ಪುಟ:ಯಶೋಧರ ಚರಿತೆ.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೮೭

ಆ ರೌದ್ರಹತಿಗೆ ತವೆ ಸಂ
ಸಾರಂ ತತ್ಪುರದ ಪೋಳಗೆ ಪುಟ್ಟಿದುವಂತಾ
ಸೈರಿಭಮುಂ ಪೋಂತುಂ ಪೊಲ-
ಗೇರಿಯ ಮಾದಿಗರ ಮನೆಯ ಕೋಳಿಯ ಬಸಿರೊಳ್೭೬


ಕರಮೇಳ್ಗೆಯುಳ್ಳ ಪಿಳ್ಳೆಗ-
ಳೆರಡುಮನೋಲಗಿಸಿದಂ ನೃಪಂಗಲ್ಲಿಯ ಮಾ-
ದರನಿತ್ತು ಚಂಡಕರ್ಮಂ-
ಗರಸನವಂ ನೋಡಿ ಸಲಹು ನೀನೆಂದಿತ್ತಂ೭೭


ವಿಸರುಹದಂತೆ ಕೇಸರಮನಾಂತುದು ಮೆಯ್ಗಲಿಯಂತಿರಾರೆ ಕೂ-
ರ್ಪೆಸಿದುದು ಚಾಗಿಯಂತ ನೆರೆ ಕೊಟ್ಟೆಸೆದೊಪ್ಪಿತು ರಾಧೆಯಂತೆ ಸಂ.
ದಿಸಿ ಮುಡಿ ಮೇಲೆ ಕೊಂಕಿದುದು ಚಂದ್ರಮನಂತೆ ಸುಪಕ್ಷದಿಂದ ರಂ-
ಜಿಡಿದುದು ಪುಂಜನಗ್ಗದ ಸುವಸ್ತುವಿನಂತಿರೆ ತಳ್ತು ಹೇಂಟೆಯೊಳ್೭೮



ಉಣ್ಣುವುದರಿಂದಾಗಿ ನೊಂದು ಸತ್ತುದೇ ಅಲ್ಲ. ೭೬. ಭಯಂಕರವಾದ ಹತ್ಯೆಗೆ
ಒಳಗಾಗಿ ಆ ಕೋಣವೂ ಹೋತವೂ ತಮ್ಮ ಜನ್ಮವನ್ನು ನೀಗಿಕೊಂಡವು.
ಅವೆರಡೂ ಆ ನಗರದ ಹೊರವಳಯದ ಹೊಲಗೇರಿಯ ಮಾದರ ಮನೆಯ
ಕೋಳಿಯ ಗರ್ಭದಲ್ಲಿ ಜನ್ಮತಾಳಿದವು. ಮಾದರವನಿಗೆ ಈ ಎರಡೂ ಕೋಳಿಗಳ
ಬೆಳವಣಿಗೆಯನ್ನು ಕಂಡು, ಇವುಗಳನ್ನು ಅರಸನಿಗೆ ಒಪ್ಪಿಸುವುದು ವಿಹಿತವೆಂದು
ತೋರಿತು. ೭೭. ಅವನು ಬಲಿತ ಆ ಎರಡನ್ನೂ ಯಶೋಮತಿಗೆ ಸಲ್ಲಿಸಿದನು.
ಅರಸನು ಅವುಗಳನ್ನು ನೋಡಿ, ಚಂಡಕರ್ಮಮಿಗೆ ಅವುಗಳನ್ನು ಕೊಟ್ಟು
ಸಾಕುವಂತೆ ಹೇಳಿದನು. ೭೮. ಹುಂಜವು ತಾವರೆಯಂತೆ ಕೇಸರವನ್ನು
ಪಡೆದುಕೊಂಡಿತು. ವೀರನಂತೆ ಅದರ ಕೂಗಿಗೆ ಕೂರ್ಪುಂಟಾಯಿತು. ತ್ಯಾಗಿಯಂತೆ
ಅದರ ಕೊಟ್ಟು ಶೋಭಿಸಿತು. ರಾಧೆಯಂತೆ ತಲೆ ಮುಡಿ ಎತ್ತರದಲ್ಲಿ
ಕೊಂಕುಗೊಂಡಿತು. ಚಂದ್ರನಂತೆ ಅದು ಒಳ್ಳೆಯ ಪಕ್ಷಗಳಿಂದ ಸೊಗಯಿಸಿತು.
ಹೇಂಟೆಯನ್ನು ಸೇರಿ ಸುವಸ್ತುವಿನಂತೆ ಮನೋಹರವಾಯಿತು.೫೫