ಪುಟ:ಯಶೋಧರ ಚರಿತೆ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨

ಯಶೋಧರ ಚರಿತೆ



ತಾಳುಗೆಯನುರ್ಚಿ ನೆತ್ತಿಯ
ಗಾಳಂ ಗಗನದೊಳೆಳಲ್ಪ ವಾರಿಯ ಬೀರರ್
ಪಾಳಿಯೊಳೆಸೆದರ್ ಪಾಪದ
ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆಱದಿಂ ೫೭

ಆಡು ಕುಱಿ ಕೋಳಿ ಕೋಣನ
ಕೂಡಿದ ಪಿಂಡೊಳರೆ ಪಳರೆ ಮಾರ್ದನಿಯಿಂದಂ
ಕೂಡೆ ಬನಮಲ್ತುದುರ್ವರೆ
ಬೀಡೆಯಿನೆರ್ದೆಯೊಡೆದುದವಂ ಕೋಟಲೆಗಾಗಳ್ ೫೬

ದೆಸೆದೆಸೆಗೆ ನರಶಿರಂ ತೆ-
ತ್ತಿಸಿ ಮೆರೆದುವು ಮದಿಲೊಳಬ್ಬೆ ಪೇರಡಪಿನಪೆ
ರ್ಬೆಸನದ ಪೊವಗಣ ಜೀವ
ಪ್ರಸರಮಂ ಪಲವು ಮುಖದಿನವಳ್ಕಿಪವೋಲ್ ೫೭


ಅಂಗೈಗಳನ್ನೂ ಅಂಗಾಲುಗಳನ್ನೂ ಕತ್ತರಿಸಿ ಇಡುವ ವೀರರು ಕೆಲವರು, ಕಣ್ಣನ್ನು
ಕಿತ್ತು ದೇವಿಗೆ ಏರಿಸುವ ವೀರರು ಕೆಲವರು, ಕರುಳನ್ನು ಹೊರಕ್ಕೆಳೆದು
ತೋರಣವಾಗಿ ಕಟ್ಟುವವರು, ಕಾಲುಗಳನ್ನು ಉರಿಸಿ ರಕ್ತದಿಂದ ಅನ್ನವನ್ನು
ಬೇಯಿಸುವ ಕೆಲವರು ಅಲ್ಲಿ ಸುತ್ತಮುತ್ತಲೂ ತುಂಬಿಕೊಂಡಿದ್ದರು.
೫೫. ಬಾಯಿಯನ್ನು ಬಗಿದು ಅಂಗುಳು ಕಾಣುವಂತೆ ಮಾಡಿ, ಅಲ್ಲಿಗೆ ಗಾಳವನ್ನು
ಚುಚ್ಚಿ ಆ ಗಾಳವನ್ನುನೆತ್ತಿಯಲ್ಲಿ ಹೊರಬರುವಂತೆಮಾಡಿ, ಎತ್ತರದಲ್ಲಿ ತೂಗಾಡಿಸುವ
ವೀರಪುರುಷರು ಸಾಲು ಸಾಲಾಗಿ ಕಾಣಿಸುತ್ತಿದ್ದರು. ಹೊಲಗಳಲ್ಲಿ ಪಕ್ಷಿಗಳನ್ನು
ಬೆಚ್ಚಿಸಿ ಓಡಿಸುವುದಕ್ಕಾಗಿ ಬೆರ್ಚುಗಳನ್ನು ಕಟ್ಟಿ ನಿಲ್ಲಿಸಿದಂತೆ ಇಲ್ಲಿ ಈ ವೀರರು
ಪಾಪದ ಬೆಳೆಯನ್ನು ರಕ್ಷಿಸುವುದಕ್ಕಾಗಿ ನಿಲ್ಲಿಸಲ್ಪಟ್ಟಿದ್ದರು. ೫೬. ಬಲಿಗಾಗಿ ತಂದಿದ್ದ
ಆಡು, ಕುರಿ, ಕೋಳಿ, ಕೋಣ ಮುಂತಾದ ಪ್ರಾಣಿಗಳ ಸಮುದಾಯವೆಲ್ಲ
ಭಯದಿಂದ ಕರ್ಕಶವಾಗಿ ಅರಚುತ್ತಿದ್ದುವು. ಈ ಅರಚಾಟದ ಪ್ರತಿಧ್ವನಿ ಆ ವನವನ್ನೆಲ್ಲ
ವ್ಯಾಪಿಸಿತ್ತು. ನೆಲ ಒಣಗಿ ಸ್ವಾಭಾವಿಕವಾಗಿ ಬಿರುಕು ಬಿಟ್ಟಿತು. ಆ ಮೂಕ
ಪ್ರಾಣಿಗಳ ಸಂಕಟಕ್ಕಾಗಿ ಇಡೀ ಕಾಡೇ ಅಳುವಂತೆ, ದುಃಖದಿಂದ ಭೂಮಿ