ಪುಟ:ಯಶೋಧರ ಚರಿತೆ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೩೫



ಧರ್ಮಪರರ್ಗಲ್ಲದೆಮ್ಮಯ
ನಿರ್ಮಲ ಚಾರಿತ್ರಮಿಂಬುಕಯ್ಯದು ನಿನಗಾ
ಧರ್ಮದ ಪೋದ ಪೊಲಂಬದು
ನರ್ಮದೆಯಿಂ ಗಂಟಿದೇಕೆ ಕೇಳ್ದಪೆಯಮ್ಮಂ ೬೪

ಆ ಮಾತನ್ನೆ ಗಮರ್ಕೆಲೆ
ಭೂಮೀಶ್ವರ ನಿನಗೆ ಪಥ್ಯಮಾವುದದಂ ಮಾ
ಡಾಮೂಲಚೂಲಮೆಮಗೆ ತ
ಳಾಮಲಕಂ ಭವನಿಬದ್ಧಮವಿಳಿಸಿತೆಮ್ಮಂ ೬೫

ಗುಣಿಗಳ ಗುಣರತ್ನವಿಭೂ-
ಷಣಮೆಸೆವುದೆ ವಿಕಳಹೃದಯರಾದವರ್ಗೆ ನೃಪಾ
ಗ್ರಣಿ ಪೇಟ ತುಪ್ಪೇಳೆದ ದ
ರ್ಪಣದೊಳ್ ಪಜ್ಜಳಿಸಲಾರ್ಪುದೇ ಪ್ರತಿಬಿಂಬಂ ೬೬


೬೪. “ಅರಸನೇ ಕೇಳು” ಎಂದು ಉಪಕ್ರಮಿಸಿದನು ಅಭಯರುಚಿ. “ನಮ್ಮ
ಚಾರಿತ್ರ್ಯ ನಿರ್ಮಲವಾದುದು. ಅದು ಧರ್ಮಪರರಾದವರಿಗೆ ಮಾತ್ರ
ರುಚಿಸಬಹುದಲ್ಲದೆ ಇತರರಿಗೆ ಮೆಚ್ಚಲಾರದು. ನಿನ್ನ ಮಟ್ಟಿಗೆ ಹೇಳುವುದಾದರೆ,
ಆ ಧರ್ಮದ ದಾರಿಯು ನರ್ಮದೆಗಿಂತಲೂ ದೂರ೨೫ ನಮ್ಮನ್ನು ಕೇಳುವುದೇಕೆ?
೬೫. ಆ ಮಾತು ಹಾಗಿರಲಿ, ಎಲೆ ಭೂಪತಿ, ನಿನಗೆ ಯಾವುದು ಪಥ್ಯವೆನಿಸುವುದೋ
ಅದನ್ನು ನೀನು ನೆರವೇರಿಸಬಹುದು. ನಮಗಂತೂ ಬುಡದಿಂದ ತುದಿಯವರೆಗಿನ
ಎಲ್ಲ ವಿಷಯವೂ ಅಂಗೈನೆಲ್ಲಿಯಾಗಿದೆ. ಭವ ಬಂದನವೇ ನಮ್ಮನ್ನು ಬಗೆ
ಬಗೆಯ ದುಃಖಗಳಿಗೆ ಈಡುಮಾಡಿದೆ. ೬೬. ಮಹಾರಾಜ, ಗುಣವಂತರ ಗುಣ
ರತ್ನಾಭರಣಗಳು, ಕೆಟ್ಟ ಹೃದಯವುಳ್ಳವರಿಗೆ ಸೊಗಸಾಗಿ ಕಾಣಲಾರವು. ಕನ್ನಡಿಗೆ
ಜಿಡ್ಡುತಾಗಿದ್ದರೆ ಅದರಲ್ಲಿ ಪ್ರತಿಬಿಂಬವು ಉಜ್ವಲವಾಗಿ ಕಾಣುವುದೆ? ಎಂದು