ಲ್ಲಿ ಚಚನಿಳಿ www ಆಗ ನಾನು ಹೀರಾಲಾಲನ ಚರಿತ್ರೆಯನ್ನು ಕೇಳಿರಲಿಲ್ಲ. ಈಚಿಗೆ ಕೇಳಿದೆ. ನಮ್ಮ ತಂದೆಯು ಸ್ವಲ್ಪ ಅನುಮಾನಪಟ್ಟು ಕೊಂಡು ಹಿಂಜರಿಯಲಾರಂಭಿಸಿ, ಇಂತಹ ದೊಡ್ಡ ಪಂಡಿತನಾದ ಅಳಿಯನನ್ನು ಕೈಬಿಡಬೇಕಾಗಿ ಬಂತೆಂದು ದುಃಖಪಟ್ಟು, ಕಡೆಗೆ, ಮತ್ತು ನಿಷ್ಕರ್ಷೆಯಾಗಿ ಹೋಯಿತು. ಈಗ ಬದಲಾಯಿಸುವುದಕ್ಕಿಲ್ಲವಾಗಿದೆ. ಅಲ್ಲದೆ ಈ ವಿವಾಹಕ್ಕೆ ಶಚೀಂದ್ರಬಾಬುವೇ ಯಜಮಾನನಾಗಿದ್ದಾನೆ, ಅವನೇ ಲಗ್ನ ಮಾಡಿಸುವನು. ಅವನು ಹೇಗೆ ಮಾಡುವನೋ ಹಾಗಾಗುತ್ತದೆ. ಅವನೇ ಗೋಪಾಲ ಬಾಬುವಿನ ಸಂಬಂಧವನ್ನು ಗೊತ್ತು ಮಾಡಿದ್ದಾನೆಂದು ಹೇಳಿದನು. ಹೀರಾ-ಅವನ ಅಭಿಪ್ರಾಯವನ್ನು ನೀನು ಹೇಗೆ ತಿಳಿಯುವೆ? ದೊಡ್ಡವರ ಮರ್ಮವನ್ನು ತಿಳಿಯುವುದು ಕಷ್ಟ. ಅವರನ್ನ ನಂಬಬೇಡ, ಹೀಗೆಂದು ಹೇಳಿ ಹೀರಾ ೮ಾಲನು ತಂದೆಯ ಕಿವಿಯಲ್ಲಿ ಏನೋ ಏಕಾಂತವಾಗಿ ಹೇಳಿದ. ಅದು ಕೇಳಿಸಲಿಲ್ಲ. ತಂದೆಯು ಅದು ಹೇಗೆ ? ಇರಲಾರದು. ನನ್ನ ಮಗಳು ಕಣ್ಣಿಲ್ಲದಹುಡುಗಿ ಎಂದನು. ಹೀರಾಲಾಲನು ಭಗ್ನ ಮನೋರಧನಾಗಿ ಅತ್ತಿತ್ತ ನೋಡಿದನು, ನಾಲ್ಕು ಕಡೆಯೂ ನೋಡಿ, ನಿಮ್ಮ ಮನೆಯಲ್ಲಿ ಮದ್ಯವಿಲ್ಲವೆ ? ನಿಜ, ಇರಲಾರದೆಂದು ಹೇಳಿ ಕೊಂಡನು, ತಂದೆಯು ಆಶ್ಚರ ಪಟ್ಟು ಮದುವೆ ! ಏತಕ್ಕೆ ಇಡಲಿ ? ಎಂದನು. ಹೀರಾಲಾಲನು ಮದ್ಯವಿಲ್ಲವೆಂದು ತಿಳಿದು, ಕೇವಲ ಪಂಡಿತನ ಹಾಗೆ ನಟಿಸಿ, ನಿಮಗೆ ಎಚ್ಚರಿಸುವುದಕ್ಕೋಸ್ಕರವಾಗಿ ಹಾಗೆ ಕೇಳಿದೆ. ಈ ಕಾಲದಲ್ಲಿ ದೊಡ್ಡವರ ಸಂಗಡ ಸಂಬಂಧವನ್ನು ಬೆಳಸಬೇಕಾದರೆ ಅದು ಮನೆಯಲ್ಲಿ ಇದ್ದೇ ಇರಬೇಕು. ಇಲ್ಲ ದಿದ್ದರೆ ಗೌರವವೇ ಇಲ್ಲವೆಂದನು, - ಈ ಮಾತು ನಮ್ಮ ತಂದೆಗೆ ಚೆನ್ನಾಗಿ ತೋರಲಿಲ್ಲವಾಗಿ ಅವನು ಸುಮ್ಮನ್ನಿದ್ದು ಬಿಟ್ಟನು, ಹೀರಾಲಾಲನು ಮದುವೆಯಲ್ಲಿಯೂ ಮದ್ಯಪಾನದಲ್ಲಿಯೂ ದೇಶದ ಉನ್ನ ತಿಗೆ ಎಗ್ಯಾಂಪಲ್ಸೆಟ್ ಮಾಡುವುದಕ್ಕೆ ಅವಕಾಶ ಸಿಕ್ಕದೆ ಕ್ಷುಣ್ಣನಾಗಿ ಹೊರಟು ಹೋದನು. --- -- ಆರನೆಯ ಪರಿಚ್ಛೇದ. ಲಗ್ನವು ಬಹಳ ಹತ್ತಿರವಾಯಿತು, ಒಂದೇದಿನ ಉಳಿಯಿತು. ಉಪಾಯವಿಲ್ಲ! ನಿಷ್ಮತಿಯಿಲ್ಲ ! ನಾಲ್ಕು ದಿಕ್ಕುಗಳಿಂದ ಉಕ್ಕುತ್ತಿರುವ ವಾರಿರಾಶಿಯು ಗರ್ಜಿಸಿ ಕೊಂಡು ಬರುತ್ತದೆ. ನಿಜವಾಗಿ ಮುಣುಗಿ ಹೋಗುವೆನು,