ಪುಟ:ಯಶೋಧರ ಚರಿತೆ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ಯಶೋಧರ ಚರಿತೆ



ಸಿಸಿರಮನೆ ಪಡೆದು ಪರಕೆಗೆ
ವಸತನಲರ್ವೊದ ಮಾವಿನಡಿಮಂಚಿಕೆಯೊಳ್
ಕುಸುರಿದರುವೆದಡಗಿನಗತವೊ
ಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳಲ್ ೩೭

ಮಾರಿ ಮಾಲಯಾನಿಳಂ ನವ
ನೀರಜವನವೆಂಬ ಕೆಂಡದೊಳ್ ದಂಡನಮ
ಸ್ಕಾರದೆ ಬಂದವನಿತ್ತವ-
ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್ ೩೮

ಅಂತು ದೊರೆವೆತ್ತು ಬಂದ ವ
ಸಂತದೊಳಾ ಮಾರಿದತ್ತನುಂ ಪುರಜನಮುಂ
ತಂತಮಗೆ ಚಂಡಮಾರಿಗೆ
ಸಂತಸಮಂ ಮಾಡಲೆಂದು ಜಾತ್ರಗೆ ನೆರೆದರ್ ೩೯



ಹರಕೆಯೊಪ್ಪಿಸುವುದಕ್ಕಾಗಿ ಶಿಶಿರವನ್ನೇ ಹಿಡಿದು ಹೂಬಿಟ್ಟ ಮಾವಿನಮರದ
ಅಡಿ ಮಂಚಿಕೆಯಲ್ಲಿ ಅವನನ್ನು ಕೊಚ್ಚಿ ಕೊಚ್ಚಿ ಕತ್ತರಿಸಿ ಹಾಕಿದ ಮಾಂಸದ
ರಾಶಿಯೆಂಬಂತೆ ಆ ವನದಲ್ಲಿ ಉದುರಿಬಿದ್ದ ಮುತ್ತುಗದ ಮೊಗ್ಗೆಗಳು ಕೆಂಪಾಗಿ
ತೋರುತ್ತಿದ್ದುವು.೧೬ ೩೮. ವನದಲ್ಲಿ ಅರಗಿಳಿಗಳು ಗಟ್ಟಿಯಾಗಿ ಉಲಿಯುತ್ತಿದ್ದವು
 : “ಎಲೆ ಮಾರಿದೇವತೆಯೇ, ಮಲಯಮಾರುತನು ಹೊಸ ತಾವರೆಗಳ
ಸಮೂಹವೆಂಬ ಕೆಂಡದಲ್ಲಿ ಧೀರ್ಘದಂಡ ನಮಸ್ಕಾರ ಮಾಡುತ್ತಾ ಬರುತಿದ್ದಾನೆ.
ಈ ಕಡೆ ಗಮನವಿಡು”.೧೭ ೩೯. ಆ ರೀತಿಯಲ್ಲಿ ಒದಗಿಬಂದ ವಸಂತಕಾಲದಲ್ಲಿ
ಮಾರಿದತ್ತ ರಾಜನೂ ನಗರದ ಜನರೂ ಎಲ್ಲರೂ ಒಂದಾಗಿ ಚಂಡಮಾರಿದೇವತೆಗೆ
ಸಂತೋಷವಾಗುವಂತೆ ಜಾತ್ರೆಯನ್ನು ನರೆವೇರಿಸಲು ಅಲ್ಲಿ ಸೇರಿದರು.