ರಘುಕುಲಚರಿತಂ ೩೫ ಪೂಜೆಗೆ ಬೇಕಾದ ಪದಾರ್ಥಗಳನ್ನೆಲ್ಲ ಅಣಿಮಾಡಿಕೊಂಡು ಹೊರಟನು. ಶಾಸ್ತ್ರಗಳನ್ನೆಲ್ಲ ಚೆನ್ನಾಗಿ ಅರಿತು, ಮಾನಧನರೊಳಗೆ ಮೊದಲನೆಯವನೆ ನಿಸಿ, ಕಾರ್ಯಗೌರವದ ಸಂದರ್ಭಗಳನ್ನು ಬಲ್ಲವನಾಗಿರುವ ನರನಾಥನು ಉಚಿತಸ್ಥಾನದಲ್ಲಿ ತಪೋಧನನನ್ನು ಇದಿರೆ೦ಡು, ಪೀಠವನ್ನಿತ್ತು, ವಿಧಿ ಪ್ರಕಾರ ಸತ್ಕರಿಸಿ, ಕೈಜೋಡಿಸಿಕೊಂಡು, ಆತನ ಬಳಿಯೊಳು ನಿಂತು ಇಂತಂದನು - ದರ್ಭೆಯ ತುದಿಯಂತೆ ಮೊನೆಯಾದ ಮತಿಯುಳ್ಳ ಎಲೆ ಮುನಿ ಯೇ ! ಮಂತ್ರಕರಾದ ಮಹರ್ಷಿಗಳೊಳಗೆ ಅಗ ಗಣನೆನಿಸಿದ ನಿನ್ನಯ ಗುರುವು ಕುಶಲದಿಂದಿರುವನೆ ? ದಿನನಾಥನಿಂದ ಜನವು ಎಚ್ಚರ ವನ್ನು ಪಡೆವಂತೆ, ಆತನಿಂದಲೇ ಅಲ್ಲವೆ ನೀನು ಶಾಸ್ತ್ರಜ್ಞಾನವನ್ನೆಲ್ಲ ಸಂಪ ದಿಸಿದುದು ? ಮೈ, ಮಾತು, ಮನ ಎಂಬೀ ಮೂರು ಕರಣಗಳಿಂದ ಆತನು ಗಳಿಸುತಲಿರುವ ತಪವು – ತನಗೆಲ್ಲಿ ತಾವು ತಪ್ಪುವುದೋ ಎಂದು ಇಂದ್ರನನ್ನೂ ಅಳುಕಿಸತಕ್ಕುದು, ಅಂತಹ ತಪಸ್ಸು ಆವುದೊಂದು ಅಡ್ಡಿ ವಿಡೂರದಿಂದಲೂ ಕುಂದದಿರುವುದೆ ? ಪಾದೆಗಟ್ಟುವುದು, ಹದವ ರಿತು ನೀರ ಬಿಡುವುದು, ಸೆಬ್ಬೆಯರಿತು ಗೊಬ್ಬರವಿಡುವುದು, ಎಂಬಿದೇ ಮೊದಲಾದ ಬೇಸಾಯಗಳಿಂದ ಹಸುಳೆಗಳನ್ನು ಹೇಗೋಹಾಗೆ ಕಾಪಾ ಡಿದ ನಿಮ್ಮ ತಪೋವನ ತರುಗಳು – ಬಳಲಿಕೆಗಳನ್ನು ಕಳೆಯತಕ್ಕವುಗ ೪ನಿಸಿ, ಬಿರುಗಾಳಿ ಮೊದಲಾದವುಗಳಿಂದ ನೋವನ್ನು ಪಡೆಯದಿದೆಯೆ ? ಸತ್ಕರಾಚರಣೆಗೆ ಬೇಕಾದವುಗಳೆಂದು ಅಕ್ಕರೆಯಿಂದ ಬೆಳೆಯಿಸಿಕೊಂ ಡಿರುವ ದರ್ಭೆ ಹುಲ್ಲುಗಳನ್ನು ಮೆಚ್ಚ ರೂ, ಮಮತೆಯಿಂದ ಮುನಿಗಳ ಅಡ್ಡಿಯನ್ನು ಪಡೆಯದಿರುವ ಹುದ್ದೆಗಳ ಮರಿಗಳು ತಾನಾಗಿ ಹೊಕ್ಕಳು ಬೀಳುವವರೆಗೂ ತಪಸಿಗಳ ತೊಡೆಗಳ ಮೇಲೆಯೇ ಬೆಳೆಯುತ್ತಾ, ಆವುದೊಂದು ಅಪಾಯವೂ ಇಲ್ಲದೆ ಸುಖದಿಂದಿರುವುವೆ ? ನೇಮದ ಸ್ಥಾನ ಗಳಡೇರಲು ಊಡಾಗಿ, ಪಿತೃಗಳಿಗೆ ಕೊಡತಕ್ಕ ತರ್ಪಣಗಳಿಗೆ ಆಸರೆ ಯೆನಿಸಿ, ಹಕ್ಕಲಾಯ್ತು ತಂದ ಕಾಳುಕಡಿಗಳಲ್ಲಿ ಅರಸಿಗೆ ಕೊಡತಕ್ಕ ಕಂದಾಯವೆಂದು ತೆಗೆದಿಡುವ ಆರನೆಯ ಒಂದು ಪಾಲಿಗೆ ತಮ್ಮ ತಡಿಯ ಬೈಲಿನಲ್ಲಿ ಎಡೆಗೊಟ್ಟಿರುವ ನಿಮ್ಮ ತೀರ್ಥೋದಕಗಳು ಆವುದೊಂದು ತೊಂದರೆಗೂ ಒಳಗಾಗದಿರುವುವೆ ? ಮಧ್ಯಾಹ್ನಾದಿ ಕಾಲಗಳಲ್ಲಿ ಬರುವ