ಪುಟ:ಯಶೋಧರ ಚರಿತೆ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೩೭

ಎಂತು ಬೆಸಗೊಂಡೆ ಬೆಸಗೊಂ
ಡಂತಿರೆ ದತ್ತಾವಧಾನನಾಗು ಜಯಶ್ರೀ
ಕಾಂತೆಯುಮಂ ಪರಮಶ್ರೀ
ಕಾಂತೆಯುಮಂ ನಿನಗೆ ಕಡುಗಮೀ ಸತ್ಕಥನಂ ೭೦

ಶ್ರೀಮತ್ತೀರ್ಥಾಧಿಪನ ವದನಾಂಭೋಜದಿಂ ಸರ್ವಭಾಷಾ
ಸಾಮಾನ್ಯಂ ಶ್ರೀವಚನಮೊಗೆದತ್ತಾ ವಚೋಮಾರ್ಗದಿಂ ಮ
ತ್ತಾಮುಂ ಕಂಡುಂಡುದರ ಕಥೆಯಂ ಪೇಳ್ದಪೆಂ ಕೇಳಿಮೆಂದಾ
ಭೂಮೀಶಂಗಂ ದಭಯರುಚಿಯಿಂತೆಂದು ಪೇಳಲ್ ತಗುಳ್ತಂ ೭೧

ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ
ರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದೀ
ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ
ಪ್ರಭುಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಕಾಸಂ ೭೨



ದಾರಿತಪ್ಪಿಸುವುದೇ?೨೭ ೭೦. ಮಹಾರಾಜಾ, ನೀನು ಹೇಗೆ ಕೇಳಿದೆಯೋ
ಅದೇ ರೀತಿಯಲ್ಲಿಯೇ ಮನಸ್ಸುಕೊಟ್ಟು ಆಲಿಸು. ನಾನು ಹೇಳಲಿರುವ ಒಳ್ಳೆಯ
ಕಥೆ ನಿನಗೆ ಜಯಶ್ರೀಯನ್ನೂ ಮುಕ್ತಿಕಾಂತೆಯನ್ನೂ ಕೊಡುವುದರಲ್ಲಿ ಸಂದೇಹವಿಲ್ಲ.
೭೧. ಶ್ರೀಮತ್ತೀರ್ಥಂಕರನ ಮುಖಕಮಲದಿಂದ ಹೊರಟಿತು ಮಂಗಲ ವಚನ.
ಅದು ಎಲ್ಲ ಭಾಷೆಗಳಿಗೂ ಸಮಾನವಾದುದು. ಆ ವಚನ ಮಾರ್ಗವಾಗಿಯೇ,
ನಾವು ಕಂಡು ಉಂಡುದರ ಕಥೆಯನ್ನು ಹೇಳುತ್ತೇವೆ, ಕೇಳಿರಿ” ಎನ್ನುತ್ತಾ
ಅಭಯರುಚಿ ಕುಮಾರನು ಮಾರಿದತ್ತ ರಾಜನಿಗೆ ಕಥೆಯನ್ನು ಹೇಳಲಾರಂಭಿಸಿದನು.
೭೨. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿ
ಕುಮಾರನು ಪುಣ್ಯದ ವಿಷಯವನ್ನು ಹೇಳಿ ಅವನನ್ನು ಧರ್ಮದ ದಾರಿಗೆ
ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ
ಭವ್ಯಮಯಸಭೆಗೆ ಮಂಗಲ ಸಂಪದ್ವಿಲಾಸವು ಶೋಭಿಸುತ್ತದೆ.೨೮