ಪುಟ:ಯಶೋಧರ ಚರಿತೆ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೦

ಯಶೋಧರ ಚರಿತೆ

ಈ ದೊರೆಯನೆಂದು ತೋರಲ್
ಮೇದಿನಿಯೊಳಗಾತನಲ್ಲದಿಲ್ಲೆನೆ ಪೇಳ್ ಪೇಳ್
ಕಾದಲನಂತಿರೆ ಚೆಲ್ವನೆ
ದೂದವಿ ನೀನೆನ್ನ ಕೊಂದೆಯೆಂದೊಡೆ ಪೇಳ್ದಳ್೩೭


ಪಳುಪಲೆ ಕುಟೆ ನೊಸಲಳಿಗ
ಣ್ಣೊಱೆವಾಯ್ ಹಪ್ಪಳಿಕೆ ಮೂಗು ಮುರುಟಿದ ಕಿವಿ ಬಿ
ಬ್ಬಿಱುವಲ್ ಕುಸಿಗೊರಲಿಳಿದೆರ್ದೆ
ಪೊರಂಟ ಬೆನ್ ಬಾತ ಬಸಿರಡಂಗಿದ ಜಘನಂ೩೮


ಕಱೆದೊವಲ ಪಳಿಯ ಕಳಿಯಂ
ತೆಱೆದಂದದ ಮೆಯ್ಯ ನಾತಮಾತನ ಕಯ್ಗಳ್
ಕುಱುಗಣ್ಣು ಕೂನಬೆನ್ ಕಾಲ್
ಮಱೆಯಿಸುವುದು ಟೊಂಕಮುರಿದ ಕತ್ತೆಯ ಕಾಲಂ೩೯


ಹೇಗೆ ಒಲಿದೆ? ನನಗೆ ಇದಾವುದೂ ಗೊತ್ತಾಗುವುದಿಲ್ಲ! ೩೭. ಯಾವ
ರೀತಿಯಲ್ಲಿದ್ದಾನೆಂದು ಹೋಲಿಸಿ ತೋರಿಸೋಣವೆಂದರೆ ಜಗತ್ತಿನಲ್ಲಿ ಅವನಂತೆ
ಬೇರೆ ಯಾರೂ ಇರುವುದಕ್ಕೆ ಸಾಧ್ಯವಿಲ್ಲ!” ಗೆಳತಿಯ ಕೊಂಕುಮಾತಿನ ಅರ್ಥ
ಅಮೃತಮತಿಗಾಗಲಿಲ್ಲ. ಅವಳ ಕುತೂಹಲ ಮತ್ತಷ್ಟು ಕೆರಳಿತು ; “ಹೇಳು,
ಹೇಳು! ನನ್ನ ಕಾದಲನು ಅಷ್ಟೂ ಸುಂದರನೆ  ? ಎಲೆ ದೂತಿ, ಬೇಗನೇ ಹೇಳು.
ಹೇಳದೆ ನೀನು ನನ್ನನ್ನು ಕೊಲ್ಲುತ್ತೀಯಲ್ಲ!” ಎಂದು ತ್ವರೆಪಡಿಸಿದಳು. ೩೮.
“ಅವನ ತಲೆಗೂದಲು ಅಲ್ಲಲ್ಲಿ ಕಿತ್ತುಹೋಗಿದೆ. ಹಣೆ ಹೊಂಡ ಬಿದ್ದಿದೆ. ಕಣ್ಣು
ಕೊಳೆತು ಹೋಗಿದೆ. ಬಾಯಿ ಜೊಲ್ಲು ಸುರಿಸುತ್ತಲೇ ಇದೆ. ಚಪ್ಪಟೆಯಾದ
ಮೂಗು, ಮುರುಟಿದ ಕಿವಿ, ಬಿರಿದ ಹಲ್ಲು, ಕೊರಳು ಕುಗ್ಗಿ, ಎದೆ ಒಳ ನುಗ್ಗಿ,
ಬೆನ್ನು ಹೊರಚಾಚಿದೆ. ಹೊಟ್ಟೆ ಬಾತುಕೊಂಡಿದೆ; ಜಘನವು ಅಡಗಿಯೇ ಹೋಗಿದೆ.
೩೯. ಕರೆ ಮೆತ್ತಿದ ಚರ್ಮ, ಹಳೆಯ ಹೊಂಡವನ್ನು ಹೊರತೆಗೆದಂತಹ ವಾಸನೆ
ಅವನ ದೇಹದಿಂದ ಹುಬ್ಬುತ್ತಾ ಇದೆ. ಅವನ ಕೈಗಳೂ, ಚಿಕ್ಕ ಕಣ್ಣುಗಳೂ,
ಗೂನುಬೆನ್ನೂ ಕಾಲುಗಳೂ ಸೊಂಟ ಮುರಿದ ಕತ್ತೆಯ ಕಾಲನ್ನೂ ಮೀರಿಸುವಂತಿವೆ.