ಪುಟ:ಯಶೋಧರ ಚರಿತೆ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೮೫

ಆಸನದಿಂ ಬಾಯಿಂ ಪೊಯ್
ಸಾಸವೆ ಮೆಣಸುಪ್ಪು ಗೂಡಿ ನಿಲವಿನ ಸೂಡಿಂ
ಲೇಸಾಗಿ ಬೆಂದ ಬಾಡಂ
ಬಾಸಣಿಸಿಟ್ಟದನೆ ಅಮೃತಮತಿಗಟ್ಟಿಸಿಡಂ೭೦


ಅದುಸತ್ತು ಸವೆದೊಡಾ ಮಾಂ
ಸದ ಸವಿಗಂಡರಸಿ ಬಾಣಸಿನ ಮನೆಯೊಳ್
ಟ್ಟದ ಪೋಂತಂ ತಿಂಗುರ ಮಾ-
ಡಿದಳದನರಿವಲ್ಲಿ ತೊತ್ತಿರೆಂಗುಂ ತಮ್ಮೊಳ್೭೧


ಬಸಿದಪುದು ಮೆಯ್ಯ ಕೀವುಂ
ರಸಿಗೆಯುಮೊಡಲಳಿದುದಾದೊಡಂ ಮಾಣಳೆ ನಾಯ್
ಬಸನಿಗತನಮಂ ಮಾಣ್ದೇ
ಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ೭೨



೭. ಅದರ ಹಿಂಬದಿಯಿಂದಲೂ ಮುಂದಣ ಬಾಯಿಯಿಂದಲೂ ಸಾಸಿವೆ
ಮೆಣಸು ಉಪ್ಪು ಬೆರೆಸಿ ಒಳಗೆ ತಳ್ಳಲಾಯಿತು. ಅನಂತರ ಅದನ್ನು ಒಂದೇ
ರೀತಿಯ ಉರಿಯಿಂದ ಬೇಯಿಸಲಾಯಿಸತು. ಈ ಬೆಂದ ಮಾಂಸವನ್ನು ಮುಚ್ಚಿಟ್ಟು
ಅಮೃತಮತಿಗೆ ಹಳುಹಿಸಿದನು, ಯಶೋಮತಿ. ೭೧. ಅಂತೂ ಅದು ಸತ್ತು
ಹೋಯಿತು. ಅದರ ಮಾಂಸವನ್ನು ಉಂಡು ಸವಿಗಂಡ ಅಮೃತಮತಿ ಅಡಿಗೆಯ
ಮನೆಯ ಬಳಿ ಕಟ್ಟಿದ್ದ ಹೋತವನ್ನು ತಿನ್ನುವುದಕ್ಕೇ ಉಪಯೋಗಿಸಿದಳು.
ಅದನ್ನು ಕೊಚ್ಚಿ ಕೊಲೆ ಮಾಡುತ್ತಿದ್ದಾಗ ಅವಳ ದಾಸಿಯರು ತಂತಮ್ಮೊಳಗೆ
ಆಕೆಯ ಕುರಿತು ಮಾತಾಡತೊಡಗಿದರು. ೭೨. ಇವಳ ಮೆಯ್ಯಿಂದ
ಕೀವೂ ರಸಿಕೆಯೂ ಸುರಿಯುತ್ತ ಇದೆ. ದೇಹವು ಪೂರ್ಣಹಾಳಾಗಿ ಹೋಗಿದೆ.
ಆದರೂ ಈ ನಾಯಿಬುದ್ದಿಯನ್ನು ನಿಲ್ಲಿಸಲಿಲ್ಲ. ಈ ಹೊಲಸು
ನಾರುವವಳನ್ನು ಕೊಂಡೊಯ್ಯುವುದಕ್ಕೆ ಯಮನೂ ಹೇಸಿದನೊ ಏನೊ.