂರ್ವ ಪೀಠಿಕೆ' ಎಂಬುದರಲ್ಲಿ ಹೀಗಿದೆ :

ಗಂಗವಾಡಿಯ ಉತ್ತರಭಾಗದ ಒಂದು ಮೂಲೆಯಲ್ಲಿ ಒಬ್ಬ ನಾಯಕ
ತಲೆಯೆತ್ತಿದ. ಅವನನ್ನೇ 'ಸಳ' ಎಂದು ಕರೆಯಲಾಗಿದೆ. 'ಸಸವೂರು' ಅಥವಾ
'ಶಶಕಪುರ' ಎಂಬುದು ಅವನ ಕಾರ್ಯಕ್ಷೇತ್ರದ ಕೇಂದ್ರವಾಗಿದ್ದಂತೆ ತೋರುತ್ತದೆ.
ಇದು ಈಗಿನ ಕಡೂರಿನ ಸುತ್ತಮುತ್ತಲಿನ ಭಾಗವಾಗಿದ್ದಿರಬಹುದು.