ಪುಟ:ಯಶೋಧರ ಚರಿತೆ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೪

ಯಶೋಧರ ಚರಿತೆ

ಮುಳಿದಾಕೆ ತಂದ ಮಾಲಾ
ಮಳಯಜ ತಾಂಬೂಲಜಾಮಂ ಕೆದರಿ ಕುರು
ಳ್ಗಳನೆರೆದು ಬೆನ್ನ ಮಿಳಿಯಿಂ
ಕಳಹಂಸೆಗೆ ಗಿಡಗನೆರಗಿದಂತಿರೆ ಬಡಿದಂ೪೯


ತೋರಮುಡಿವಿಡಿದು ಕುಡಿಯಂ
ನಾರಂ ತದೆವಂತೆ ತದೆದು ಬೀಟೆಯ ಕಾಲಿಂ
ಬಾರೇಱೆ ಬದಗನೊದೆದೊಡೆ
ಕೇರೆ ಪೊರಳ್ವಂತೆ ಕಾಲಮೇಲೆ ಪೊರಳ್ದಳ್೫೦


ತಡವಾದುದುಂಟು ನಲ್ಲನೆ
ಬಡಿ ಮುಳಿಯದಿರರಸನೆಂಬ ಪಾತಕನೆನ್ನಂ
ತೊಡೆಯೇರಿಸಿ ಕೇಳಿಕೆಯಾ
ದೊಡೆ ನೋಡುತ್ತಿರ್ದೆನುಂತೆ ನಲಲಣ್ಮುವೆನೇ೫೧


ತಾಂಬೂಲ ಮುಂತಾದವುಗಳನ್ನೆಲ್ಲ ಚೆಲ್ಲಿ ಕೆದರಿದನು. ಅವಳ ಕೂದಲನ್ನು
ಹಿಡಿದೆಳೆದು, ಗಿಡುಗನು ರಾಜಹಂಸದ ಮೇಲೆರಗುವಂತೆ, ಅವಳ ಬೆನ್ನಿಗೆ ಚರ್ಮದ
ಬಾರಿನಿಂದ ಬಲವಾಗಿ ಬಾರಿಸಿದನು. ೫೦. ಅವಳ ತುಂಬುಗೂದಲ ತುರುಬು
ಹಿಡಿದು, ಕುಡಿಯನು ನಾರನ್ನು ಜಜ್ಚುವಂತೆ ಅವಳನ್ನು ಜಜ್ಜಿದನು. ಇಷ್ಟೂ
ಸಾಲದೆಂಬಂತೆ ಅವಳ ಚರ್ಮವು ಏಳುವಂತೆ ಬಿರಿದಕಾಲಿನಿಂದ ಒದ್ದನು.
ಆದರೂ ಅವಳು ಅವನ ಕಾಲ ಮೇಲೆ ಬಿದ್ದು ಕೇರೆ ಹೊರಳುವಂತೆ ಹೊರಳಿದಳು.
೫೧. “ನಲ್ಲನೆ, ತಡವಾದುದು ನಿಜ. ಇಷ್ಟಬಂದಂತೆ ಬಡಿ. ಆದರೆ ನನ್ನ ಮೇಲೆ
ಕೋಪಿಸುವುದು ಮಾತ್ರ ಬೇಡ. ನಾನು ನಿಷ್ಕಾರಣವಾಗಿ ತಡೆದು ನಿಂತೆನೆ?
ಅರಸನೆಂಬ ಆ ಪಾಪಿ ನನ್ನನ್ನು ತೊಡೆಯೇರಿಸಿಕೊಂಡು ಶೃಂಗಾರ ಚೇಷ್ಟೆಗೆ
ತೊಡಗಿದ. ನಾನು ನೋಡುತ್ತ ಸುಮ್ಮನಿರಬೇಕಾಯಿತು. ೫೨. ಗಜವೆಡಂಗ,