ಪುಟ:ಯುಗಳಾಂಗುರೀಯ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾಡುತ್ತಿದ್ದಳು ; ಧನದಾಸನದಕ್ಕೆ ಕಿವಿಕೊಡುತ್ತಿರಲಿಲ್ಲ ; “ನಮ್ಮ
ಗುರುಗಳು ಬರಲಿ ; ಅವರು ಬಂದ ಬಳಿಕ ಆ ಪ್ರಸ್ತಾವವಂ ಮಾಡೋಣ"
ಎಂದು ಹೇಳುವನು.
ಪುರಂದರನು ಸಿಂಹಳದ್ವೀಪಕ್ಕೆ ಹೊರಟುಹೋದನು. ಅವನು
ಸಿಂಹಳಕ್ಕೆ ಹೊರಟುಹೋಗಿ ಎರಡು ವರ್ಷಗಳಾದುವು ; ಹಿಂದಿರಿಗಿ ಬರ
ಲಿಲ್ಲ. ಹಿರಣ್ಮಯಿಗೆ ಮದುವೆಯಾಗಲಿಲ್ಲ. ಅವಳು ಹದಿನೆಂಟು ವರ್ಷದ
ಯೌವನದವಳಾಗಿ, ಉದ್ಯಾನದ ಮಧ್ಯೆ ನವಪಲ್ಲವಿತ ಚೂತವೃಕ್ಷದಂತೆ ಧನ
ದಾಸನ ಗೃಹದಲ್ಲಿ ಶೋಭಿಸುತಿದ್ದಳು.
ಹಿರಣ್ಮಯಿಯು ಅದರಿಂದ ದುಃಖಿತೆಯಾಗಲಿಲ್ಲ. ಮದುವೆಯ
ಮಾತು ಬಂದರೆ ಅವಳಿಗೆ ಪುರಂದರನ ಜ್ಞಾಪಕವು ಬರುವುದು, ಅವನಾ
ಫುಲ್ಲ ಕುಸುಮ ಮಾಲಾಮಂಡಿತ ಕುಂಚಿತ ಕೃಷ್ಣ ಕುಂತಲಾವೇಪ್ಟಿತವಾದ
ಸಹಾಸವಾದ ಮುಖಮಂಡಲವು ಜ್ಞಾಪಕಕ್ಕೆ ಬರುವುದು; ಅವನ ಪದ್ಮ
ಸದೃಶ ಹಸ್ತದ ವಜ್ರದುಂಗುರಗಳುಳ್ಳ ಬೆರಳುಗಳು ಜ್ಞಾಪಕಕ್ಕೆ ಬರುತಿ
ದ್ದುವು ; ಹಾಗೆ ನೆನವಿಗೆ ಬರುತ್ತಲೆ ಹಿರಣ್ಮಯಿಯು ಅಳುವುದಕ್ಕೆ ತೊಡಗು
ವಳು. ತಂದೆಯು ಅವಳನ್ನಾರಿಗೆ ಕೊಟ್ಟರೂ ಮದುವೆಯಾಗಬೇಕು; ತಂದೆ
ಯ ಅಪ್ಪಣೆಯನ್ನು ಮೀರುವುದಕ್ಕಿಲ್ಲ; ಆದರೆ ಬೇರೆ ಮನುಷ್ಯನೊಂದಿಗೆ
ಸಂಬಂಧವು ಬೆಳದರೆ ಜೀವನ್ಮೃತೆಯಾಗಿರಬೇಕು.
ಹಾಗಿದ್ದರೂ, ತಂದೆಯು ಅವಳ ವಿವಾಹೋದ್ಯೋಗದಲ್ಲಿ ಶುದ್ಧ
ವಾಗಿ ಪ್ರವೃತ್ತನಾಗದಿರುವುದನ್ನು ಕಂಡು ಹಿರಣ್ಮಯಿಯು ಆಶ್ಚರ್ಯಪಡು
ವಳು. ಜನರು ಹೆಣ್ಣು ಹುಡುಗರನ್ನು ಆ ವಯಸ್ಸಿನ ವರೆಗೂ ಮದುವೆ
ಯಿಲ್ಲದೆ ಮನೆಯಲ್ಲಿಟ್ಟುಕೊಳ್ಳುವುದಿಲ್ಲ. ಒಮ್ಮೆ ಇಟ್ಟು ಕೊಂಡರೂ
ಅವರಿಗೆ ಮದುವೆಯಂ ಮಾಡಿ ಮನೆಯಲ್ಲಿಟ್ಟುಕೊಳ್ಳುವರು. ತಂದೆಯು
ಅವಳ ಮದುವೆಯ ವಿಚಾರವಾಗಿ ಜನರಾರು ಬಂದು ಹೇಳಿದರೂ ಕಿವಿಗೆ
ಹಾಕಿಕೊಳ್ಳನೇಕೆ? ಒಂದು ದಿನ ಅವಳಿಗೆ ಅಕಸ್ಮಾತ್ತಾಗಿ ಅದರ ವಿಷಯ
ದಲ್ಲಿ ಸ್ವಲ್ಪ ಸೂಚನೆಯು ಸಿಕ್ಕಿತು.
ಧನದಾಸನು ಅನೇಕ ವ್ಯಾಪಾರವನ್ನು ನಡೆಯಿಸುವುದರಲ್ಲಿ ಚೀನಾ
ದೇಶದ ವಿಚಿತ್ರವಾದೊಂದು ಭರಣಿಯು ಸಿಕ್ಕಿತು. ಭರಣಿಯು ಬಹಳ