ಪುಟ:ಯಶೋಧರ ಚರಿತೆ.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦

ಯಶೋಧರ ಚರಿತೆ


ಲಂಪಣನವೊಲೇನಾನುಮ
ಲಂಪಿನ ನಗೆನುಡಿಯ ನೆವದೆ ನೆಯ್ದಿಲ ಪೂವಿಂ
ದಂ ಪೊಯ್ಯೆ ಮೂರ್ಛೆವೋದಳ್‌
ಸಂಪಗೆಯಲರ್ಗ೦ಪು ಪೊಯ್ದ ತುಂಬಿಯ ತೆರದಿಂದ೬೭


ಅಕಟಕಟ ನೊಂದಳೆತ್ತಿರೆ
ಸುಕುಮಾರಿಯನೆನಿತುಮಿನಿತು ಕೊಂಕಿಂ ನುಡಿದಂ
ಪ್ರಕುಪಿತಚಿತ್ತಂ ಭೂ ನಾ
ಯಕನೇನಣಕಕ್ಕೆ ಸವಣನುಂ ಸೈರಿಪನೇ೬೮


ದೈವದಿನೆಂತಕ್ಕಿಂದಿನ
ಸಾವೋಸರಿಸಿದುದು ಕರ್ಣಭೂಷಾವಳಿ ಭೂ
ಷಾವಳಿಯಾಗದೆ ಸೆಳೆದೊಡೆ
ಸಾವಲ್ಲಿಗೆ ಕಯ್ದುವಾಯ್ತು ನೆಯ್ದಿಲ ಕುಸುಮಂ೬೯




೬೭. ಯಶೋಧರನೂ ಕಾಮಾಸಕ್ತನೆನ್ನುವಂತೆ ಬಳಿಸಾರಿ ಏನೇನೋ ಶೃಂಗಾರದ
ಚಾಟುವಚನಗಳನ್ನಾಡಿ, ಅದೇ ನೆವದಿಂದ ಅವಳನ್ನು ನೆಯ್ದಿಲ ಹೂವಿನಿಂದ
ಹೊಡೆದನು. ಒಡನೆಯೇ ಅಮೃತಮತಿ ಮೂರ್ಚ್ಛಾಕ್ರಾಂತೆಯಾದಳು. ಸಂಪಗೆಯ
ಹೂವಿನ ಕಂಪು ತಾಗಿದೊಡನೆಯೆ ತುಂಬಿ ಮೆಯ್ಮರೆಯುತ್ತದಷ್ಟೆ.೩೯ಅವಳ
ನಟನೆಯಿ೦ದ ಯಶೋಧರನು ರೋಷಾವಿಷ್ಟನಾದನು. ೬೮. ಅದನ್ನು ವಕ್ರವಾದ
ಮಾತಿನ ರೂಪದಲ್ಲಿ ಕಾಣಿಸಿದನು: “ಅಯ್ಯಯ್ಯೋ! ಬಹಳ ನೋವಾಯಿತು!
ಈಕೆ ಅತ್ಯಂತ ಸುಕುಮಾರಿ, ಎತ್ತಿ ಉಪಚರಿಸಿರಿ!” ಎಂದು ಕೊಂಕಾಗಿ ನುಡಿದನು.
ಅಣಕಾಟವನ್ನು ಸವಣನಾದರೂ ಸಹಿಸಿಕೊಂಡಾನೇ!೬೯. ದೈವಾನುಗ್ರಹದಿಂದ
ಇಂದು ಬರಬಹುದಾಗಿದ್ದ ಮರಣವು ತೊಲಗಿಹೋಯಿತು! ಕಿವಿಯ ಆಭರಣವಾದ
ನೆಯ್ದಿಲ ಹೂ ಇಂದು ಕರ್ಣಾಭರಣವಾಗದೆ, ಸಾಯುವ ಸಂದರ್ಭವು
ಸನ್ನಿಹಿತವಾದ ಕಾರಣ, ಸೆಳೆದ ಒಂದು ಆಯುಧದಂತಾಯಿತಲ್ಲ! ೭೦. ಹಿಂದಣ
ರಾತ್ರಿ ಸಂಭವಿಸಿದ ಹೊಲಸಿನ ಕೆಲಸವನ್ನು ಯಶೋಧರನು ಈ ರೀತಿಯ