ಪುಟ:ರಮಾನಂದ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಸತೀಹಿತೈಷಿಣೀ , 10 ಗುಣವಂದ ಕಳುವರಲ್ಲದೆ | ಹಣಕಳುವರೆ, ಕಳೆದ ಬಳಿಕ ಚೂಡಾರತ್ನಾ | ಸೌಮ್ಯ:- (ಸಂತೋಷದಿಂದ) ಆಯಾ, ಸುಮುಖನೆ ಸತ್ತುರು ಷರ ಸಂಗತಿಯೇ ಸರ್ವಾರ್ಥಸಿದ್ದಿ ಪದವೆಂದು ಬಲ್ಲ ವರಾಡುವರು. 5 ಆದುದರಿಂದ ಪ್ರಜ್ಞಾಶಾಲಿಯಾದ ನಮ್ಮ ರಮಾನಂದ ಕುಮಾರನ ಸಹವಾಸಲಾಭದಿಂದ, ನಾವೂ ಧನ್ಯರಾಗುವುದರಲ್ಲಿ ಸಂದೇಹವೇನು? ಹೇಗೆಂದರೆ ಕಂದು ಸಾರಗುಣಿಯೊಡನೆ ದುರ್ಗುಣಿ | ಸೇರಲ್ ಸಲೆಪೂಜ್ಯನಹನದೆಂತೆನೆಮುಡಿಯೊಳ್ | ಸೌರಭ್ಯ ಕುಸುಮಸಂಗದೆ | ನಾರುಂಸುವಂತೆ ಸುಗುಣರತ್ನಕರಂಡಾ | ಇದೇ ಸಾಕಾದ ಸಮಾಧಾನವಲ್ಲವೆ? ಸುಮುಖ:- ಅವೆಲ್ಲ ವೂ ಸರಿಯೆ; ಇರಲಿ, ( ರಮಾನಂದನನ್ನು ಕುರಿತು) ಆಯ್ಯಾ, ರಮಾನಂದ! ನಿನ್ನೆ, ನೀನು ನಿನ್ನ ಅಣ್ಣನಿಗೆ ಏನಾ 15 ದರೂ ಹಿತವನ್ನು ಹೇಳಿದೆಯೇನು? ರಮ:- ಹೇಳಿದೆನು-ಸೋಮಾರಿಗಳೊಡನಾಡಿ, ಕಾರವಾದ ವಿದ್ಯಾಧನವನ್ನು ಕಳೆದುಕೊಳ್ಳುವುದು ಸರಿಯಲ್ಲ ವು- ಎಂದು ಹೇಳಿ ದೆನು, ಏಕೆ? ಸುಮುಖ:- ಅದರಿಂದ ಆತನಿಗೆ ಆಗ್ರಹವುಂಟಾಗುವುದಿಲ್ಲವೆ? 20 ಹಾಗೇಕೆ ಹೇಳಿದೆ ? ರಮಾ:- (ಕಿರುನಗೆಯಿಂದ) ತಿಳಿದೇ ಇದೆಯಷ್ಟ, “ಖಂಡಿತ ವಾದಿ ಲೋಕವಿರೋಧಿ' ಎಂಬುದು, ಸಾರಾಸಾರ ವಿವೇಚನೆಯುಳ್ಳ ವನಿಗೆ ನನ್ನ ನುಡಿಯಿಂದ ಆಗ್ರಹವೆಳ್ಳಷ್ಟೂ ಉಂಟಾಗುವುದಿಲ್ಲ. ಒಂದುವೇಳೆ ಆತನು ವಿವೇಕವನ್ನು ಬಿಟ್ಟು ಕೋಪಿಸಿಕೊಂಡರೆ, ನನ್ನ 25 ನ್ನು ಏನು ಮಾಡಬಲ್ಲ ನು?