ಪುಟ:ಯಶೋಧರ ಚರಿತೆ.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦

ಯಶೋಧರ ಚರಿತೆ



ನವ ವೈಯಾಕರಣಂ ತ-
ಕಳವಿನೋದಂ ಭರತ ಸುರತ ಶಾಸ್ತವಿಳಾಸಂ
ಕವಿರಾಜಶೇಖರಂ ಯಾ-
ದವರಾಜಚ್ಛತ್ರನಖಿಳಬುಧಜನಮಿತ್ರಂ೧೯

ಚದುರ ನಿಧಿ ಚಲದ ನೆಲೆ ಚಾ
ಗದ ಸಾಗರಮಣ್ಮಿನಾಗರಂ ಪೆಂಪಿನ ಸಂ-
ಪದಮಾಯದಾಯುವಾರೆಂ-
ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ೨೦

ಕನ್ನರನಾದರದಿಂ ಕುಡೆ
ಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂ
ಮನ್ನಿಸಿ ಬಲ್ಲಾಳಂ ಕುಡೆ
ಜನ್ನಂ ಕವಿಚಕ್ರವರ್ತಿವೆಸರಂ ಪಡೆದರ್೨೧


ನವವೈಯಾಕರಣನೆನ್ನಿಸಿದ್ದರೆ, ತರ್ಕದಲ್ಲಿ ವಿನೋದಗೊಳ್ಳುವ ವಿದ್ವತ್ತೆಯನ್ನು
ಪಡೆದಿದ್ದಾನೆ. ನಾಟ್ಯಶಾಸ್ತ್ರ ಕಾಮಶಾಸ್ತ್ರಗಳಲ್ಲಿ ಚೆನ್ನಾದ ತಿಳುವಳಿಕೆ ಪಡೆದು ಬೆಡಗನ್ನು
ಕಾಣಿಸಬಲ್ಲ ಜನ್ನನು ಕವಿ ರಾಜಶೇಖರನಾಗಿದ್ದಾನೆ. ಯಾದವ ರಾಜಚ್ಚತ್ರನಾಗಿ೧೦
ಎಲ್ಲ ವಿದ್ವಾಂಸರ ಗೆಳೆಯನೆನ್ನಿಸಿದ್ದಾನೆ. ೨೦. ಚಾತುರ್ಯದ ನಿಧಿಯಾಗಿ ಚಲದ
ನೆಲೆಯಾಗಿ, ತ್ಯಾಗದ ಸಾಗರವಾಗಿ, ಸಾಹಸದ ಆಗರವಾಗಿ, ಪಂಪಿನ ಸಂಪತ್ತು
ಎನ್ನಿಸಿ ಆಯದ ಬಾಳುವೆಯುಳ್ಳವನೇ ಜನ್ನನು. ಅವನು ಕಮ್ಮೆಕುಲದ ಆಭರಣದ
ರತ್ನವಾಗಿದ್ದಾನೆ. ೨೧. ಹಿಂದೆ ಪೊನ್ನನಿಗೆ ಕನ್ನರನು ಆದರದಿಂದ
ಕವಿಚಕ್ರವರ್ತಿಯೆಂಬ ಬಿರುದನ್ನು ಕೊಟ್ಟನು. ಜನ್ನನಿಗೆ ಬಲ್ಲಾಳನು ಮನ್ನಣೆಮಾಡಿ
ಈ ಕವಿಚಕ್ರವರ್ತಿಯೆಂಬ ಬಿರುದನ್ನು ಕೊಟ್ಟಿದ್ದಾನೆ. ೨೨. ಈತನ ಗುರುಗಳು