ಪುಟ:ಯಶೋಧರ ಚರಿತೆ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೨೧

ಶ್ರೀಮತ್ಕಾಣೂರ್ಗಣ ಚಿಂ.
ತಾಮಣಿಗಳ್ ರಾಮಚಂದ್ರ ಗಂಡವಿಮುಕ್ತರ್
ತಾಮೆ ಗಡ ಗುರುಗಳೆನಿಪ ಮ-
ಹಾ ಮಹಿಮೆಗೆ ನೋಂತ ಭವ್ಯಚೂಡಾರತ್ನಂ೨೨

ವಾಣೀ ಪಾರ್ವತಿ ಮಾಡಿದ
ಜಾಣೆಂತುಟೊ ಭಾಳಲೋಚನಂ ಕವಿಸುಮನೋ-
ಬಾಣನ ಮಗನೆಂದಖಿಳ
ಕ್ಷೋಣಿಗೆ ಪೆಸರಾಯ್ತು ಕೂರ್ಮೆಗಿದು ಕೌತುಕಮೇ೨೩

ಶ್ರಾವಕಜನದುಪವಾಸಂ
ಜೀವದಯಾಷ್ಟಮಿಯೊಳಾಗೆ ಪಾರಣೆ ಕಿವಿಗ-
ಳ್ಗೀವಸ್ತು ಕಥನದಿಂದು-
ದ್ಭಾವಿಸೆ ಕವಿಭಾಳಲೋಚನಂ ವಿರಚಿದಂ೨೪



ರಾಮಚಂದ್ರ ಗ೦ಡ ವಿಮುಕ್ತರು. ಇವರು ಕಾಣೂರ್ಗಣದ
ಚಿಂತಾಮಣಿಗಳಾಗಿದ್ದವರು. ಇಂತಹ ಗುರುಗಳ ಪ್ರಭಾವದಿಂದಲೇ ಜನ್ನನು
ಮಹಾಮಹಿಮೆಯನ್ನು ಪಡೆದನು; ಎಲ್ಲ ಭವ್ಯರಲ್ಲಿ ಕಲೆಯ ರತ್ನದಂತೆ ಮೆರೆದನು.
೨೩. ವಾಣಿಯೂ ಪಾರ್ವತಿಯೂ ಸೇರಿ ಒಂದು ಪವಾಡವನ್ನೇ ಮಾಡಿದರು:
ಕವಿ ಸುಮನೋ ಬಾಣನಿಗೆ ಮಗನಾಗಿ ಕವಿ ಭಾಳಲೋಚನನೆಂಬವನಿದ್ದಾನೆ
ಎಂಬಂತೆ ಲೋಕಕ್ಕೆಲ್ಲ ಹೆಸರು ಹಬ್ಬಿಸಿದರು. ಅವರು ಪ್ರೀತಿಯಿಂದ ಈ ರೀತಿ
ಮಾಡಿದ್ದಾರೆಂದರೆ ಆಶ್ಚರ್ಯ ಪಡಬೇಕಾದುದೇ ಇಲ್ಲ.೧೧ ೨೪. ಜೀವದಯಾಷ್ಟಮಿ
(ನವರಾತ್ರಿಯ ಅಷ್ಟಮಿ)ಯ ಸಂದರ್ಭದಲ್ಲಿ ಶ್ರಾವಕಜನರು ಉಪವಾಸವನ್ನು
ಕೈಕೊಳ್ಳುತ್ತಾರೆ. ಅವರಿಗೆ ಕಿವಿಗಳ ಮುಖಾಂತರ ಪಾರಣೆಯಾಗುವ ಸಲುವಾಗಿ
ಈ ಒಂದು ಕಥೆಯಿರಲಿ ಎಂದೆಣಿಕೆಯಿಂದ ಜನ್ನನು ಈ ಕೃತಿಯನ್ನು ರಚಿಸಿದ್ದಾನೆ