೭೮
ಯಶೋಧರ ಚರಿತೆ
ಪಲವಂದದ ನಿಗ್ರಹದಿಂ
ಕೊಲಿಸಿದೊಡಾ ಮೊಸಳೆ ಸತ್ತುಮದುವೆ ಬಳಿಕ್ಕಾ
ಪೊಲಗೇರಿಯಾಡಿನೊಡಲೊಳ್
ನೆಲಸಿ ಬಳಿಕ್ಕೊಯ್ಯನೊಗೆದುದಾಡಿನ ರೂಪಿಂ೪೯
ಮತ್ತೊರ್ಮೆ ಜಾಲದೊಳ್ ಸಿ-
ಕ್ಕಿತ್ತೆಯ್ಯಾಗಿರ್ದ ಮೀನದಂ ಶ್ರಾದ್ದಕ್ಕ-
ತ್ಯುತ್ತಮ ಲೋಹಿತ ಮತ್ಸ್ಯಮ-
ನುತ್ತಮಮೆಂದೊಂದು ಕಡೆಯಿನಡಿಸಿದನರಸಂ೫೦
ಉಳಿದ ಜೀವಮೇರು-
ತ್ತಿಳಿಯುತ್ತಿರೆ ನೀರೊಳಿರಿಸಿ ಜೀವಶ್ರಾದ್ಧಂ-
ಕ್ಕುಳಿದಿರ್ದ ಮಾಜನಂಗಳ್
ಕಳಿಯುಂಡಾಪೋಶಿಪಲ್ಲಿ ನೆನೆದುದು ತನ್ನಂ೫೧
ಹೊರಕ್ಕೆಳೆಯಿಸಿದನು. ೪೯. ಹಲವು ಬಗೆಯ ಚಿತ್ರಹಿಂಸೆಗಳಿಂದ ಆ ಮೊಸಳೆಯನ್ನು
ಕೊಲ್ಲಲಾಯಿತು. ಹೀಗೆ ಸತ್ತ ಮೊಸಳೆ ಅದೇ ಊರಿನ ಹೊಲಗೇರಿಯಲ್ಲಿ
ಒಂದು ಆಡಿನ ಬಸಿರನ್ನು ಸೇರಿಕೊಂಡು, ಅಲ್ಲಿಯೇ ಬೆಳೆದು ಆಡಿನ ರೂಪದಿಂದ
ಇಳೆಗಿಳಿಯಿತು. ೫೦. ಮತ್ತೊಂದು ದಿನ, ಮುಳ್ಳುಹಂದಿಯಾಗಿದ್ದುದು ಮೀನಾಗಿ
ಹುಟ್ಟಿದ್ದು, ಬಲೆ ಬೀಸಿದಾಗ ಅದಕ್ಕೆ ಸಿಕ್ಕಿಕೊಂಡಿತು. ಅದನ್ನು ಕಂಡ ರಾಜನು
ಅದುವೇ ಶ್ರಾದ್ಧಕ್ಕೆ ಶ್ರೇಷ್ಠವಾದ ಕೆಂಪು ಮೀನೆಂದು ಗ್ರಹಿಸಿಕೊಂಡು ಅದನ್ನು
ಒಂದು ಕಡೆಯಿಂದ ಅಡುಗೆ ಮಾಡಿಸಿದನು.೫೨ ೫೧. ಜೀವಶ್ರಾದ್ಧಕ್ಕಾಗಿ ಅದನ್ನು
ನೀರಲ್ಲಿರಿಸಿ ಬೇಯಿಸುತ್ತಾ ಇದ್ದಾಗ ಅದರ ಜೀವ ಏರುತ್ತಲೂ ಇಳಿಯುತ್ತಲೂ
ಇತ್ತು. ಶ್ರಾದ್ಧಕ್ಕೆ ಬಂದ ಮಹಾಜನಗಳು ಹೊಟ್ಟೆತುಂಬ ಊಟ ಮಾಡಿ
ಉತ್ತರಾಪೋಷಣವನ್ನು ತೆಗೆದುಕೊಳ್ಳುತ್ತಿದ್ದರು. ಆಗ ಆ ಮೀನು ತನ್ನ ವಿಷಯ
ವನ್ನು ನೆನೆದುಕೊಂಡಿತು: