ಪುಟ:ರಮಾನಂದ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಸತೀಹಿತ್ಯಹಿಣಿ ನಳ:- ಹಾಗಯೇ ಊಹಿಸಿರಬಹುದು, ಆದರೆ, ಆತನು ಮುಖ್ಯ ಪಾಠವನ್ನು ಎಂದರೆ- ಇಂದಿನ ನಿಯಮಿತ ಕಾರ್ಯವನ್ನು ಹೃದ್ಗತ ಮತ್ತು ಕಂಠಪಾಠ ಮಾಡಿಕೊಂಡಿದ್ದರೋ ? , ಅದರಿಂದ ನಮ್ಮ ಪ್ರಯತ್ನಕ್ಕೆ ಆತ೦ಕವಲ್ಲ ವೋ ? 5 ರವಿ:- ಅಲ್ಲದ ಸಲ್ಲದ ಸಂದೇಹಗಳನ್ನು ಕಟ್ಟಿಕೊಂಡು ಹಂಗಸರಂತ ಹಲುಬುವುದು ನಮ್ಮ ಕೆಲಸವಲ್ಲ. ಹಾಗೂ ಒಂದು ವೇಳೆ, ಅದರಿಂದ ತಪ್ಪಿಸಿಕೊಂಡ ರೂ ಉಳಿದ ಉಪಾಯಗಳಿಗಾದರ ಬಲಿ ಬೀಳಲೇಬೇಕು. ನಳ:- ಆದರೂ, ಪ್ರಬಲಸಹಾಯಸಂ ಪತ್ತಿಯ ಸಕ್ಷದೃಷ್ಟಿ 10 ಗಳಾದ ಸಹಾಧ್ಯಾಯಿಗಳ ಬೆಂಬಲವೂ ಇರುವಾಗ, ನನ್ನ ಕೃತಿ ಸಂಧಾನಕ್ಕೆ ಜಯವಾಗುವದೆಂದು ಹೇಳಲಾಗುವದಿಲ್ಲ. ರವಿ:-ನಿನ್ನ ಅಭಿಪ್ರಾಯವೂ ಸಹಜವೇಸರಿ, ಅದಕ್ಕೆಂದೇ ಪ್ರಬಲಸಹಾಯ ಸಂಪತ್ತಿಗಳಿಂದ ಅವನನ್ನು ಪ್ರತ್ಯೇಕಿಸುವಂತೆ ಮಾ ಡಲು, ಹಲವು ಮಾಟಗಳನ್ನು ಕಲ್ಪಿಸಿಟ್ಟು ಬಂದಿರುವುದು. 15 ( ತೆರೆಯಲ್ಲಿ ) ನಡೆಯಿರಿ, ನಡೆಯಿರಿ, ಗುರುಗಳು ಬರುವವೇಳೆಯಾಗು ತಿದೆ. ಕಳಿಂಗ:-ಇದೊ, ಬಂದನಪ್ಪ ಮಹಾರಾಯ! ಏನು ಇವನ ಹೆಚ್ಚುಗಾರಿಕೆಯೋ ? ಎಷ್ಟರ ಹೆಮ್ಮೆಯೋ ? ನೋಡಿ ಹೇಳಿ ಮುಗಿ ಸುವಂತಿಲ್ಲ. 20 ರವಿ:-ಆಗಲಿ, ಆಗಲಿ, ಎಷ್ಟು ದಿನಗಳ ಹಾರಾಟವೋ ನೋಡುವ ಈವರೆಗೂ ಅವನ ಕಡೆಯಲ್ಲಿ ದೈವಬಲವಿತ್ತು. ಈಗ ಆತನ ದುರಭಿಮಾನದಿಂದ ದೈವಬಲವು ಅವನನ್ನು ಬಿಟ್ಟು ಕಾಲಬಲ ದಲ್ಲಿ ಸೇರಿ, ನಮ್ಮ ಕಡೆಯಲ್ಲಿ ರುವುದು, ಕಳಿಂಗ:- ಹೂಂ, ಇನ್ನು ತಡೆಯಿರಿ, ಅವರು ಬಂದರು. 25 ( ಸಹಾಧ್ಯಾಯಿಗಳೊಡನೆ ರಮಾನಂದನ ಪ್ರವೇಶ.)