ಪುಟ:ಯಶೋಧರ ಚರಿತೆ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೩೧

ಬೇಡಿದ ಕಾಡೊಳ್ ಮಳೆವೆಯಾ
ಯ್ತೀಡಾಡುವಮಿದರ ಪೊರೆಯೆನೆನಗಂ ನಿನಗಂ
ಮೂಡುವ ಮುಳುಗುವ ದಂದುಗ-
ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ ೫೨

ಇಂತಿಂತೊರ್ವರನೊರ್ವರ್
ಸಂತೈಸುತ್ತುಂ ನೃಪೇಂದ್ರತನುಜಾತ‌ರ್ ನಿ-
ಶ್ಚಿಂತಂ ಪೊಕ್ಕರ್ ಪಸಿದ ಕೃ-
ತಾಂತ ಬಾಣಸುವೊಲಿರ್ದ ಮಾರಿಯ ಮನೆಯಂ ೫೩

ತಳಮನುಡಿದಿಡುವ ಕಣ್ಣಂ
ಕಳೆದೇರುಪ ಕರುಳ ತೋರಣಂಗಟ್ಟುವ ಕಾ
ಲ್ಗ ಳನುರಿಪಿ ನತ್ತರಾ ಕೂ-
ಮೈ ಳನಡುತಿಹ ವೀರರೆತ್ತ ನೋಳ್ಪೊಡಮದರೊಳ್ ೫೪



ಬರುತ್ತವೆಯೆಂಬುದು ನಮಗೆ ಗೊತ್ತಿಲ್ಲವೆ? ೫೧. ಅಪಾಯ ಕೋಟಿಗಳು
ಎಷ್ಟೆಷ್ಟಿವೆಯೊ ಅಷ್ಟಕ್ಕೆಲ್ಲ ಈ ದೇಹವೇ ಮನೆಯಲ್ಲವೆ? ಈ ದೇಹವನ್ನು ಧರಿಸಿಕೊಂಡ
ಮೇಲೆ ಇದರಲ್ಲಿ ಸುಖವನ್ನು ಹುಡುಕುವುದೂ ಒಂದೇ ; ಕಲ್ಲು ಗುಡ್ಡದಲ್ಲಿ
ಪಕ್ವವಾದ ಮಾದಳದ ಹಣ್ಣನ್ನು ಹುಡುಕುವುದೂ ಒಂದೇ !
೫೨. ಯಾವ ಕಾಡಿಗೆ ಮಳೆ ಬೇಕಿತ್ತೋ, ಅಲ್ಲಿಗೇ ಮಳೆ ಬಂದಂತಾಯಿತು. ಈ
ದೇಹದ ಹೊರೆಯನ್ನೆಂತೋ ಕಳೆದುಬಿಡೋಣ. ನನಗೂ ನಿನಗೂ ಈ ಮೂಡುವ
ಮುಳುಗುವ ಕೋಟಲೆಯೆಂಬುದು ಆಡಿದ ಹೊಲ, ಉಂಡ ಮದ್ದು, ಕಂಡ
ವಿಚಾರ!”೨೩, ೫೩ ಅಣ್ಣ ತಂಗಿಯನ್ನೂ, ತಂಗಿ ಅಣ್ಣನನ್ನೂ ಈ ರೀತಿ ಪರಸ್ಪರ
ಸಂತೈಸಿಕೊಳ್ಳುತ್ತಿದ್ದರು. ರಾಜಕುಮಾರರಾದ ಇವರು ಹೀಗೆ ಸಾಂತ್ವನ
ವಚನಗಳನ್ನಾಡುತ್ತಾ ಮುಂಬರಿದು ನಿಶ್ಚಿಂತೆಯಿಂದ ಆ ಮಾರಿಯ ಮನೆಯನ್ನು
ಪ್ರವೇಶಿಸಿದರು. ೫೪. ಮಾರಿಗುಡಿ ಯಮನ ಅಡಿಗೆಯ ಮನೆಯಂತಿತ್ತು.