ಪುಟ:ಯಶೋಧರ ಚರಿತೆ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೬೩

ಬಳೆಗೋದುದು ಕೀರ್ತಿದಿಶಾ
ಕಳಭಂಗಳ ನಿಗ್ದವಂಗಳೊಳ್ ರಿಪುಕಾಂತಾ
ವಳಿಯೊಳ್ ಭವತ್ಪ್ರತಾಪಂ
ಬಳೆಗಳೆಯಿಸೆ ತಾನದಕ್ಕೆ ಮಚ್ಚರಿಸುವವೊಲ್


ಉದಧಿ ಪರಿಯಂತಮಿಳೆಯೊಳ
ಗೊದವಿದ ನಿನ್ನಾಜ್ಞೆ ಮಣಿಕರೀಟಂಗಳನೀ
ಳೊದೆದುರುಳೆ ನೂಂಕಿ ಕುಳ್ಳಿ
ರ್ದುದು ನೆತ್ತಿಯ ಮೇಲೆ ಸಕಲಭೂಪಾಲಕರಾ


ಕೊರತೆ ನಿನಗಿಲ್ಲದೇಕೆಂ
ದರಿಯೆಂ ನೀರೋಡಿ ನಿನ್ನ ತನುವಿನ ಬಣ್ಣಂ
ಬರುಗೋಳದವೊಲಾಯ್ತೀಕ್ಷಿಸಿ
ಮರುಗಿದುದನೀರ ಮೀನ್ಬೊಲಿಂದೆನ್ನ ಮನಂ



ನನೆಕೊನೆವೋಗುತ್ತಿದ್ದಾರೆ.೪೨ ೪. ನಿನ್ನ ಪ್ರತಾಪ ಶತ್ರು ಪತ್ನಿಯರ ಕೈಗಳಲ್ಲಿರುವ
ಬಳೆಗಳನ್ನು ಕಂಡು ಅಸೂಯೆಯಿಂದ ಅವುಗಳನ್ನು ಕಳಚಿ, ಕೀರ್ತಿದಿಶಾಕಳಭಗಳ
ದಾಡೆಗಳಿಗೆ ಆ ಬಳೆಗಳನ್ನು ತೊಡಿಸುತ್ತಾ ಇದೆ.೪೩ ೫. ನಿನ್ನ ಆಜ್ಞೆ
ಕಡಲತಡಿಯವರೆಗೂ ವ್ಯಾಪಿಸಿದೆ. ಅಷ್ಟೇ ಅಲ್ಲ. ಎಲ್ಲ ಭೂಪಾಲಕರ
ರತ್ನಕಿರೀಟಗಳನ್ನೆಲ್ಲ ಸೆಳೆದು, ತುಳಿದು ಉರುಳಿಸಿ, ತಳ್ಳಿ ಅವರ ನೆತ್ತಿಯ ಮೇಲೆಯೇ
ಕುಳಿತುಕೊಂಡಿದೆ.೪೪ ೬. ನಿನಗೆ ಯಾವ ಬಗೆಯ ಕೊರತೆಯೂ ಈವರೆಗಿಲ್ಲ.
ಆದರೆ ನಿನ್ನ ದೇಹಕಾಂತಿ ನೀರು ಕಳೆದಕೊಂಡು ಒಣ ಕೆರೆಯಂತಾಗಿದೆ.೪೫
ಇದೇಕೆಂದು ನನಗೆ ತಿಳಿಯುವುದಿಲ್ಲ. ನಿನ್ನನ್ನು ನೋಡುವಾಗ, ಇಂದು ನನ್ನ