ಪುಟ:ಯಶೋಧರ ಚರಿತೆ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೮

ಯಶೋಧರ ಚರಿತೆ

ತಾಳದ ಲಯಮಂ ನೆನೆಯದೆ
ಕೇಳಲೊಡಂ ಠಾಯೆ ಜಾತಿಯೊಳ್ ಗ್ರಾಹಯುತಂ
ಕೇಳಲೊಡಂ ಗೀತಮನೆಂ
ದಾಳತಿಯೊಳ್ ಮೆಱೆದು ಪಾಡಿದಂ ರೂಪಕಮಂ೩೧


ಅಂತೆಸೆಯೆ ಪಾಡುತಿರೆ ತ
ದ್ದಂತಿಪನತಿನೂತ್ನಗೀತ ಪಾತನ ವಿಕಲ
ಸ್ವಾಂತೆಗೆ ನೋಡುವ ಕೊಡುವ
ಚಿಂತೆ ಕಡಲ್ವರಿದುದಂದು ಬೆಳಗಪ್ಪಿನೆಗಂ೩೨


ಮನದನ್ನಳಪ್ಪ ಕೆಳದಿಗೆ
ಮನಮಂ ಮುಂದಿಟ್ಟು ಬಳಿಕ ಕುಳುಪಿದೊಡವಳಾ
ತನ ರೂಪುಗಂಡು ಕಣ್ಗಂ
ಮನಕ್ಕೆ ಮುದ್ಗಾರವೆತ್ತು ಭೋಂಕನೆ ಮಗುಳ್ದಳ್೩೩


೩೧. ತಾಳದ ಲಯವನ್ನೂ ಎಣಿಸಿಕೊಳ್ಳದೆ ಕೇಳುವಾಗಲೇ ಪ್ರಬಂಧವು ಆಯಾ
ಜಾತಿಯ ತಾಳಗತಿಗಳಲ್ಲಿ ತಾನಾಗಿ ಸೇರಿಕೊಂಡೇ ಕೇಳುತ್ತಿತ್ತು. ಈ ರೀತಿಯಲ್ಲಿ
ಅವನು ಆ ಹಾಡನ್ನು, ಅದಕ್ಕೆ ಸರಿಯಾದ ರೂಪವನ್ನು ಕೊಟ್ಟು, ಹಾಡುತ್ತಾ
ಇದ್ದನು.೩೫೩೨. ಆ ಮಾವುತನು ಆ ರೀತಿ ಅತಿಮಧುರವಾಗಿ ಹಾಡುತ್ತಿದ್ದಾಗ,
ಅವನ ಅತಿನೂತನವಾದ ಹಾಡು ಕಿವಿಗೆ ಬೀಳುತ್ತಲೇ ಇತ್ತು. ಅಮೃತಮತಿಯ
ಮನಸ್ಸು ಆಗ ಕದಡಿಹೋಯಿತು. ಅವಳಿಗೆ ಕಣ್ಣಲ್ಲೇ ಬೆಳಗಾಯಿತು.
ಬೆಳಗಾಗುವವರೆಗೂ ಅವನನ್ನು ಹೇಗೆ ನೋಡಲಿ, ಹೇಗೆ ಕೂಡಿಕೊಳ್ಳಲಿ ಎಂಬ
ಚಿಂತೆಯೇ ಕಡಲಂತೆ ಉಕ್ಕಿ ಹರಿಯಿತು. ೩೩. ಬೆಳಗಾದ ಕೂಡಲೇ ಅವಳು
ತನ್ನ ನಚ್ಚುಮೆಚ್ಚಿನ ಗೆಳತಿಯನ್ನು ಕರೆದಳು. ಅವಳೊಡನೆ ತನ್ನ ಅಂತರಂಗದ
ಬಯಕೆಯನ್ನೆಲ್ಲ ಬಯಲು ಮಾಡಿದಳು. ಮಾವುತನ ಬಳಿಗೆ ಆಕೆಯನ್ನು
ಕಳುಹಿಸಿಕೊಟ್ಟಳು. ಒಡತಿಯ ಅಪ್ಪಣೆಯ ಪ್ರಕಾರ ಅವಳು ಮಾವುತನ ಬಳಿಗೆ
ನಡೆದಳು. ಅವನನ್ನು ದೂರದಿಂದ ಕಂಡುದೇ ತಡ, ಅವಳ ಕಣ್ಣಿಗೂ ಮನಸ್ಸಿಗೂ
ಓಕರಿಕೆಯುಂಟಾಯಿತು. ಅವಳಿಗೆ ಅಲ್ಲಿ ನಿಲ್ಲುವುದಕ್ಕೇ ಸಾಧ್ಯವಾಗದೆ ಕೂಡಲೆ