ಪುಟ:ಯುಗಳಾಂಗುರೀಯ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭

ಹೀಗೆಂದು ಹೇಳುತಿದ್ದ ಸಮಯದಲ್ಲಿ ಅರಮನೆಯಲ್ಲಿ ಮಂಗಳ
ಸೂಚಕವಾಗಿ ವಾದ್ಯಗಳು ಪ್ರಾರಂಭವಾದುವು. ರಾಜನು, " ರಾತ್ರಿ
ಹನ್ನೊಂದು ಘಳಿಗೆಯಾಯಿತು ; ಪರೀಕ್ಷೆಯ ವಿಚಾರವನ್ನು ಹಿಂದಳಿಂದ
ಹೇಳುವೆನು ; ಈಗ ನಿನ್ನ ಪತಿಯು ಬಂದಿದ್ದಾನೆ. ಶುಭಲಗ್ನದಲ್ಲಿ ಪರಸ್ಪರ
ಶುಭದೃಷ್ಟಿಯಾಗಲಿ ” ಎಂದನು.
ಆಗ ಹಿಂದುಗಡೆ ಕೊಠಡಿಯ ಬಾಗಿಲು ತೆರೆಯಲ್ಪಟ್ಟಿತು. ದೀರ್ಘಾ
ಕಾರ ಪುರುಷನೊಬ್ಬನಾ ಬಾಗಿಲಿಂದ ಕೊಠಡಿಯೊಳಗೆ ಬಂದು ನಿಂತನು.
ರಾಜ-ಹಿರಣ್ಮಯಿ ! ಇವನೇ ನಿನ್ನ ಸ್ವಾಮಿ.
ಹಿರಣ್ಮಯಿಯು ದೃಷ್ಟಿಸಿ ನೋಡಿದಳು. ಅವಳಿಗೇನೇನೂ ತೋರ
ಲಿಲ್ಲ. ಜಾಗ್ರತಾವಸ್ಥೆ ಸ್ವಪ್ನಾವಸ್ಥೆ ಎಂಬ ಭೇದಜ್ಞಾ ನಶೂನ್ಯೆಯಾಗಿದ್ದಳು.
ನೋಡಿದರೆ, ಪುರಂದರ!
ಅವರಿಬ್ಬರೂ ಪರಸ್ಪರ ನೋಡಿ ಸ್ತಂಭಿತರಾಗಿ ಉನ್ಮತ್ತಪ್ರಾಯರಾ
ದರು ; ಪರಸ್ಪರ ತಮ್ಮನ್ನು ತಾವೇ ನಂಬಲಾರದೆ ಹೋದರು.
ರಾಜನು ಪುರಂದರನನ್ನು ಕುರಿತು, “ ಸ್ನೇಹಿತನೆ ! ಹಿರಣ್ಮಯಿಯು
ನಿನಗೆ ಯೋಗ್ಯೆಯಾದ ಪತ್ನಿ ; ಆದುದರಿಂದ ಮನೆಗೆ ಕರೆದುಕೊಂಡು
ಹೋಗು ; ಅವಳು ಈಗಲೂ ಮೊದಲಿನಂತೆ ನಿನ್ನಲ್ಲಿ ಸ್ನೇಹಮಯಿಯಾಗಿ
ದ್ದಾಳೆ ; ನಾನವಳನ್ನು ರಾತ್ರಿ ಹಗಲು ಕಾವಲಿಟ್ಟು ನೋಡಿಕೊಳ್ಳುತ್ತಿದ್ದೆ
ನಾದಕಾರಣ ಅವಳು ಅನನ್ಯಾನುರಾಗಿಣಿಯಾಗಿದ್ದಾಳೆಂದು ತಿಳಿದಿದ್ದೇನೆ;
ನಿನ್ನ ಕೋರಿಕೆಯ ಪ್ರಕಾರ ಅವಳನ್ನು ಬಹುವಿಧವಾಗಿ ಪರೀಕ್ಷಿಸಿದೆನು ;
ನಾನೇ ಅವಳ ಸ್ವಾಮಿಯೆಂದು ಹೇಳಿದೆನು ; ಆದರೆ ಅವಳು ರಾಜ್ಯಲೋಭ
ದಿಂದಲೂ ನಿನ್ನನ್ನು ಮರೆಯಲಿಲ್ಲ ; ನಾನೇ ಅವಳ ಸ್ವಾಮಿಯೆಂದು ಇಂಗಿ
ತದಿಂದ ತಿಳಿಯ ಹೇಳಿ, ಅವಳು ನಿನ್ನಲ್ಲಿ ಅಸತ್ಪ್ರಣಯಾಸಕ್ತೆಯಾಗಿದ್ದ
ಳೆಂದು ಸಂದೇಹಪಟ್ಟವನಂತೆ ಕೆಲವು ಸಂಗತಿಗಳನ್ನು ಹೇಳಿದೆನು : ಅದಕ್ಕ
ವಳು ದುಃಖಿತೆಯಾಗಿ, ತಾನು ನಿರ್ದೋಷಿಯೆಂತಲೂ, ತನ್ನನ್ನು ಗ್ರಹಣಮಾ
ಡಬೇಕೆಂದೂ ಹೇಳಿದ್ದರೆ ನಿನ್ನನ್ನು ಅವಳು ಶುದ್ಧವಾಗಿ ಮರೆತಳೆಂದು
ಹೇಳುತ್ತಿದ್ದೆನು ; ಆದರೆ ಹಿರಣ್ಮಯಿಯು ಹಾಗೆ ಹೇಳದೆ, “ ಮಹಾರಾ
ಜರೆ ! ನಾನು ಅಸತಿ, ನನ್ನನ್ನು ತ್ಯಾಗಮಾಡಿಬಿಡಿ ” ಎಂದು ಹೇಳಿಕೊಂ